<p><strong>ಅಗರ್ತಲಾ</strong>: ತ್ರಿಪುರಾದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಟಿಪ್ರಾ ಮೋಥಾ ಪಕ್ಷವು ಸೇರಿದ್ದು, ಪಕ್ಷದ ನಾಯಕ ಅನಿಮೇಶ್ ದೆಬ್ಬರ್ಮಾ, ಶಾಸಕ ಬ್ರಿಶಕೇತು ದೆಬ್ಬರ್ಮಾ ಗುರುವಾರ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.</p>.<p>ಇದೇ ವೇಳೆ ತ್ರಿಪುರಾ ಬುಡಕಟ್ಟು ವಲಯದ ಸ್ವಾಯತ್ತ ಜಿಲ್ಲಾ ಮಂಡಳಿ (ಟಿಟಿಎಎಡಿಸಿ) ವ್ಯಾಪ್ತಿಯ ಪ್ರದೇಶಗಳನ್ನು ಸೇರಿಸಿ ಪ್ರತ್ಯೇಕ ರಾಜ್ಯ ಸ್ಥಾಪಿಸಬೇಕು ಎಂಬ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದೂ ಪಕ್ಷ ಸ್ಪಷ್ಟಪಡಿಸಿದೆ.</p>.<p>ಟಿಪ್ರಾ ಮೋಥಾ, ತ್ರಿಪುರಾ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ನವದೆಹಲಿಯಲ್ಲಿ ನಡೆದ ತ್ರಿಪಕ್ಷೀಯ ಒಪ್ಪಂದದ ಹಿಂದೆಯೇ ಈ ರಾಜಕೀಯ ಬೆಳವಣಿಗೆ ನಡೆದಿದೆ.</p>.<p>ಮಾರ್ಚ್ 2ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತಿಯಯಲ್ಲಿ ಒಪ್ಪಂದವಾಗಿತ್ತು. ಇದರ ಪ್ರಕಾರ, ತ್ರಿಪುರಾದ ಬುಡಕಟ್ಟು ಜನರ ಇತಿಹಾಸ, ಭೂಮಿ, ರಾಜಕೀಯ ಹಕ್ಕುಗಳು, ಆರ್ಥಿಕ ಪ್ರಗತಿ, ಭಾಷೆ ರಕ್ಷಣೆ ಕುರಿತ ಬೇಡಿಕೆಗಳಿಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವುದು ಇದರ ಉದ್ದೇಶವಾಗಿತ್ತು.</p>.<p>ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ಮಾತನಾಡಿದ ಅನಿಮೇಶ್ ದೆಬ್ಬರ್ಮಾ ಅವರು, ಪಕ್ಷ ತನ್ನ ಗುರಿ ಸಾಧನೆಗೆ ಒತ್ತು ನೀಡಲಿದೆ. ಪ್ರತ್ಯೇಕ ರಾಜ್ಯ ಕುರಿತ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಗರ್ತಲಾ</strong>: ತ್ರಿಪುರಾದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಟಿಪ್ರಾ ಮೋಥಾ ಪಕ್ಷವು ಸೇರಿದ್ದು, ಪಕ್ಷದ ನಾಯಕ ಅನಿಮೇಶ್ ದೆಬ್ಬರ್ಮಾ, ಶಾಸಕ ಬ್ರಿಶಕೇತು ದೆಬ್ಬರ್ಮಾ ಗುರುವಾರ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.</p>.<p>ಇದೇ ವೇಳೆ ತ್ರಿಪುರಾ ಬುಡಕಟ್ಟು ವಲಯದ ಸ್ವಾಯತ್ತ ಜಿಲ್ಲಾ ಮಂಡಳಿ (ಟಿಟಿಎಎಡಿಸಿ) ವ್ಯಾಪ್ತಿಯ ಪ್ರದೇಶಗಳನ್ನು ಸೇರಿಸಿ ಪ್ರತ್ಯೇಕ ರಾಜ್ಯ ಸ್ಥಾಪಿಸಬೇಕು ಎಂಬ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದೂ ಪಕ್ಷ ಸ್ಪಷ್ಟಪಡಿಸಿದೆ.</p>.<p>ಟಿಪ್ರಾ ಮೋಥಾ, ತ್ರಿಪುರಾ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ನವದೆಹಲಿಯಲ್ಲಿ ನಡೆದ ತ್ರಿಪಕ್ಷೀಯ ಒಪ್ಪಂದದ ಹಿಂದೆಯೇ ಈ ರಾಜಕೀಯ ಬೆಳವಣಿಗೆ ನಡೆದಿದೆ.</p>.<p>ಮಾರ್ಚ್ 2ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತಿಯಯಲ್ಲಿ ಒಪ್ಪಂದವಾಗಿತ್ತು. ಇದರ ಪ್ರಕಾರ, ತ್ರಿಪುರಾದ ಬುಡಕಟ್ಟು ಜನರ ಇತಿಹಾಸ, ಭೂಮಿ, ರಾಜಕೀಯ ಹಕ್ಕುಗಳು, ಆರ್ಥಿಕ ಪ್ರಗತಿ, ಭಾಷೆ ರಕ್ಷಣೆ ಕುರಿತ ಬೇಡಿಕೆಗಳಿಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವುದು ಇದರ ಉದ್ದೇಶವಾಗಿತ್ತು.</p>.<p>ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ಮಾತನಾಡಿದ ಅನಿಮೇಶ್ ದೆಬ್ಬರ್ಮಾ ಅವರು, ಪಕ್ಷ ತನ್ನ ಗುರಿ ಸಾಧನೆಗೆ ಒತ್ತು ನೀಡಲಿದೆ. ಪ್ರತ್ಯೇಕ ರಾಜ್ಯ ಕುರಿತ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>