<p>ಹೈದರಾಬಾದ್(ಐಎಎನ್ಎಸ್): ಪಾಕಿಸ್ತಾನದ ಕರಾಚಿ ವಿಮಾನನಿಲ್ದಾಣ ದಲ್ಲಿ ಮಂಗಳವಾರ ರಾತ್ರಿ ವಾಯು ಸಂಚಾರ ನಿಯಂತ್ರಣ ಅಧಿಕಾರಿಗಳಿಂದ (ಎಟಿಸಿ) ನಡೆದ ಅಚಾತುರ್ಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಭಾರತೀಯ ವಿಮಾನ ನಿಲ್ದಾಣ ಗಳ ಪ್ರಾಧಿಕಾರದ ಅಧ್ಯಕ್ಷ ಅಲೋಕ್ ಸಿನ್ಹಾ ಹೇಳಿದ್ದಾರೆ.<br /> <br /> ಈ ಘಟನೆಯನ್ನು ಪಾಕಿಸ್ತಾನ ಸರ್ಕಾರದ ಗಮನಕ್ಕೆ ರಾಜತಾಂತ್ರಿಕ ಮಾರ್ಗದ ಮೂಲಕ ತರಲಾಗುವುದು ಎಂದು ನಾಗರಿಕ ವಿಮಾನಯಾನ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ಲಂಡನ್ ಹಾಗೂ ಮುಂಬೈ ನಡುವಿನ ಏರ್ ಇಂಡಿಯಾದ ವಿಮಾನಕ್ಕೆ ಕರಾಚಿಯ ವಾಯು ಸಂಚಾರ ನಿಯಂತ್ರಣ ಅಧಿಕಾರಿಗಳು ತಪ್ಪು ಸಂಕೇತ ನೀಡಿದ್ದರು. ಇದರಿಂದಾಗಿ ವಿಮಾನದ ದಾರಿ ಬದಲಾಗಿ ಅಪಘಾತವಾಗುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಯಾವುದೇ ದುರ್ಘಟನೆ ನಡೆಯಲಿಲ್ಲ.<br /> <br /> ತಪ್ಪು ಸಂಕೇತ ನೀಡಿದ್ದರಿಂದ ವಿಮಾನದ ಪೈಲಟ್ಗೆ ಮುಂಬೈ ಎಟಿಸಿಗೆ ಸಂಪರ್ಕ ಸಾಧಿಸಲಾಗಲಿಲ್ಲ. ಆ ನಂತರ ವಿಮಾನ ಅಹಮದಾಬಾದ್ನ ಎಟಿಸಿಗೆ ಸಂಪರ್ಕ ಸಾಧಿಸಿ ಸರಿಯಾದ ಮಾರ್ಗ ಕಂಡುಕೊಂಡಿತು.<br /> <br /> ‘ಇದೊಂದು ತುಂಭಾ ಗಂಭೀರವಾದ ತಪ್ಪು. ಈ ರೀತಿಯ ಘಟನೆ ಹಿಂದೆ ಎಂದೂ ನಡೆದಿಲ್ಲ’ ಎಂದು ಅಲೋಕ್ ಹೇಳಿದರು.<br /> <br /> ‘ನಾವೀಗ ಈ ಘಟನೆಯನ್ನು ಯಾವ ರೀತಿ ಪರಿಶೀಲನೆ ನಡೆಸಬೇಕು ಎಂಬ ಬಗ್ಗೆ ಚಿಂತನೆ ನಡೆಸಿದ್ದೇವೆ. ಇದು ಮತ್ತೊಮ್ಮೆ ನಡೆಯಬಾರದು’ ಎಂದು ಅವರು ಹೇಳಿದರು.<br /> <br /> ನಾಗರಿಕ ವಿಮಾನಯಾನ ಇಲಾಖೆ ಜಂಟಿ ಕಾರ್ಯದರ್ಶಿ ಜಿ.ಅಶೋಕ್್್್ ಬಾಬು ಮಾತನಾಡಿ, ಕರಾಚಿ ವಿಮಾನ ನಿಲ್ದಾಣದ ಎಟಿಸಿ ಅಧಿಕಾರಿಗಳು ವಿಮಾನ ಇಳಿಯುವ ವೇಳೆ ಯಾಕೆ ಖುಷಿಯಾಗಿದ್ದರು ಮತ್ತು ನಗುತ್ತಿದ್ದರು. ಯಾಕೆ ತಪ್ಪು ಸೂಚನೆ ನೀಡಿದ್ದಾರೆ ಎಂಬುದೂ ತಿಳಿದಿಲ್ಲ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೈದರಾಬಾದ್(ಐಎಎನ್ಎಸ್): ಪಾಕಿಸ್ತಾನದ ಕರಾಚಿ ವಿಮಾನನಿಲ್ದಾಣ ದಲ್ಲಿ ಮಂಗಳವಾರ ರಾತ್ರಿ ವಾಯು ಸಂಚಾರ ನಿಯಂತ್ರಣ ಅಧಿಕಾರಿಗಳಿಂದ (ಎಟಿಸಿ) ನಡೆದ ಅಚಾತುರ್ಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಭಾರತೀಯ ವಿಮಾನ ನಿಲ್ದಾಣ ಗಳ ಪ್ರಾಧಿಕಾರದ ಅಧ್ಯಕ್ಷ ಅಲೋಕ್ ಸಿನ್ಹಾ ಹೇಳಿದ್ದಾರೆ.<br /> <br /> ಈ ಘಟನೆಯನ್ನು ಪಾಕಿಸ್ತಾನ ಸರ್ಕಾರದ ಗಮನಕ್ಕೆ ರಾಜತಾಂತ್ರಿಕ ಮಾರ್ಗದ ಮೂಲಕ ತರಲಾಗುವುದು ಎಂದು ನಾಗರಿಕ ವಿಮಾನಯಾನ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ಲಂಡನ್ ಹಾಗೂ ಮುಂಬೈ ನಡುವಿನ ಏರ್ ಇಂಡಿಯಾದ ವಿಮಾನಕ್ಕೆ ಕರಾಚಿಯ ವಾಯು ಸಂಚಾರ ನಿಯಂತ್ರಣ ಅಧಿಕಾರಿಗಳು ತಪ್ಪು ಸಂಕೇತ ನೀಡಿದ್ದರು. ಇದರಿಂದಾಗಿ ವಿಮಾನದ ದಾರಿ ಬದಲಾಗಿ ಅಪಘಾತವಾಗುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಯಾವುದೇ ದುರ್ಘಟನೆ ನಡೆಯಲಿಲ್ಲ.<br /> <br /> ತಪ್ಪು ಸಂಕೇತ ನೀಡಿದ್ದರಿಂದ ವಿಮಾನದ ಪೈಲಟ್ಗೆ ಮುಂಬೈ ಎಟಿಸಿಗೆ ಸಂಪರ್ಕ ಸಾಧಿಸಲಾಗಲಿಲ್ಲ. ಆ ನಂತರ ವಿಮಾನ ಅಹಮದಾಬಾದ್ನ ಎಟಿಸಿಗೆ ಸಂಪರ್ಕ ಸಾಧಿಸಿ ಸರಿಯಾದ ಮಾರ್ಗ ಕಂಡುಕೊಂಡಿತು.<br /> <br /> ‘ಇದೊಂದು ತುಂಭಾ ಗಂಭೀರವಾದ ತಪ್ಪು. ಈ ರೀತಿಯ ಘಟನೆ ಹಿಂದೆ ಎಂದೂ ನಡೆದಿಲ್ಲ’ ಎಂದು ಅಲೋಕ್ ಹೇಳಿದರು.<br /> <br /> ‘ನಾವೀಗ ಈ ಘಟನೆಯನ್ನು ಯಾವ ರೀತಿ ಪರಿಶೀಲನೆ ನಡೆಸಬೇಕು ಎಂಬ ಬಗ್ಗೆ ಚಿಂತನೆ ನಡೆಸಿದ್ದೇವೆ. ಇದು ಮತ್ತೊಮ್ಮೆ ನಡೆಯಬಾರದು’ ಎಂದು ಅವರು ಹೇಳಿದರು.<br /> <br /> ನಾಗರಿಕ ವಿಮಾನಯಾನ ಇಲಾಖೆ ಜಂಟಿ ಕಾರ್ಯದರ್ಶಿ ಜಿ.ಅಶೋಕ್್್್ ಬಾಬು ಮಾತನಾಡಿ, ಕರಾಚಿ ವಿಮಾನ ನಿಲ್ದಾಣದ ಎಟಿಸಿ ಅಧಿಕಾರಿಗಳು ವಿಮಾನ ಇಳಿಯುವ ವೇಳೆ ಯಾಕೆ ಖುಷಿಯಾಗಿದ್ದರು ಮತ್ತು ನಗುತ್ತಿದ್ದರು. ಯಾಕೆ ತಪ್ಪು ಸೂಚನೆ ನೀಡಿದ್ದಾರೆ ಎಂಬುದೂ ತಿಳಿದಿಲ್ಲ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>