ಈ ಕುರಿತು ಮಂಗಳವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ತಮ್ಮದೇ ಕೆಲ ಮಿತಿಗಳು, ಆತಂಕದ ಹಿನ್ನೆಲೆಯಲ್ಲಿ ನಾನು ಸುಪ್ರೀಂ ಕೋರ್ಟ್ನ ಆಂತರಿಕ ಸಮಿತಿಯ ವಿಚಾರಣೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಈ ಸಮಿತಿಯಿಂದ ನನಗೆ ನ್ಯಾಯ ಸಿಗುವುದಿಲ್ಲ ಎಂದು ನಾನು ಭಾವಿಸಿದ್ದೆನೆ. ಆದ್ದರಿಂದಲೇ ವಿಚಾರಣೆಯಿಂದ ನಾನು ದೂರ ಉಳಿಯುತ್ತಿದ್ದೇನೆ,’ ಎಂದು ಅವರು ತಿಳಿಸಿದ್ದಾರೆ.