<p><strong>ಹೈದರಾಬಾದ್ (ಪಿಟಿಐ): </strong>ಅಣ್ಣಾ ಹಜಾರೆ ಅವರನ್ನು ಗಾಂಧೀಜಿ ತತ್ವಗಳ ಚೌಕಟ್ಟಿನಲ್ಲಿಟ್ಟು ಪರಾಮರ್ಶಿಸುವುದು ಸರಿಯಲ್ಲ ಎಂದು ಮಹಾತ್ಮ ಗಾಂಧೀಜಿ ಅವರ ಮರಿ ಮೊಮ್ಮಗ ತುಷಾರ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.<br /> <br /> ಭಾನುವಾರ ಇಲ್ಲಿನ ಮಹಾತ್ಮ ಗಾಂಧಿ ಸ್ಮಾರಕ ಭವನದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, `ಅಣ್ಣಾ ಹಜಾರೆ ಇವತ್ತು ತಾವು ನಡೆಸುತ್ತಿರುವ ಚಳವಳಿಯನ್ನು ಮುನ್ನಡೆಸಿಕೊಂಡು ಹೋಗುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅದಕ್ಕೆ ಗಾಂಧೀಜಿ ತತ್ವಗಳ ಲೇಪನ ಸೂಕ್ತವಲ್ಲ. ಆದಾಗ್ಯೂ ಅವರ ಚಳವಳಿ ದೇಶದಲ್ಲಿನ ಭ್ರಷ್ಟಾಚಾರವನ್ನು ಕೊನೆಯಾಗಿಸುವಲ್ಲಿ ಯಶಸ್ವಿಯಾಗುತ್ತದೆ ಎಂಬುದು ತಮಗೆ ಅನುಮಾನದ ಸಂಗತಿ~ ಎಂದು ಹೇಳಿದರು.<br /> <br /> `ಕೇವಲ ಕಾನೂನು ರೂಪಿಸಿದ ಮಾತ್ರಕ್ಕೆ ದೇಶದಲ್ಲಿನ ಭ್ರಷ್ಟಾಚಾರ ಕೊನೆಯಾಗುವುದಿಲ್ಲ~ ಎಂದ ಅವರು, `ಎಲ್ಲಿಯತನಕ ನಾವು ಲಂಚವನ್ನು ಕೊಡುವುದಿಲ್ಲ ಮತ್ತು ಪಡೆಯುವುದಿಲ್ಲ ಎಂದು ತೀರ್ಮಾನ ಮಾಡುತ್ತೇವೆಯೊ ಅಲ್ಲಿಯವರೆವಿಗೂ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಲೇ ಇರುತ್ತದೆ~ ಎಂದು ತಿಳಿಸಿದರು.<br /> <br /> `ಪ್ರಪಂಚ ಬದಲಾಗಬೇಕು ಎಂದು ಬಯಸುವ ಪ್ರತಿಯೊಬ್ಬರೂ ಮೊದಲು ಸ್ವಯಂ ಬದಲಾವಣೆಗೆ ಒಳಪಡಬೇಕು ಎಂಬ ಬಾಪೂಜಿಯವರ ಆಶಯ ಇಂದು ಹೆಚ್ಚು ಪ್ರಸ್ತುತವಾಗಿದೆ. ನಾವೆಲ್ಲ ಇವತ್ತು ನೈತಿಕವಾಗಿ ಎಷ್ಟು ಭ್ರಷ್ಟರಾಗಿದ್ದೇವೆ ಎಂಬುದರತ್ತ ಹಜಾರೆ ಕನ್ನಡಿ ಹಿಡಿಯುವ ಅವಶ್ಯಕತೆ ಇದೆ~ ಎಂದು ತುಷಾರ ಗಾಂಧಿ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್ (ಪಿಟಿಐ): </strong>ಅಣ್ಣಾ ಹಜಾರೆ ಅವರನ್ನು ಗಾಂಧೀಜಿ ತತ್ವಗಳ ಚೌಕಟ್ಟಿನಲ್ಲಿಟ್ಟು ಪರಾಮರ್ಶಿಸುವುದು ಸರಿಯಲ್ಲ ಎಂದು ಮಹಾತ್ಮ ಗಾಂಧೀಜಿ ಅವರ ಮರಿ ಮೊಮ್ಮಗ ತುಷಾರ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.<br /> <br /> ಭಾನುವಾರ ಇಲ್ಲಿನ ಮಹಾತ್ಮ ಗಾಂಧಿ ಸ್ಮಾರಕ ಭವನದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, `ಅಣ್ಣಾ ಹಜಾರೆ ಇವತ್ತು ತಾವು ನಡೆಸುತ್ತಿರುವ ಚಳವಳಿಯನ್ನು ಮುನ್ನಡೆಸಿಕೊಂಡು ಹೋಗುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅದಕ್ಕೆ ಗಾಂಧೀಜಿ ತತ್ವಗಳ ಲೇಪನ ಸೂಕ್ತವಲ್ಲ. ಆದಾಗ್ಯೂ ಅವರ ಚಳವಳಿ ದೇಶದಲ್ಲಿನ ಭ್ರಷ್ಟಾಚಾರವನ್ನು ಕೊನೆಯಾಗಿಸುವಲ್ಲಿ ಯಶಸ್ವಿಯಾಗುತ್ತದೆ ಎಂಬುದು ತಮಗೆ ಅನುಮಾನದ ಸಂಗತಿ~ ಎಂದು ಹೇಳಿದರು.<br /> <br /> `ಕೇವಲ ಕಾನೂನು ರೂಪಿಸಿದ ಮಾತ್ರಕ್ಕೆ ದೇಶದಲ್ಲಿನ ಭ್ರಷ್ಟಾಚಾರ ಕೊನೆಯಾಗುವುದಿಲ್ಲ~ ಎಂದ ಅವರು, `ಎಲ್ಲಿಯತನಕ ನಾವು ಲಂಚವನ್ನು ಕೊಡುವುದಿಲ್ಲ ಮತ್ತು ಪಡೆಯುವುದಿಲ್ಲ ಎಂದು ತೀರ್ಮಾನ ಮಾಡುತ್ತೇವೆಯೊ ಅಲ್ಲಿಯವರೆವಿಗೂ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಲೇ ಇರುತ್ತದೆ~ ಎಂದು ತಿಳಿಸಿದರು.<br /> <br /> `ಪ್ರಪಂಚ ಬದಲಾಗಬೇಕು ಎಂದು ಬಯಸುವ ಪ್ರತಿಯೊಬ್ಬರೂ ಮೊದಲು ಸ್ವಯಂ ಬದಲಾವಣೆಗೆ ಒಳಪಡಬೇಕು ಎಂಬ ಬಾಪೂಜಿಯವರ ಆಶಯ ಇಂದು ಹೆಚ್ಚು ಪ್ರಸ್ತುತವಾಗಿದೆ. ನಾವೆಲ್ಲ ಇವತ್ತು ನೈತಿಕವಾಗಿ ಎಷ್ಟು ಭ್ರಷ್ಟರಾಗಿದ್ದೇವೆ ಎಂಬುದರತ್ತ ಹಜಾರೆ ಕನ್ನಡಿ ಹಿಡಿಯುವ ಅವಶ್ಯಕತೆ ಇದೆ~ ಎಂದು ತುಷಾರ ಗಾಂಧಿ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>