ರಾಜ್ಯದ ವಿವಿಧೆಡೆ ಉತ್ಸವ ಹಾಗೂ ಸಮಾರಂಭಗಳು ನಡೆಯುತ್ತಿರುವುದರಿಂದ ಮುಂದಿನ ವರ್ಷದ ಆರಂಭದಿಂದಲೇ ಅಗತ್ಯ ಸಿದ್ಧತೆಗೆ ಪರಿಷತ್ತು ಮುಂದಾಗಿದೆ. ಈ ಮೊದಲು ಮಂಡ್ಯದಲ್ಲಿ ಇದೇ ವರ್ಷ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಿದ್ದ ಪರಿಷತ್ತು, ₹ 25 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಮಳೆ ಕೊರತೆ ಕಾರಣ ರಾಜ್ಯ ಸರ್ಕಾರ ವಿವಿಧ ತಾಲ್ಲೂಕುಗಳನ್ನು ‘ಬರಪೀಡಿತ’ ಎಂದು ಘೋಷಿಸಿದ ಬಳಿಕ ಸಮ್ಮೇಳನವನ್ನು ಮುಂದೂಡುವ ನಿರ್ಧಾರವನ್ನು ಪರಿಷತ್ತು ಕೈಗೊಂಡಿತ್ತು.