ಕನಿಷ್ಠ ವೇತನ ತಿಂಗಳಿಗೆ ₹26,000, ಎಲ್ಲಾ ಕಾರ್ಮಿಕರಿಗೆ₹ 10,000 ಪಿಂಚಣಿ ಖಾತರಿಪಡಿಸುವುದು, ಅಗ್ನಿಪಥ್ ಯೋಜನೆ ರದ್ದುಗೊಳಿಸುವುದು, ಸ್ವಾಮಿನಾಥನ್ ಆಯೋಗದ ಸಲಹೆಯಂತೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಪಡಿಸುವುದು ಮತ್ತು ಬಡ, ಮಧ್ಯಮ ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಒಂದು ಬಾರಿಯ ಸಾಲ ಮನ್ನಾ ಸೇರಿದಂತೆ 13 ಅಂಶಗಳ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ.