'16 ಅಥವಾ 17 ವರ್ಷದ ಯುವಕರು ಮೆರವಣಿಗೆಯಲ್ಲಿ ಖಡ್ಗಗಳು ಮತ್ತು ಪಿಸ್ತೂಲುಗಳನ್ನು ಝಳಪಿಸುತ್ತಾರೆ ಎಂದರೆ, ಇದು ಡಾ. ಅಂಬೇಡ್ಕರ್ ಅಥವಾ ಸಮಾಜ ಸುಧಾರಕ ಬಸವಣ್ಣ ಅವರು ಕಾಣಬಯಸಿದ್ದ ದೇಶವಲ್ಲ. ಖಡ್ಗ, ಪಿಸ್ತೂಲುಗಳನ್ನು ಝಳಪಿಸುವುದನ್ನು ಕಂಡು ನನ್ನ ಮನಸ್ಸು ದುಃಖಿತವಾಗುತ್ತದೆ. ಆ ಯುವಕರಿಗೆ ಯಾವುದೇ ಕನಸುಗಳಿಲ್ಲ. ಯಾವ ರೀತಿಯ ಭವಿಷ್ಯ ಅವರಿಗಿರುತ್ತದೆ ಎಂಬ ಅರಿವೂ ಅವರಿಗಿಲ್ಲ. ಅವರನ್ನು ಪ್ರಚೋದಿಸಿರುವವರು ಯಾರು? ನಾವೇಕೆ ಈ ಬಗ್ಗೆ ಮೌನವಾಗಿದ್ದೇವೆ’ ಎಂದೂ ಅವರು ಕೇಳಿದರು.