<p><strong>ನವದೆಹಲಿ: </strong>ತೃಣಮೂಲ ಕಾಂಗ್ರೆಸ್ ಸಂಸದ ಸುದಿಪ್ ಬಂಧೋಪಾಧ್ಯಾಯ ಅವರು ತಮ್ಮದೇ ಪಕ್ಷದ ಸಚಿವ ದಿನೇಶ್ ತ್ರಿವೇದಿ ಚೊಚ್ಚಲ ಬಜೆಟ್ ಭಾಷಣ ಮಾಡುತ್ತಿದ್ದಾಗ ಪಕ್ಕದಲ್ಲೇ ಇದ್ದರೂ ಮುಖದಲ್ಲಿ ಮತ್ತು ಹಾವಭಾವದಲ್ಲಿ ಸ್ವಲ್ಪವೂ ವಿರೋಧ ವ್ಯಕ್ತಪಡಿಸಿಲ್ಲ.<br /> <br /> ಬಜೆಟ್ ಭಾಷಣ ಮುಗಿಯುವವರೆಗೂ ಸುಮ್ಮನೆ ಕುಳಿತಿದ್ದ ಅವರು ನಂತರ ಹೊರಗೆ ಬಂದು ತಮ್ಮದೆ ಪಕ್ಷದ ಸಚಿವರು ಮಂಡಿಸಿದ ಬಜೆಟ್ಗೆ ವಿರೋಧ ವ್ಯಕ್ತಪಡಿಸುವ ಕಿಂಚಿತ್ ಸುಳಿವನ್ನೂ ನೀಡಿಲ್ಲ. ತ್ರಿವೇದಿ ತಮ್ಮ ಭಾಷಣದ ಆರಂಭದಲ್ಲೇ, `ತಮ್ಮ ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಮತ್ತು ಪಕ್ಷದ ಸಂಸದರ ನೆರವನಿಂದ ಈ ಬಜೆಟ್ ಮಂಡನೆ ಸಾಧ್ಯವಾಗಿದೆ~ ಎಂದು ಹೇಳಿದ್ದರು.<br /> <br /> `ಪ್ರಧಾನಿ ಮನಮೋಹನ್ ಸಿಂಗ್, ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮಾರ್ಗದರ್ಶನದಿಂದ ಈ ಬಜೆಟ್ ಸಿದ್ಧಪಡಿಸಿದ್ದೇನೆ~ ಎಂದಿದ್ದರು.<br /> <br /> ರೈಲ್ವೆ ಅಭಿವೃದ್ಧಿಗೆ ಶ್ರಮಿಸಿದ ಹಿಂದಿನ ಸಚಿವರ ಹೆಸರು ಹೇಳುವಾಗ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕರ ಹೆಸರನ್ನು ಪ್ರಸ್ತಾಪಿಸಿದ್ದರು. ಆದರೆ ಅವರು ಲಾಲೂ ಪ್ರಸಾದ್ ಮತ್ತು ರಾಮವಿಲಾಸ್ ಪಾಸ್ವಾನ್ ಅವರ ಹೆಸರನ್ನು ಪ್ರಸ್ತಾಪಿಸಲು ಮರೆತಿದ್ದರು. ನಂತರ ನೆನಪು ಮಾಡಿಕೊಂಡು ಈ ಇಬ್ಬರ ಹೆಸರನ್ನು ಹೇಳಿ ಕೃತಜ್ಞತೆ ಸಲ್ಲಿಸಿದರು.<br /> <br /> ಬಜೆಟ್ ಓದುವಾಗ ಯಾರೂ ಅಡ್ಡಿಪಡಿಸಿಲ್ಲ. ಲಾಲು ಎರಡು ಬಾರಿ ಮಾತನಾಡಲು ಪ್ರಯತ್ನಿಸಿದರು. ಆದರೆ ಪ್ರತಿಕ್ರಿಯೆ ಸಿಗದ ಕಾರಣ ಸುಮ್ಮನಾದರು. ಇದೇ ಸಂದರ್ಭದಲ್ಲಿ ಅವರು ರೈಲ್ವೆ ನೌಕರರಿಗೆ ಕೃತಜ್ಞತೆ ಹೇಳಲು ಮರೆಯಲಿಲ್ಲ. `ನಿಮ್ಮ ಶ್ರದ್ಧೆಯ ದುಡುಮೆಯಿಂದ ಯಶಸ್ಸು ಸಾಧ್ಯವಾಗಿದೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ತೃಣಮೂಲ ಕಾಂಗ್ರೆಸ್ ಸಂಸದ ಸುದಿಪ್ ಬಂಧೋಪಾಧ್ಯಾಯ ಅವರು ತಮ್ಮದೇ ಪಕ್ಷದ ಸಚಿವ ದಿನೇಶ್ ತ್ರಿವೇದಿ ಚೊಚ್ಚಲ ಬಜೆಟ್ ಭಾಷಣ ಮಾಡುತ್ತಿದ್ದಾಗ ಪಕ್ಕದಲ್ಲೇ ಇದ್ದರೂ ಮುಖದಲ್ಲಿ ಮತ್ತು ಹಾವಭಾವದಲ್ಲಿ ಸ್ವಲ್ಪವೂ ವಿರೋಧ ವ್ಯಕ್ತಪಡಿಸಿಲ್ಲ.<br /> <br /> ಬಜೆಟ್ ಭಾಷಣ ಮುಗಿಯುವವರೆಗೂ ಸುಮ್ಮನೆ ಕುಳಿತಿದ್ದ ಅವರು ನಂತರ ಹೊರಗೆ ಬಂದು ತಮ್ಮದೆ ಪಕ್ಷದ ಸಚಿವರು ಮಂಡಿಸಿದ ಬಜೆಟ್ಗೆ ವಿರೋಧ ವ್ಯಕ್ತಪಡಿಸುವ ಕಿಂಚಿತ್ ಸುಳಿವನ್ನೂ ನೀಡಿಲ್ಲ. ತ್ರಿವೇದಿ ತಮ್ಮ ಭಾಷಣದ ಆರಂಭದಲ್ಲೇ, `ತಮ್ಮ ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಮತ್ತು ಪಕ್ಷದ ಸಂಸದರ ನೆರವನಿಂದ ಈ ಬಜೆಟ್ ಮಂಡನೆ ಸಾಧ್ಯವಾಗಿದೆ~ ಎಂದು ಹೇಳಿದ್ದರು.<br /> <br /> `ಪ್ರಧಾನಿ ಮನಮೋಹನ್ ಸಿಂಗ್, ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮಾರ್ಗದರ್ಶನದಿಂದ ಈ ಬಜೆಟ್ ಸಿದ್ಧಪಡಿಸಿದ್ದೇನೆ~ ಎಂದಿದ್ದರು.<br /> <br /> ರೈಲ್ವೆ ಅಭಿವೃದ್ಧಿಗೆ ಶ್ರಮಿಸಿದ ಹಿಂದಿನ ಸಚಿವರ ಹೆಸರು ಹೇಳುವಾಗ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕರ ಹೆಸರನ್ನು ಪ್ರಸ್ತಾಪಿಸಿದ್ದರು. ಆದರೆ ಅವರು ಲಾಲೂ ಪ್ರಸಾದ್ ಮತ್ತು ರಾಮವಿಲಾಸ್ ಪಾಸ್ವಾನ್ ಅವರ ಹೆಸರನ್ನು ಪ್ರಸ್ತಾಪಿಸಲು ಮರೆತಿದ್ದರು. ನಂತರ ನೆನಪು ಮಾಡಿಕೊಂಡು ಈ ಇಬ್ಬರ ಹೆಸರನ್ನು ಹೇಳಿ ಕೃತಜ್ಞತೆ ಸಲ್ಲಿಸಿದರು.<br /> <br /> ಬಜೆಟ್ ಓದುವಾಗ ಯಾರೂ ಅಡ್ಡಿಪಡಿಸಿಲ್ಲ. ಲಾಲು ಎರಡು ಬಾರಿ ಮಾತನಾಡಲು ಪ್ರಯತ್ನಿಸಿದರು. ಆದರೆ ಪ್ರತಿಕ್ರಿಯೆ ಸಿಗದ ಕಾರಣ ಸುಮ್ಮನಾದರು. ಇದೇ ಸಂದರ್ಭದಲ್ಲಿ ಅವರು ರೈಲ್ವೆ ನೌಕರರಿಗೆ ಕೃತಜ್ಞತೆ ಹೇಳಲು ಮರೆಯಲಿಲ್ಲ. `ನಿಮ್ಮ ಶ್ರದ್ಧೆಯ ದುಡುಮೆಯಿಂದ ಯಶಸ್ಸು ಸಾಧ್ಯವಾಗಿದೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>