<p><strong>ನವದೆಹಲಿ (ಐಎಎನ್ಎಸ್):</strong> ಮಾರುವೇಷದ ಶಸ್ತ್ರಾಸ್ತ್ರ ಪೂರೈಕೆದಾರನಿಂದ ಲಂಚ ಸ್ವೀಕರಿಸಿದ್ದ ಪ್ರಕರಣದಲ್ಲಿ ಅಪರಾಧಿಯಾಗಿರುವ ಬಂಗಾರು ಲಕ್ಷ್ಮಣ್ ಅವರಿಂದ ಬಿಜೆಪಿ ಅಂತರ ಕಾಯ್ದುಕೊಂಡಿದ್ದರೆ, ಇದು ಬಿಜೆಪಿ ನಿಜವಾದ ಮುಖವನ್ನು ಬಯಲುಗೊಳಿಸಿದೆ ಎಂದು ಕಾಂಗ್ರೆಸ್ ಪ್ರಹಾರ ಮಾಡಿದೆ.</p>.<p>`ಇದು ಬಂಗಾರು ಅವರಿಗೆ ಸಂಬಂಧಿಸಿದ ವೈಯಕ್ತಿಕ ಪ್ರಕರಣ. ನ್ಯಾಯಾಲಯ ತೀರ್ಪಿನಲ್ಲಿ ಅವರ ವೈಯಕ್ತಿಕ ವರ್ತನೆ ಬಗ್ಗೆ ತೀರ್ಪು ನೀಡಿದೆಯೇ ಹೊರತು ಪಕ್ಷದ ಕುರಿತಾಗಿ ಅಲ್ಲ~ ಎಂದು ಬಿಜೆಪಿ ವಕ್ತಾರ ಶಾ ನವಾಜ್ ಹುಸೇನ್ ಸಮರ್ಥಿಸಿಕೊಂಡಿದ್ದಾರೆ.</p>.<p>`ಯಾವ ಸಾಕ್ಷ್ಯಾಧಾರವೂ ಇಲ್ಲದ 25 ವರ್ಷಗಳ ಹಿಂದಿನ ಬೊಫೋರ್ಸ್ ಪ್ರಕರಣವನ್ನು ಕೆದಕಲು ಬಿಜೆಪಿ ಸದಾ ತುದಿಗಾಲಲ್ಲಿ ನಿಂತಿರುತ್ತದೆ. ಅದೇ ರೀತಿ ಗುರುವಾರ ಸದನದಲ್ಲಿ, ತೆಹೆಲ್ಕಾ ಪ್ರಕರಣದ ತನಿಖೆಗೂ ನ್ಯಾಯಾಂಗ ಆಯೋಗ ರಚಿಸಲು ಒತ್ತಾಯಿಸಿದ್ದರೆ ಅದನ್ನು ಪ್ರಾಮಾಣಿಕ ಪಕ್ಷವೆಂದು ಒಪ್ಪುತ್ತಿದ್ದೆ~ ಎಂದು ಕೇಂದ್ರ ಸಚಿವ ಕಪಿಲ್ ಸಿಬಲ್ ಛೇಡಿಸಿದರು. ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕೆಂಬುದನ್ನು ಈ ತೀರ್ಪು ಸೂಚಿಸುತ್ತದೆ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಅವರು ಹೇಳಿದರು.</p>.<p>ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ಪ್ರತಿಕ್ರಿಯಿಸಿ, `ಇದು ನಮ್ಮ ರಕ್ಷಣಾ ವ್ಯವಸ್ಥೆ ಕುಲಗೆಟ್ಟಿರುವುದನ್ನು ತೋರಿಸುತ್ತದೆ~ ಎಂದರು.</p>.<p><strong>ಪ್ರಕರಣದ ಹೆಜ್ಜೆ ಜಾಡು</strong></p>.<p><strong>ಡಿ.23, 2000- ಜ.7, 2001:</strong> ರಹಸ್ಯ ಕಾರ್ಯಾಚರಣೆ ಭಾಗವಾಗಿ ಶಸ್ತ್ರಾಸ್ತ್ರ ಪೂರೈಕೆ ದಲ್ಲಾಳಿಯಂತೆ ಹೋಗಿದ್ದ ಮಾರುವೇಷದ ಪತ್ರಕರ್ತನಿಂದ ಬಂಗಾರು ಲಕ್ಷ್ಮಣ್ ಜತೆ ಎಂಟು ಬಾರಿ ಚರ್ಚೆ</p>.<p><strong>2001ರ ಜನವರಿ ಮೊದಲ ವಾರ:</strong> ಬಂಗಾರು ಲಕ್ಷ್ಮಣ್ ಲಂಚಕ್ಕೆ ಕೈಯೊಡ್ಡಿದ್ದು</p>.<p><strong>ಮಾರ್ಚ್ 13, 2001:</strong> ಶಸ್ತ್ರಾಸ್ತ್ರ ದಲ್ಲಾಳಿಯಿಂದ 1 ಲಕ್ಷ ರೂಪಾಯಿ ಲಂಚ ಪಡೆದದ್ದು</p>.<p><strong>ಜುಲೈ 18, 2006:</strong> ಸಿಬಿಐ ನಿಂದ ಆರೋಪಪಟ್ಟಿ ಸಲ್ಲಿಕೆ</p>.<p><strong>ಮೇ 2, 2001:</strong> ಬಂಗಾರು ವಿರುದ್ಧ ದೋಷಾರೋಪ</p>.<p><strong>ಏ.2, 2012:</strong> ತೀರ್ಪು ಕಾಯ್ದಿರಿಸಿದ್ದ ದೆಹಲಿ ಕೋರ್ಟ್</p>.<p><strong>ಏ.27, 2012:</strong> ತೀರ್ಪು ಪ್ರಕಟ; ತಿಹಾರ್ ಜೈಲಿಗೆ ಬಂಗಾರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಐಎಎನ್ಎಸ್):</strong> ಮಾರುವೇಷದ ಶಸ್ತ್ರಾಸ್ತ್ರ ಪೂರೈಕೆದಾರನಿಂದ ಲಂಚ ಸ್ವೀಕರಿಸಿದ್ದ ಪ್ರಕರಣದಲ್ಲಿ ಅಪರಾಧಿಯಾಗಿರುವ ಬಂಗಾರು ಲಕ್ಷ್ಮಣ್ ಅವರಿಂದ ಬಿಜೆಪಿ ಅಂತರ ಕಾಯ್ದುಕೊಂಡಿದ್ದರೆ, ಇದು ಬಿಜೆಪಿ ನಿಜವಾದ ಮುಖವನ್ನು ಬಯಲುಗೊಳಿಸಿದೆ ಎಂದು ಕಾಂಗ್ರೆಸ್ ಪ್ರಹಾರ ಮಾಡಿದೆ.</p>.<p>`ಇದು ಬಂಗಾರು ಅವರಿಗೆ ಸಂಬಂಧಿಸಿದ ವೈಯಕ್ತಿಕ ಪ್ರಕರಣ. ನ್ಯಾಯಾಲಯ ತೀರ್ಪಿನಲ್ಲಿ ಅವರ ವೈಯಕ್ತಿಕ ವರ್ತನೆ ಬಗ್ಗೆ ತೀರ್ಪು ನೀಡಿದೆಯೇ ಹೊರತು ಪಕ್ಷದ ಕುರಿತಾಗಿ ಅಲ್ಲ~ ಎಂದು ಬಿಜೆಪಿ ವಕ್ತಾರ ಶಾ ನವಾಜ್ ಹುಸೇನ್ ಸಮರ್ಥಿಸಿಕೊಂಡಿದ್ದಾರೆ.</p>.<p>`ಯಾವ ಸಾಕ್ಷ್ಯಾಧಾರವೂ ಇಲ್ಲದ 25 ವರ್ಷಗಳ ಹಿಂದಿನ ಬೊಫೋರ್ಸ್ ಪ್ರಕರಣವನ್ನು ಕೆದಕಲು ಬಿಜೆಪಿ ಸದಾ ತುದಿಗಾಲಲ್ಲಿ ನಿಂತಿರುತ್ತದೆ. ಅದೇ ರೀತಿ ಗುರುವಾರ ಸದನದಲ್ಲಿ, ತೆಹೆಲ್ಕಾ ಪ್ರಕರಣದ ತನಿಖೆಗೂ ನ್ಯಾಯಾಂಗ ಆಯೋಗ ರಚಿಸಲು ಒತ್ತಾಯಿಸಿದ್ದರೆ ಅದನ್ನು ಪ್ರಾಮಾಣಿಕ ಪಕ್ಷವೆಂದು ಒಪ್ಪುತ್ತಿದ್ದೆ~ ಎಂದು ಕೇಂದ್ರ ಸಚಿವ ಕಪಿಲ್ ಸಿಬಲ್ ಛೇಡಿಸಿದರು. ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕೆಂಬುದನ್ನು ಈ ತೀರ್ಪು ಸೂಚಿಸುತ್ತದೆ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಅವರು ಹೇಳಿದರು.</p>.<p>ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ಪ್ರತಿಕ್ರಿಯಿಸಿ, `ಇದು ನಮ್ಮ ರಕ್ಷಣಾ ವ್ಯವಸ್ಥೆ ಕುಲಗೆಟ್ಟಿರುವುದನ್ನು ತೋರಿಸುತ್ತದೆ~ ಎಂದರು.</p>.<p><strong>ಪ್ರಕರಣದ ಹೆಜ್ಜೆ ಜಾಡು</strong></p>.<p><strong>ಡಿ.23, 2000- ಜ.7, 2001:</strong> ರಹಸ್ಯ ಕಾರ್ಯಾಚರಣೆ ಭಾಗವಾಗಿ ಶಸ್ತ್ರಾಸ್ತ್ರ ಪೂರೈಕೆ ದಲ್ಲಾಳಿಯಂತೆ ಹೋಗಿದ್ದ ಮಾರುವೇಷದ ಪತ್ರಕರ್ತನಿಂದ ಬಂಗಾರು ಲಕ್ಷ್ಮಣ್ ಜತೆ ಎಂಟು ಬಾರಿ ಚರ್ಚೆ</p>.<p><strong>2001ರ ಜನವರಿ ಮೊದಲ ವಾರ:</strong> ಬಂಗಾರು ಲಕ್ಷ್ಮಣ್ ಲಂಚಕ್ಕೆ ಕೈಯೊಡ್ಡಿದ್ದು</p>.<p><strong>ಮಾರ್ಚ್ 13, 2001:</strong> ಶಸ್ತ್ರಾಸ್ತ್ರ ದಲ್ಲಾಳಿಯಿಂದ 1 ಲಕ್ಷ ರೂಪಾಯಿ ಲಂಚ ಪಡೆದದ್ದು</p>.<p><strong>ಜುಲೈ 18, 2006:</strong> ಸಿಬಿಐ ನಿಂದ ಆರೋಪಪಟ್ಟಿ ಸಲ್ಲಿಕೆ</p>.<p><strong>ಮೇ 2, 2001:</strong> ಬಂಗಾರು ವಿರುದ್ಧ ದೋಷಾರೋಪ</p>.<p><strong>ಏ.2, 2012:</strong> ತೀರ್ಪು ಕಾಯ್ದಿರಿಸಿದ್ದ ದೆಹಲಿ ಕೋರ್ಟ್</p>.<p><strong>ಏ.27, 2012:</strong> ತೀರ್ಪು ಪ್ರಕಟ; ತಿಹಾರ್ ಜೈಲಿಗೆ ಬಂಗಾರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>