<p><strong>ಜೈಪುರ</strong>: ‘ಜಾಗತಿಕ ಸಾಮರಸ್ಯ ಹಾಗೂ ಏಳ್ಗೆಗಾಗಿ ಭಾರತ ಧೃಢನಿಶ್ಚಯದಿಂದ ಬದ್ಧವಾಗಿದ್ದು, ಇಡೀ ಜಗತ್ತಿಗೆ ಈಗ ಭಾರತದ ನೈಜ ಶಕ್ತಿಯ ಪರಿಚಯವಾಗಿದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ. </p>.<p>ಜೈಪುರದ ಹರಮಾಡಾದಲ್ಲಿರುವ ರವಿನಾಥ ಮಹಾರಾಜ್ ಆಶ್ರಮದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಾರತವು ಎಂದಿಗೂ ಯಾರನ್ನೂ ದ್ವೇಷಿಸಿಲ್ಲ. ಆದರೆ, ನಿಮ್ಮಲ್ಲಿ ಅಧಿಕಾರವಿದ್ದರೆ, ಜಗತ್ತು ದ್ವೇಷ ಹಾಗೂ ಪ್ರೀತಿಯ ಭಾಷೆಯನ್ನು ಅರ್ಥೈಸಿಕೊಳ್ಳುತ್ತದೆ’ ಎಂದು ಹೇಳಿದ್ದಾರೆ.</p>.<p class="title">‘ಇದು ಜಗತ್ತಿನ ಸ್ವಭಾವವಾಗಿದೆ. ಇದು ಯಾವತ್ತಿಗೂ ಬದಲಾಗುವುದಿಲ್ಲ. ಜಗತ್ತಿನ ಒಳಿತಿಗಾಗಿ ನಾವು ಮತ್ತಷ್ಟು ಪ್ರಬಲರಾಗಬೇಕು, ಆಗಲೇ ನಮ್ಮ ಸಾಮರ್ಥ್ಯವನ್ನು ಜಗತ್ತು ಪರಿಗಣಿಸುತ್ತದೆ’ ಎಂದು ತಿಳಿಸಿದ್ದಾರೆ.</p>.<p class="title">‘ಜಗತ್ತಿನ ಕಲ್ಯಾಣವೇ ನಮ್ಮ ಧರ್ಮವಾಗಿದೆ. ಅದರಲ್ಲೂ ವಿಶೇಷವಾಗಿ ಹಿಂದೂಧರ್ಮದ ಆದ್ಯ ಕರ್ತವ್ಯವಾಗಿದೆ’ ಎಂದು ಭಾಗವತ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೈಪುರ</strong>: ‘ಜಾಗತಿಕ ಸಾಮರಸ್ಯ ಹಾಗೂ ಏಳ್ಗೆಗಾಗಿ ಭಾರತ ಧೃಢನಿಶ್ಚಯದಿಂದ ಬದ್ಧವಾಗಿದ್ದು, ಇಡೀ ಜಗತ್ತಿಗೆ ಈಗ ಭಾರತದ ನೈಜ ಶಕ್ತಿಯ ಪರಿಚಯವಾಗಿದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ. </p>.<p>ಜೈಪುರದ ಹರಮಾಡಾದಲ್ಲಿರುವ ರವಿನಾಥ ಮಹಾರಾಜ್ ಆಶ್ರಮದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಾರತವು ಎಂದಿಗೂ ಯಾರನ್ನೂ ದ್ವೇಷಿಸಿಲ್ಲ. ಆದರೆ, ನಿಮ್ಮಲ್ಲಿ ಅಧಿಕಾರವಿದ್ದರೆ, ಜಗತ್ತು ದ್ವೇಷ ಹಾಗೂ ಪ್ರೀತಿಯ ಭಾಷೆಯನ್ನು ಅರ್ಥೈಸಿಕೊಳ್ಳುತ್ತದೆ’ ಎಂದು ಹೇಳಿದ್ದಾರೆ.</p>.<p class="title">‘ಇದು ಜಗತ್ತಿನ ಸ್ವಭಾವವಾಗಿದೆ. ಇದು ಯಾವತ್ತಿಗೂ ಬದಲಾಗುವುದಿಲ್ಲ. ಜಗತ್ತಿನ ಒಳಿತಿಗಾಗಿ ನಾವು ಮತ್ತಷ್ಟು ಪ್ರಬಲರಾಗಬೇಕು, ಆಗಲೇ ನಮ್ಮ ಸಾಮರ್ಥ್ಯವನ್ನು ಜಗತ್ತು ಪರಿಗಣಿಸುತ್ತದೆ’ ಎಂದು ತಿಳಿಸಿದ್ದಾರೆ.</p>.<p class="title">‘ಜಗತ್ತಿನ ಕಲ್ಯಾಣವೇ ನಮ್ಮ ಧರ್ಮವಾಗಿದೆ. ಅದರಲ್ಲೂ ವಿಶೇಷವಾಗಿ ಹಿಂದೂಧರ್ಮದ ಆದ್ಯ ಕರ್ತವ್ಯವಾಗಿದೆ’ ಎಂದು ಭಾಗವತ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>