<p>ನವದೆಹಲಿ (ಐಎಎನ್ಎಸ್): ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಭಾಗವಹಿಸಲಿದ್ದಾರೆ ಎಂಬ ಕಾರಣಕ್ಕೆ `ಇಂಡಿಯಾ ಟುಡೆ~ ಸಮಾವೇಶದಲ್ಲಿ ಶನಿವಾರ ರಾತ್ರಿ ಭಾಷಣ ಮಾಡಬೇಕಿದ್ದ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಪಾಕ್ ರಾಜಕಾರಣಿ ಇಮ್ರಾನ್ ಖಾನ್ ಪಾಲ್ಗೊಳ್ಳದೆ ದೂರ ಉಳಿದರು.<br /> <br /> ರಶ್ದಿ ಅವರ ಜತೆ ವೇದಿಕೆ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ತೆಹರೀಕ್-ಎ-ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್ ನೇರವಾಗಿ ಹೇಳಿದ್ದಾರೆ. ಉಳಿದ ಗಣ್ಯರು ಬೇರೆ ಬೇರೆ ಕಾರಣಗಳನ್ನು ನೀಡಿ ನುಣುಚಿಕೊಂಡಿದ್ದಾರೆ.<br /> <br /> ಪಶ್ಚಿಮ ಬಂಗಾಳದ ತಮ್ಮ ಕ್ಷೇತ್ರ ಜಾಂಗಿಪುರದ ಜನತೆಯಿಂದ ಒತ್ತಡ ಇರುವುದರಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಗದು ಎಂದು ಪ್ರಣವ್ ತಿಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಮುಸ್ಲಿಮರು ಅಧಿಕವಾಗಿದ್ದಾರೆ.<br /> <br /> ರಾಜಧಾನಿಯ ತಾಜ್ ಪ್ಯಾಲೇಸ್ ಹೋಟೆಲ್ನಲ್ಲಿ ಶುಕ್ರವಾರ ಆರಂಭವಾದ ಎರಡು ದಿನಗಳ ಈ ಸಮಾವೇಶದಲ್ಲಿ ರಶ್ದಿ ಶುಕ್ರವಾರವೇ ಸಾಹಿತ್ಯ ಭಾಷಣ ಮಾಡಬೇಕಿತ್ತು. ಆದರೆ ಇಮ್ರಾನ್ ಖಾನ್ ಕಾರ್ಯಕ್ರಮದಿಂದ ದೂರ ಉಳಿದಿದ್ದರಿಂದ ಅದನ್ನು ಶನಿವಾರ ರಾತ್ರಿಗೆ ಮುಂದೂಡಲಾಗಿತ್ತು.<br /> <br /> `ವಿಚಾರಗಳನ್ನು ಮುಕ್ತ ಮತ್ತು ಆಪ್ತವಾಗಿ ವಿನಿಮಯ ಮಾಡಿಕೊಳ್ಳುವುದು ನಮ್ಮ ಸಮಾವೇಶದ ಉದ್ದೇಶ, ಆದರೆ ಇಮ್ರಾನ್ ಖಾನ್ ಅವರು ರಶ್ದಿ ಬರುತ್ತಾರೆ ಎಂಬ ಕಾರಣಕ್ಕೆ ಬಾರದಿರುವುದು ವಿಷಾದದ ಸಂಗತಿ~ ಎಂದು ಇಂಡಿಯಾ ಟುಡೆ ಸಮೂಹದ ಅಧ್ಯಕ್ಷ ಅರುಣ್ ಪುರಿ ಹೇಳಿದ್ದಾರೆ.<br /> <br /> ರಶ್ದಿ ತಮ್ಮ `ಸಟಾನಿಕ್ ವರ್ಸಸ್~ ಕೃತಿಯಲ್ಲಿ ಮಾಡಿರುವ ಧಾರ್ಮಿಕ ಪ್ರಸ್ತಾವಗಳನ್ನು ತೀವ್ರವಾದಿ ಮುಸ್ಲಿಮರು ವಿರೋಧಿಸಿದ್ದರಿಂದ ಎರಡು ತಿಂಗಳ ಹಿಂದೆ ಜೈಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಕೂಡ ರಶ್ದಿ ಭಾಗವಹಿಸಿರಲಿಲ್ಲ. <br /> <br /> `ಸಮಾವೇಶದಲ್ಲಿ ಮಾತನಾಡಲು ಕಾತರನಾಗಿದ್ದೇನೆ, ನನ್ನ ಭಾಷಣ ಇಂಡಿಯಾ ಟುಡೆ ಕಾನ್ಕ್ಲೇವ್ ಡಾಟ್ ಕಾಂನಲ್ಲಿ ನೇರ ಪ್ರಸಾರವಾಗಲಿದೆ~ ಎಂದು ರಶ್ದಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಐಎಎನ್ಎಸ್): ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಭಾಗವಹಿಸಲಿದ್ದಾರೆ ಎಂಬ ಕಾರಣಕ್ಕೆ `ಇಂಡಿಯಾ ಟುಡೆ~ ಸಮಾವೇಶದಲ್ಲಿ ಶನಿವಾರ ರಾತ್ರಿ ಭಾಷಣ ಮಾಡಬೇಕಿದ್ದ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಪಾಕ್ ರಾಜಕಾರಣಿ ಇಮ್ರಾನ್ ಖಾನ್ ಪಾಲ್ಗೊಳ್ಳದೆ ದೂರ ಉಳಿದರು.<br /> <br /> ರಶ್ದಿ ಅವರ ಜತೆ ವೇದಿಕೆ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ತೆಹರೀಕ್-ಎ-ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್ ನೇರವಾಗಿ ಹೇಳಿದ್ದಾರೆ. ಉಳಿದ ಗಣ್ಯರು ಬೇರೆ ಬೇರೆ ಕಾರಣಗಳನ್ನು ನೀಡಿ ನುಣುಚಿಕೊಂಡಿದ್ದಾರೆ.<br /> <br /> ಪಶ್ಚಿಮ ಬಂಗಾಳದ ತಮ್ಮ ಕ್ಷೇತ್ರ ಜಾಂಗಿಪುರದ ಜನತೆಯಿಂದ ಒತ್ತಡ ಇರುವುದರಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಗದು ಎಂದು ಪ್ರಣವ್ ತಿಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಮುಸ್ಲಿಮರು ಅಧಿಕವಾಗಿದ್ದಾರೆ.<br /> <br /> ರಾಜಧಾನಿಯ ತಾಜ್ ಪ್ಯಾಲೇಸ್ ಹೋಟೆಲ್ನಲ್ಲಿ ಶುಕ್ರವಾರ ಆರಂಭವಾದ ಎರಡು ದಿನಗಳ ಈ ಸಮಾವೇಶದಲ್ಲಿ ರಶ್ದಿ ಶುಕ್ರವಾರವೇ ಸಾಹಿತ್ಯ ಭಾಷಣ ಮಾಡಬೇಕಿತ್ತು. ಆದರೆ ಇಮ್ರಾನ್ ಖಾನ್ ಕಾರ್ಯಕ್ರಮದಿಂದ ದೂರ ಉಳಿದಿದ್ದರಿಂದ ಅದನ್ನು ಶನಿವಾರ ರಾತ್ರಿಗೆ ಮುಂದೂಡಲಾಗಿತ್ತು.<br /> <br /> `ವಿಚಾರಗಳನ್ನು ಮುಕ್ತ ಮತ್ತು ಆಪ್ತವಾಗಿ ವಿನಿಮಯ ಮಾಡಿಕೊಳ್ಳುವುದು ನಮ್ಮ ಸಮಾವೇಶದ ಉದ್ದೇಶ, ಆದರೆ ಇಮ್ರಾನ್ ಖಾನ್ ಅವರು ರಶ್ದಿ ಬರುತ್ತಾರೆ ಎಂಬ ಕಾರಣಕ್ಕೆ ಬಾರದಿರುವುದು ವಿಷಾದದ ಸಂಗತಿ~ ಎಂದು ಇಂಡಿಯಾ ಟುಡೆ ಸಮೂಹದ ಅಧ್ಯಕ್ಷ ಅರುಣ್ ಪುರಿ ಹೇಳಿದ್ದಾರೆ.<br /> <br /> ರಶ್ದಿ ತಮ್ಮ `ಸಟಾನಿಕ್ ವರ್ಸಸ್~ ಕೃತಿಯಲ್ಲಿ ಮಾಡಿರುವ ಧಾರ್ಮಿಕ ಪ್ರಸ್ತಾವಗಳನ್ನು ತೀವ್ರವಾದಿ ಮುಸ್ಲಿಮರು ವಿರೋಧಿಸಿದ್ದರಿಂದ ಎರಡು ತಿಂಗಳ ಹಿಂದೆ ಜೈಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಕೂಡ ರಶ್ದಿ ಭಾಗವಹಿಸಿರಲಿಲ್ಲ. <br /> <br /> `ಸಮಾವೇಶದಲ್ಲಿ ಮಾತನಾಡಲು ಕಾತರನಾಗಿದ್ದೇನೆ, ನನ್ನ ಭಾಷಣ ಇಂಡಿಯಾ ಟುಡೆ ಕಾನ್ಕ್ಲೇವ್ ಡಾಟ್ ಕಾಂನಲ್ಲಿ ನೇರ ಪ್ರಸಾರವಾಗಲಿದೆ~ ಎಂದು ರಶ್ದಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>