<p><br /> ಕೈರೊ (ಪಿಟಿಐ): ಪ್ರತಿಭಟನೆಗಳಿಂದ ತತ್ತರಿಸಿರುವ ಲಿಬಿಯಾದಲ್ಲಿ ಇನ್ನೂ 18 ಸಾವಿರ ಭಾರತೀಯರು ಸಿಕ್ಕಿ ಹಾಕಿಕೊಂಡಿದ್ದು, ಮರುಭೂಮಿಯ ಮೂಲಕ ಈಜಿಪ್ಟ್ ಗಡಿಯೊಳಗೆ ಅವರನ್ನು ಕರೆತರುವುದಕ್ಕೆ ಈಜಿಪ್ಟ್ನಲ್ಲಿನ ಭಾರತೀಯ ರಾಯಭಾರ ಕಚೇರಿ ಕ್ರಮ ಕೈಗೊಂಡಿದೆ.<br /> <br /> ಭಾರತ ಸರ್ಕಾರ ಈಗಾಗಲೇ ವಿಶೇಷ ವಿಮಾನಗಳು ಮತ್ತು ಹಡಗಿನ ಮೂಲಕ ಜನರನ್ನು ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದು, ಇದಕ್ಕೆ ಪೂರಕವಾಗಿ ರಸ್ತೆ ಮೂಲಕವೂ ಜನರನ್ನು ದೇಶದಿಂದ ಹೊರಕ್ಕೆ ಕರೆದೊಯ್ಯಲು ಕ್ರಮ ಕೈಗೊಳ್ಳಲಾಗಿದೆ. <br /> <br /> ಪ್ರತಿಭಟನೆ ಸಂದರ್ಭದಲ್ಲಿ ದಾಖಲೆ ಪತ್ರಗಳು ಕಳೆದು ಕೊಂಡವರಿಗೆ ಹೊಸದಾಗಿ ಪ್ರಯಾಣ ದಾಖಲೆ ಪತ್ರಗಳನ್ನು ನೀಡಲಾಗುತ್ತಿದೆ.ಭಾರತೀಯರ ಸುರಕ್ಷಿತ ನಿರ್ಗಮನಕ್ಕೆ ಅವಕಾಶ ಮಾಡಿಕೊಡುವಂತೆ ವಿದೇಶಾಂಗ ವ್ಯವಹಾರ ಸಚಿವ ಎಸ್. ಎಂ. ಕೃಷ್ಣ ಲಿಬಿಯಾದ ತಮ್ಮ ಸಹವರ್ತಿ ಮುಸ್ಸಾ ಕುಸ್ಸಾ ಅವರಲ್ಲಿ ಕೋರಿದ್ದಾರೆ.</p>.<p>ಲಿಬಿಯಾಕ್ಕೆ ಪ್ರತಿದಿನ ಒಂದೊಂದು ಯಾನ ಕೈಗೊಂಡು ಭಾರತೀಯರನ್ನು ಕರೆತರಲು ಸರ್ಕಾರವು ಖಾಸಗಿ ವಿಮಾನಯಾನ ಸಂಸ್ಥೆಗಳಿಗೂ ಸೂಚಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><br /> ಕೈರೊ (ಪಿಟಿಐ): ಪ್ರತಿಭಟನೆಗಳಿಂದ ತತ್ತರಿಸಿರುವ ಲಿಬಿಯಾದಲ್ಲಿ ಇನ್ನೂ 18 ಸಾವಿರ ಭಾರತೀಯರು ಸಿಕ್ಕಿ ಹಾಕಿಕೊಂಡಿದ್ದು, ಮರುಭೂಮಿಯ ಮೂಲಕ ಈಜಿಪ್ಟ್ ಗಡಿಯೊಳಗೆ ಅವರನ್ನು ಕರೆತರುವುದಕ್ಕೆ ಈಜಿಪ್ಟ್ನಲ್ಲಿನ ಭಾರತೀಯ ರಾಯಭಾರ ಕಚೇರಿ ಕ್ರಮ ಕೈಗೊಂಡಿದೆ.<br /> <br /> ಭಾರತ ಸರ್ಕಾರ ಈಗಾಗಲೇ ವಿಶೇಷ ವಿಮಾನಗಳು ಮತ್ತು ಹಡಗಿನ ಮೂಲಕ ಜನರನ್ನು ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದು, ಇದಕ್ಕೆ ಪೂರಕವಾಗಿ ರಸ್ತೆ ಮೂಲಕವೂ ಜನರನ್ನು ದೇಶದಿಂದ ಹೊರಕ್ಕೆ ಕರೆದೊಯ್ಯಲು ಕ್ರಮ ಕೈಗೊಳ್ಳಲಾಗಿದೆ. <br /> <br /> ಪ್ರತಿಭಟನೆ ಸಂದರ್ಭದಲ್ಲಿ ದಾಖಲೆ ಪತ್ರಗಳು ಕಳೆದು ಕೊಂಡವರಿಗೆ ಹೊಸದಾಗಿ ಪ್ರಯಾಣ ದಾಖಲೆ ಪತ್ರಗಳನ್ನು ನೀಡಲಾಗುತ್ತಿದೆ.ಭಾರತೀಯರ ಸುರಕ್ಷಿತ ನಿರ್ಗಮನಕ್ಕೆ ಅವಕಾಶ ಮಾಡಿಕೊಡುವಂತೆ ವಿದೇಶಾಂಗ ವ್ಯವಹಾರ ಸಚಿವ ಎಸ್. ಎಂ. ಕೃಷ್ಣ ಲಿಬಿಯಾದ ತಮ್ಮ ಸಹವರ್ತಿ ಮುಸ್ಸಾ ಕುಸ್ಸಾ ಅವರಲ್ಲಿ ಕೋರಿದ್ದಾರೆ.</p>.<p>ಲಿಬಿಯಾಕ್ಕೆ ಪ್ರತಿದಿನ ಒಂದೊಂದು ಯಾನ ಕೈಗೊಂಡು ಭಾರತೀಯರನ್ನು ಕರೆತರಲು ಸರ್ಕಾರವು ಖಾಸಗಿ ವಿಮಾನಯಾನ ಸಂಸ್ಥೆಗಳಿಗೂ ಸೂಚಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>