<p><strong>ಹಿಸಾರ್ : </strong>ಹರಿಯಾಣದ ಸ್ವಯಂಘೋಷಿತ ದೇವಮಾನವ ಮತ್ತು ಬರ್ವಾಲಾದ ಸತ್ಲೋಕ್ ಆಶ್ರಮದ ಮುಖ್ಯಸ್ಥ ರಾಮ್ಪಾಲ್ ಎರಡು ಅಪರಾಧ ಪ್ರಕರಣಗಳಿಂದ ಖುಲಾಸೆಗೊಂಡಿದ್ದಾರೆ.</p>.<p>ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮತ್ತು ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳನ್ನು ಬಾಬಾ ಮತ್ತು ಅನುಯಾಯಿಗಳು ಎದುರಿಸುತ್ತಿದ್ದರು. ಸಾಕ್ಷ್ಯಗಳ ಕೊರತೆಯಿಂದಾಗಿ ರಾಮ್ಪಾಲ್ ಹಾಗೂ ಅನುಯಾಯಿಗಳನ್ನು ಹಿಸಾರ್ ನ್ಯಾಯಾಲಯ ಮಂಗಳವಾರ ಆರೋಪಮುಕ್ತಗೊಳಿಸಿದೆ.</p>.<p>ಆದರೆ, ಸದ್ಯಕ್ಕೆ ಜೈಲಿನಿಂದ ಬಿಡುಗಡೆಯಾಗುವ ಭಾಗ್ಯ ಅವರಿಗಿಲ್ಲ. ಅವರ ವಿರುದ್ಧ ದಾಖಲಾಗಿರುವ ಕೊಲೆ ಮತ್ತು ದೇಶದ್ರೋಹದ ಎರಡು ಪ್ರತ್ಯೇಕ ಪ್ರಕರಣ ಇತ್ಯರ್ಥವಾಗಬೇಕಿದ್ದು ಅಲ್ಲಿಯವರೆಗೂ ಅವರು ಜೈಲಿನಲ್ಲಿಯೇ ಇರಬೇಕಾಗಿದೆ.</p>.<p>2006ರಲ್ಲಿ ರಾಮ್ಪಾಲ್ ಸೂಚನೆ ಮೇರೆಗೆ ಅವರ ಬೆಂಬಲಿಗರು ಹಿಸಾರ್ ಬಳಿ ಗ್ರಾಮಸ್ಥರಿಗೆ ಬೆಂಕಿ ಹಚ್ಚಿದ್ದರು. ಈ ಘಟನೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದರು. ಪ್ರಕರಣದ ತೀರ್ಪು ಇನ್ನೂ ಹೊರಬಿದ್ದಿಲ್ಲ.</p>.<p>ಈ ಪ್ರಕರಣದಲ್ಲಿ ಕೊಲೆ ಆರೋಪ ಹೊತ್ತಿದ್ದ ಬಾಬಾ 40 ಸಮನ್ಸ್ಗಳ ಹೊರತಾಗಿಯೂ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಆರೋಪಿಯನ್ನು ಬಂಧಿಸಿ ತರುವಂತೆ ಪಂಜಾಬ್–ಹರಿಯಾಣ ಹೈಕೋರ್ಟ್ ಆದೇಶ ಹೊರಡಿಸಿತ್ತು.</p>.<p><strong>ಸುದ್ದಿಯಾಗಿದ್ದ ಮಾನವ ಗುರಾಣಿ</strong></p>.<p>ಹೈಕೋರ್ಟ್ ಆದೇಶದಂತೆ 2014ರ ನವೆಂಬರ್ನಲ್ಲಿ ರಾಮ್ಪಾಲ್ ಅವರನ್ನು ಬಂಧಿಸಲು ಬರ್ವಾಲಾದ ಸತ್ಲೋಕ್ ಆಶ್ರಮಕ್ಕೆ ತೆರಳಿದ್ದ ಪೊಲೀಸರ ಮೇಲೆ ಬೆಂಬಲಿಗರ ಪಡೆ ಕಲ್ಲು, ಲಾಠಿ, ಬಂದೂಕುಗಳಿಂದ ದಾಳಿ ನಡೆಸಿತ್ತು. ಬಾಬಾ ತನ್ನ ಸಾವಿರಾರು ಅನುಯಾಯಿಗಳನ್ನೇ ಮಾನವ ಗುರಾಣಿಯಂತೆ ಬಳಸಿದ್ದು ದೇಶದಾದ್ಯಂತ ಭಾರಿ ಸುದ್ದಿಯಾಗಿತ್ತು. ಈ ಹಿಂಸಾಚಾರದಲ್ಲಿ ಆರು ಜನ ಮೃತಪಟ್ಟಿದ್ದರು.</p>.<p>ದಿನವಿಡೀ ನಡೆಸಿದ ಕಾರ್ಯಾಚಾರಣೆಯ ನಂತರ ಪೊಲೀಸರು ರಾಮ್ಪಾಲ್ ಮತ್ತು ಬೆಂಬಲಿಗರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಂಧಿತರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 332, 353 ಅಡಿ ಹಲ್ಲೆ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು.</p>.<p>ಆಶ್ರಮದಲ್ಲಿ ಬಲವಂತವಾಗಿ ಕೂಡಿಟ್ಟಿದ್ದ 15 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಪೊಲೀಸರು ಆಶ್ರಮದಿಂದ ಬಿಡುಗಡೆ ಮಾಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿಸಾರ್ : </strong>ಹರಿಯಾಣದ ಸ್ವಯಂಘೋಷಿತ ದೇವಮಾನವ ಮತ್ತು ಬರ್ವಾಲಾದ ಸತ್ಲೋಕ್ ಆಶ್ರಮದ ಮುಖ್ಯಸ್ಥ ರಾಮ್ಪಾಲ್ ಎರಡು ಅಪರಾಧ ಪ್ರಕರಣಗಳಿಂದ ಖುಲಾಸೆಗೊಂಡಿದ್ದಾರೆ.</p>.<p>ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮತ್ತು ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳನ್ನು ಬಾಬಾ ಮತ್ತು ಅನುಯಾಯಿಗಳು ಎದುರಿಸುತ್ತಿದ್ದರು. ಸಾಕ್ಷ್ಯಗಳ ಕೊರತೆಯಿಂದಾಗಿ ರಾಮ್ಪಾಲ್ ಹಾಗೂ ಅನುಯಾಯಿಗಳನ್ನು ಹಿಸಾರ್ ನ್ಯಾಯಾಲಯ ಮಂಗಳವಾರ ಆರೋಪಮುಕ್ತಗೊಳಿಸಿದೆ.</p>.<p>ಆದರೆ, ಸದ್ಯಕ್ಕೆ ಜೈಲಿನಿಂದ ಬಿಡುಗಡೆಯಾಗುವ ಭಾಗ್ಯ ಅವರಿಗಿಲ್ಲ. ಅವರ ವಿರುದ್ಧ ದಾಖಲಾಗಿರುವ ಕೊಲೆ ಮತ್ತು ದೇಶದ್ರೋಹದ ಎರಡು ಪ್ರತ್ಯೇಕ ಪ್ರಕರಣ ಇತ್ಯರ್ಥವಾಗಬೇಕಿದ್ದು ಅಲ್ಲಿಯವರೆಗೂ ಅವರು ಜೈಲಿನಲ್ಲಿಯೇ ಇರಬೇಕಾಗಿದೆ.</p>.<p>2006ರಲ್ಲಿ ರಾಮ್ಪಾಲ್ ಸೂಚನೆ ಮೇರೆಗೆ ಅವರ ಬೆಂಬಲಿಗರು ಹಿಸಾರ್ ಬಳಿ ಗ್ರಾಮಸ್ಥರಿಗೆ ಬೆಂಕಿ ಹಚ್ಚಿದ್ದರು. ಈ ಘಟನೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದರು. ಪ್ರಕರಣದ ತೀರ್ಪು ಇನ್ನೂ ಹೊರಬಿದ್ದಿಲ್ಲ.</p>.<p>ಈ ಪ್ರಕರಣದಲ್ಲಿ ಕೊಲೆ ಆರೋಪ ಹೊತ್ತಿದ್ದ ಬಾಬಾ 40 ಸಮನ್ಸ್ಗಳ ಹೊರತಾಗಿಯೂ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಆರೋಪಿಯನ್ನು ಬಂಧಿಸಿ ತರುವಂತೆ ಪಂಜಾಬ್–ಹರಿಯಾಣ ಹೈಕೋರ್ಟ್ ಆದೇಶ ಹೊರಡಿಸಿತ್ತು.</p>.<p><strong>ಸುದ್ದಿಯಾಗಿದ್ದ ಮಾನವ ಗುರಾಣಿ</strong></p>.<p>ಹೈಕೋರ್ಟ್ ಆದೇಶದಂತೆ 2014ರ ನವೆಂಬರ್ನಲ್ಲಿ ರಾಮ್ಪಾಲ್ ಅವರನ್ನು ಬಂಧಿಸಲು ಬರ್ವಾಲಾದ ಸತ್ಲೋಕ್ ಆಶ್ರಮಕ್ಕೆ ತೆರಳಿದ್ದ ಪೊಲೀಸರ ಮೇಲೆ ಬೆಂಬಲಿಗರ ಪಡೆ ಕಲ್ಲು, ಲಾಠಿ, ಬಂದೂಕುಗಳಿಂದ ದಾಳಿ ನಡೆಸಿತ್ತು. ಬಾಬಾ ತನ್ನ ಸಾವಿರಾರು ಅನುಯಾಯಿಗಳನ್ನೇ ಮಾನವ ಗುರಾಣಿಯಂತೆ ಬಳಸಿದ್ದು ದೇಶದಾದ್ಯಂತ ಭಾರಿ ಸುದ್ದಿಯಾಗಿತ್ತು. ಈ ಹಿಂಸಾಚಾರದಲ್ಲಿ ಆರು ಜನ ಮೃತಪಟ್ಟಿದ್ದರು.</p>.<p>ದಿನವಿಡೀ ನಡೆಸಿದ ಕಾರ್ಯಾಚಾರಣೆಯ ನಂತರ ಪೊಲೀಸರು ರಾಮ್ಪಾಲ್ ಮತ್ತು ಬೆಂಬಲಿಗರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಂಧಿತರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 332, 353 ಅಡಿ ಹಲ್ಲೆ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು.</p>.<p>ಆಶ್ರಮದಲ್ಲಿ ಬಲವಂತವಾಗಿ ಕೂಡಿಟ್ಟಿದ್ದ 15 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಪೊಲೀಸರು ಆಶ್ರಮದಿಂದ ಬಿಡುಗಡೆ ಮಾಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>