ಕೋಲ್ಕತ್ತ (ಐಎಎನ್ಎಸ್, ಪಿಟಿಐ): `ನಾನು ಆ ಹಾಸ್ಟೆಲ್ನತ್ತ ಮುಖ ಮಾಡುವುದಿಲ್ಲ; ಒಂದು ವೇಳೆ ಅಲ್ಲಿಗೆಹೋದರೆ ಮತ್ತೆ ಅಂಥ ಶಿಕ್ಷೆ ಕೊಡಬಹುದು. ಬೇರೆ ಶಾಲೆಗೆ ಹೋಗುತ್ತೇನೆ~
-ಹಾಸಿಗೆ ಒದ್ದೆ ಮಾಡಿಕೊಂಡಿದ್ದಕ್ಕಾಗಿ ಬಲವಂತವಾಗಿ ಸ್ವಮೂತ್ರ ಕುಡಿಯುವ ಅಮಾನವೀಯ ಶಿಕ್ಷೆಗೆ ಒಳಗಾಗಿದ್ದ ವಿಶ್ವ ಭಾರತಿ ಕ್ಯಾಂಪಸ್ನ 5ನೇ ತರಗತಿ ವಿದ್ಯಾರ್ಥಿನಿ ಭಯಭೀತಳಾಗಿ ನುಡಿದ ಮಾತುಗಳಿವು.
ವರದಿ ಕೇಳಿದ ರಾಜ್ಯಪಾಲ: ಈ ಪ್ರಕರಣಕ್ಕೆ ಸಂಬಂಧಿಸಿದ ವರದಿ ನೀಡುವಂತೆ ವಿಶ್ವ ಭಾರತಿ ವಿಶ್ವವಿದ್ಯಾಲಯವನ್ನು ಪಶ್ಚಿಮ ಬಂಗಾಳದ ರಾಜ್ಯಪಾಲ ಎಂ.ಕೆ. ನಾರಾಯಣನ್ ಕೇಳಿದ್ದಾರೆ.