<p><strong>ನವದೆಹಲಿ (ಪಿಟಿಐ): </strong>ಸ್ವಿಟ್ಜರ್ಲೆಂಡ್ ಬ್ಯಾಂಕ್ಗಳಲ್ಲಿ ಭಾರತೀಯರು ಹೊಂದಿರುವ ಬ್ಯಾಂಕ್ ಖಾತೆಗಳ ಕುರಿತು ಆ ದೇಶ ಮಾಹಿತಿ ನೀಡುತ್ತಿಲ್ಲ ಎಂದು ದೂರಿರುವ ಹಣಕಾಸು ಸಚಿವ ಪಿ. ಚಿದಂಬರಂ, ಇದೇ ರೀತಿಯ ಅಸಹಕಾರ ಮುಂದುವರೆದಲ್ಲಿ ಜಿ–20ಯಂತಹ ಬಹುರಾಷ್ಟ್ರೀಯ ವೇದಿಕೆಗಳ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.<br /> <br /> ಈ ಸಂಬಂಧ ಸ್ವಿಟ್ಜರ್ಲೆಂಡ್ ಹಣಕಾಸು ಸಚಿವೆ ಎವಿಲೆನ್ ವಿಡ್ಮಿರ್ ಶ್ಲಂಪ್ ಅವರಿಗೆ ಎರಡು ಪುಟಗಳ ಪತ್ರವೊಂದನ್ನು ಬರೆದಿರುವ ಚಿದಂಬರಂ, 2009ರ ಏಪ್ರಿಲ್ನಲ್ಲಿ ನಡೆದ ಜಿ–20 ರಾಷ್ಟ್ರಗಳ ನಾಯಕರ ಸಭೆಯಲ್ಲಿ ಕೈಗೊಂಡ ‘ಬ್ಯಾಂಕ್ ರಹಸ್ಯತೆಯ ಯುಗ ಕೊನೆಗೊಂಡಿದೆ’ ಎನ್ನುವ ಘೋಷಣೆಯನ್ನು ನೆನಪಿಸಿದ್ದಾರೆ.<br /> <br /> ಭವಿಷ್ಯದಲ್ಲಿ ಇದೇ ರೀತಿಯ ಅಸಹಕಾರ ಮುಂದುವರೆದಲ್ಲಿ ಸ್ವಿಟ್ಜರ್ಲೆಂಡ್ ಅನ್ನು ’ಅಸಹಕಾರ ವ್ಯಾಪ್ತಿ’ ಗೆ ಸೇರಿಸಬೇಕಾಗುತ್ತದೆ. ತೆರಿಗೆ ಅಧಿಕಾರಿಗಳಿಗೆ ಅಗತ್ಯವಾದ ಮಾಹಿತಿಯನ್ನು ಸ್ವಿಸ್ ಬ್ಯಾಂಕ್ಗಳು ನೀಡುತ್ತಿಲ್ಲ ಎಂದರು.<br /> <br /> ಪಾರದರ್ಶಕತೆಯ ಆಧುನಿಕತೆಗೆ ಒಗ್ಗಿಕೊಳ್ಳದ ಸ್ವಿಟ್ಜರ್ಲೆಂಡ್ ಈಗಲೂ ಬ್ಯಾಂಕ್ ಖಾತೆಗಳ ರಹಸ್ಯ ಕಾಪಾಡುವುದಕ್ಕೆ ಆದ್ಯತೆ ನೀಡಿದೆ ಎಂದು ಮಾ. 13ರಂದು ಬರೆದ ಪತ್ರದಲ್ಲಿ ಟೀಕಿಸಲಾಗಿದೆ.<br /> <br /> ಜಿ–20 ರಾಷ್ಟ್ರಗಳ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯದಂತೆ, ಬ್ಯಾಂಕ್ ಖಾತೆಗಳ ಮಾಹಿತಿ ನೀಡದೆ ಇದ್ದರೆ ಅಂತಹ ರಾಷ್ಟ್ರದ ಮೇಲೆ ಹಲವು ನಿರ್ಬಂಧಗಳನ್ನು ಹೇರಬಹುದಾಗಿದೆ. ಪಾರದರ್ಶಕತೆ ಪಾಲಿಸದ ಸ್ವಿಟ್ಜರ್ಲೆಂಡ್ ಧೋರಣೆಯನ್ನು ಜಾಗತಿಕ ವೇದಿಕೆಗಳಲ್ಲಿ ಪ್ರಸ್ತಾಪಿಸಲು ಭಾರತ ಹಿಂದೆಮುಂದೆ ನೋಡುವುದಿಲ್ಲ ಎಂದೂ ಪತ್ರದಲ್ಲಿ ಎಚ್ಚರಿಸಲಾಗಿದೆ.<br /> <br /> ಶೀಘ್ರ ಪ್ರತಿಕ್ರಿಯೆ: ಚಿದಂಬರಂ ಪತ್ರಕ್ಕೆ ಶೀಘ್ರ ಪ್ರತಿಕ್ರಿಯೆ ನೀಡುವುದಾಗಿ ಸ್ವಿಟ್ಜರ್ಲೆಂಡ್್ ಸರ್ಕಾರದ ವಕ್ತಾರರೊಬ್ಬರು ಗುರುವಾರ ಸಂಜೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಸ್ವಿಟ್ಜರ್ಲೆಂಡ್ ಬ್ಯಾಂಕ್ಗಳಲ್ಲಿ ಭಾರತೀಯರು ಹೊಂದಿರುವ ಬ್ಯಾಂಕ್ ಖಾತೆಗಳ ಕುರಿತು ಆ ದೇಶ ಮಾಹಿತಿ ನೀಡುತ್ತಿಲ್ಲ ಎಂದು ದೂರಿರುವ ಹಣಕಾಸು ಸಚಿವ ಪಿ. ಚಿದಂಬರಂ, ಇದೇ ರೀತಿಯ ಅಸಹಕಾರ ಮುಂದುವರೆದಲ್ಲಿ ಜಿ–20ಯಂತಹ ಬಹುರಾಷ್ಟ್ರೀಯ ವೇದಿಕೆಗಳ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.<br /> <br /> ಈ ಸಂಬಂಧ ಸ್ವಿಟ್ಜರ್ಲೆಂಡ್ ಹಣಕಾಸು ಸಚಿವೆ ಎವಿಲೆನ್ ವಿಡ್ಮಿರ್ ಶ್ಲಂಪ್ ಅವರಿಗೆ ಎರಡು ಪುಟಗಳ ಪತ್ರವೊಂದನ್ನು ಬರೆದಿರುವ ಚಿದಂಬರಂ, 2009ರ ಏಪ್ರಿಲ್ನಲ್ಲಿ ನಡೆದ ಜಿ–20 ರಾಷ್ಟ್ರಗಳ ನಾಯಕರ ಸಭೆಯಲ್ಲಿ ಕೈಗೊಂಡ ‘ಬ್ಯಾಂಕ್ ರಹಸ್ಯತೆಯ ಯುಗ ಕೊನೆಗೊಂಡಿದೆ’ ಎನ್ನುವ ಘೋಷಣೆಯನ್ನು ನೆನಪಿಸಿದ್ದಾರೆ.<br /> <br /> ಭವಿಷ್ಯದಲ್ಲಿ ಇದೇ ರೀತಿಯ ಅಸಹಕಾರ ಮುಂದುವರೆದಲ್ಲಿ ಸ್ವಿಟ್ಜರ್ಲೆಂಡ್ ಅನ್ನು ’ಅಸಹಕಾರ ವ್ಯಾಪ್ತಿ’ ಗೆ ಸೇರಿಸಬೇಕಾಗುತ್ತದೆ. ತೆರಿಗೆ ಅಧಿಕಾರಿಗಳಿಗೆ ಅಗತ್ಯವಾದ ಮಾಹಿತಿಯನ್ನು ಸ್ವಿಸ್ ಬ್ಯಾಂಕ್ಗಳು ನೀಡುತ್ತಿಲ್ಲ ಎಂದರು.<br /> <br /> ಪಾರದರ್ಶಕತೆಯ ಆಧುನಿಕತೆಗೆ ಒಗ್ಗಿಕೊಳ್ಳದ ಸ್ವಿಟ್ಜರ್ಲೆಂಡ್ ಈಗಲೂ ಬ್ಯಾಂಕ್ ಖಾತೆಗಳ ರಹಸ್ಯ ಕಾಪಾಡುವುದಕ್ಕೆ ಆದ್ಯತೆ ನೀಡಿದೆ ಎಂದು ಮಾ. 13ರಂದು ಬರೆದ ಪತ್ರದಲ್ಲಿ ಟೀಕಿಸಲಾಗಿದೆ.<br /> <br /> ಜಿ–20 ರಾಷ್ಟ್ರಗಳ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯದಂತೆ, ಬ್ಯಾಂಕ್ ಖಾತೆಗಳ ಮಾಹಿತಿ ನೀಡದೆ ಇದ್ದರೆ ಅಂತಹ ರಾಷ್ಟ್ರದ ಮೇಲೆ ಹಲವು ನಿರ್ಬಂಧಗಳನ್ನು ಹೇರಬಹುದಾಗಿದೆ. ಪಾರದರ್ಶಕತೆ ಪಾಲಿಸದ ಸ್ವಿಟ್ಜರ್ಲೆಂಡ್ ಧೋರಣೆಯನ್ನು ಜಾಗತಿಕ ವೇದಿಕೆಗಳಲ್ಲಿ ಪ್ರಸ್ತಾಪಿಸಲು ಭಾರತ ಹಿಂದೆಮುಂದೆ ನೋಡುವುದಿಲ್ಲ ಎಂದೂ ಪತ್ರದಲ್ಲಿ ಎಚ್ಚರಿಸಲಾಗಿದೆ.<br /> <br /> ಶೀಘ್ರ ಪ್ರತಿಕ್ರಿಯೆ: ಚಿದಂಬರಂ ಪತ್ರಕ್ಕೆ ಶೀಘ್ರ ಪ್ರತಿಕ್ರಿಯೆ ನೀಡುವುದಾಗಿ ಸ್ವಿಟ್ಜರ್ಲೆಂಡ್್ ಸರ್ಕಾರದ ವಕ್ತಾರರೊಬ್ಬರು ಗುರುವಾರ ಸಂಜೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>