ಚಂದ್ರಬಾಬು ನಾಯ್ಡು ಅವರು, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಲೋಕತಾಂತ್ರಿಕ ಜನತಾದಳ ನಾಯಕ ಶರದ್ ಯಾದವ್, ಎಎಪಿ ನಾಯಕ ಸಂಜಯ್ ಸಿಂಗ್, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭಾನುವಾರ ಭೇಟಿ ಮಾಡಿ ಚರ್ಚಿಸಿದರು. ಕಾಂಗ್ರೆಸ್ನ ಸಂಖ್ಯಾಬಲ 100ರ ಗಡಿ ದಾಟದೇ ಇದ್ದರೆ ಮಾಯಾವತಿ ಅವರು ಪ್ರಧಾನಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಕಾರಣ ಮಾಯಾವತಿ –ಸೋನಿಯಾ ಅವರ ಸೋಮವಾರದ ಭೇಟಿ ಕುತೂಹಲ ಕೆರಳಿಸಿದೆ.