<p><strong>ಸಾಹೀಬ್ಗಂಜ್/ಗುವಾಹಟಿ (ಪಿಟಿಐ): </strong> ದೆಹಲಿಗೆ ಹೊರಟಿದ್ದ ಬ್ರಹ್ಮಪುತ್ರ ಎಕ್ಸ್ಪ್ರೆಸ್ ರೈಲು ಸಾಹೀಬ್ಗಂಜ್ನಿಂದ 25 ಕಿ. ಮೀ. ದೂರದಲ್ಲಿ ಬೆಳಗಿನ ಜಾವ 5.30ರ ಸುಮಾರಿಗೆ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಿದ್ದರಿಂದ ಐವರು ಸತ್ತಿದ್ದು, ಒಂದು ಮಗುವೂ ಸೇರಿದಂತೆ 9 ಜನರಿಗೆ ಗಾಯಗಳಾಗಿವೆ.<br /> <br /> ಬ್ರಹ್ಮಪುತ್ರ ರೈಲು ದಿಬ್ರುಗಡದಿಂದ ದೆಹಲಿಗೆ ಹೊರಟಿತ್ತು. ಈ ಸಂದರ್ಭದಲ್ಲಿ ಮುಖ್ಯ ಮಾರ್ಗದ ಮೇಲೆ ನಿಂತಿದ್ದ ಸರಕು ಸಾಗಣೆ ರೈಲು ಹಿಮ್ಮುಖವಾಗಿ ಚಲಿಸತೊಡಗಿದ್ದರಿಂದ ಬ್ರಹ್ಮಪುತ್ರ ರೈಲಿಗೆ ಡಿಕ್ಕಿ ಹೊಡೆಯಿತು ಎಂದು ಒಂದು ಮೂಲ ತಿಳಿಸಿದರೆ, ಬ್ರಹ್ಮಪುತ್ರ ರೈಲಿನ ಬೋಗಿಯೊಂದು ಹಳಿ ತಪ್ಪಿ ಪಕ್ಕದಲ್ಲಿ ನಿಂತಿದ್ದ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ರೈಲ್ವೆ ಸುರಕ್ಷಾ ಪೊಲೀಸ್ ಪಡೆಯ ವರಿಷ್ಠಾಧಿಕಾರಿ ಪ್ರವೀಣ್ ಶ್ರೀವಾತ್ಸವ್ ಅವರು ತಿಳಿಸಿದ್ದಾರೆ. <br /> <br /> ಅಪಘಾತದಲ್ಲಿ ಮಡಿದವರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿಗಳ ಪರಿಹಾರವನ್ನು ರೈಲ್ವೆ ಸಚಿವ ದಿನೇಶ್ ತ್ರಿವೇದಿ ಪ್ರಕಟಿಸಿದ್ದಾರೆ. ಸಣ್ಣಪುಟ್ಟ ಗಾಯಗಳಾದವರಿಗೆ ತಲಾ 10 ಸಾವಿರ ರೂಪಾಯಿಗಳ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.<br /> <br /> <strong>ಅಮಾನತು:</strong> ಸರಕು ಸಾಗಣೆ ರೈಲಿನ ಚಾಲಕ, ಸಹಾಯಕ ಚಾಲಕ, ಗಾರ್ಡ್ ಸೇರಿದಂತೆ ಪೂರ್ವ ರೈಲ್ವೆಯ ಮಾಲ್ಡಾ ವಿಭಾಗದ ಆರು ಮಂದಿಯನ್ನು ನಿರ್ಲಕ್ಷ್ಯತನದ ಆಪಾದನೆಗಾಗಿ ಸಸ್ಪೆಂಡ್ ಮಾಡಲಾಗಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಹೀಬ್ಗಂಜ್/ಗುವಾಹಟಿ (ಪಿಟಿಐ): </strong> ದೆಹಲಿಗೆ ಹೊರಟಿದ್ದ ಬ್ರಹ್ಮಪುತ್ರ ಎಕ್ಸ್ಪ್ರೆಸ್ ರೈಲು ಸಾಹೀಬ್ಗಂಜ್ನಿಂದ 25 ಕಿ. ಮೀ. ದೂರದಲ್ಲಿ ಬೆಳಗಿನ ಜಾವ 5.30ರ ಸುಮಾರಿಗೆ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಿದ್ದರಿಂದ ಐವರು ಸತ್ತಿದ್ದು, ಒಂದು ಮಗುವೂ ಸೇರಿದಂತೆ 9 ಜನರಿಗೆ ಗಾಯಗಳಾಗಿವೆ.<br /> <br /> ಬ್ರಹ್ಮಪುತ್ರ ರೈಲು ದಿಬ್ರುಗಡದಿಂದ ದೆಹಲಿಗೆ ಹೊರಟಿತ್ತು. ಈ ಸಂದರ್ಭದಲ್ಲಿ ಮುಖ್ಯ ಮಾರ್ಗದ ಮೇಲೆ ನಿಂತಿದ್ದ ಸರಕು ಸಾಗಣೆ ರೈಲು ಹಿಮ್ಮುಖವಾಗಿ ಚಲಿಸತೊಡಗಿದ್ದರಿಂದ ಬ್ರಹ್ಮಪುತ್ರ ರೈಲಿಗೆ ಡಿಕ್ಕಿ ಹೊಡೆಯಿತು ಎಂದು ಒಂದು ಮೂಲ ತಿಳಿಸಿದರೆ, ಬ್ರಹ್ಮಪುತ್ರ ರೈಲಿನ ಬೋಗಿಯೊಂದು ಹಳಿ ತಪ್ಪಿ ಪಕ್ಕದಲ್ಲಿ ನಿಂತಿದ್ದ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ರೈಲ್ವೆ ಸುರಕ್ಷಾ ಪೊಲೀಸ್ ಪಡೆಯ ವರಿಷ್ಠಾಧಿಕಾರಿ ಪ್ರವೀಣ್ ಶ್ರೀವಾತ್ಸವ್ ಅವರು ತಿಳಿಸಿದ್ದಾರೆ. <br /> <br /> ಅಪಘಾತದಲ್ಲಿ ಮಡಿದವರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿಗಳ ಪರಿಹಾರವನ್ನು ರೈಲ್ವೆ ಸಚಿವ ದಿನೇಶ್ ತ್ರಿವೇದಿ ಪ್ರಕಟಿಸಿದ್ದಾರೆ. ಸಣ್ಣಪುಟ್ಟ ಗಾಯಗಳಾದವರಿಗೆ ತಲಾ 10 ಸಾವಿರ ರೂಪಾಯಿಗಳ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.<br /> <br /> <strong>ಅಮಾನತು:</strong> ಸರಕು ಸಾಗಣೆ ರೈಲಿನ ಚಾಲಕ, ಸಹಾಯಕ ಚಾಲಕ, ಗಾರ್ಡ್ ಸೇರಿದಂತೆ ಪೂರ್ವ ರೈಲ್ವೆಯ ಮಾಲ್ಡಾ ವಿಭಾಗದ ಆರು ಮಂದಿಯನ್ನು ನಿರ್ಲಕ್ಷ್ಯತನದ ಆಪಾದನೆಗಾಗಿ ಸಸ್ಪೆಂಡ್ ಮಾಡಲಾಗಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>