ಹೈಕೋರ್ಟ್ ಆದೇಶದಂತೆ 2014ರ ನವೆಂಬರ್ನಲ್ಲಿ ರಾಮ್ಪಾಲ್ ಅವರನ್ನು ಬಂಧಿಸಲು ಬರ್ವಾಲಾದ ಸತ್ಲೋಕ್ ಆಶ್ರಮಕ್ಕೆ ತೆರಳಿದ್ದ ಪೊಲೀಸರ ಮೇಲೆ ಬೆಂಬಲಿಗರ ಪಡೆ ಕಲ್ಲು, ಲಾಠಿ, ಬಂದೂಕುಗಳಿಂದ ದಾಳಿ ನಡೆಸಿತ್ತು. ಬಾಬಾ ತನ್ನ ಸಾವಿರಾರು ಅನುಯಾಯಿಗಳನ್ನೇ ಮಾನವ ಗುರಾಣಿಯಂತೆ ಬಳಸಿದ್ದು ದೇಶದಾದ್ಯಂತ ಭಾರಿ ಸುದ್ದಿಯಾಗಿತ್ತು. ಈ ಹಿಂಸಾಚಾರದಲ್ಲಿ ಆರು ಜನ ಮೃತಪಟ್ಟಿದ್ದರು.