ಈ ಘಟನೆ ಬಳಿಕ ಸಲ್ಲಾಗೆ ದೇಶದಲ್ಲಿ ವಿಮಾನ ಪ್ರಯಾಣ ಕೈಗೊಳ್ಳದಂತೆ ನಿಷೇಧ ಹೇರಲಾಗಿತ್ತು. ಈ ರೀತಿ ’ರಾಷ್ಟ್ರೀಯ ನಿಷೇಧ’ಕ್ಕೆ ಒಳಗಾಗಿದ್ದ ಮೊದಲ ವ್ಯಕ್ತಿ ಇವರಾಗಿದ್ದರು. ಜತೆಗೆ, ಸಲ್ಲಾ ವಿರುದ್ಧ ವಿಮಾನ ಅಪಹರಣ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಕಳೆದ ವರ್ಷ ಜನವರಿಯಲ್ಲಿ ಎನ್ಐಎ, ಸಲ್ಲಾ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಬಂಧನದ ಬಳಿಕ ಒಂದು ಬಾರಿಯೂ ಸಲ್ಲಾಗೆ ಜಾಮೀನು ಸಿಕ್ಕಿರಲಿಲ್ಲ.