<p><strong>ರಾಮನಗರ:</strong> ತಾಲ್ಲೂಕಿನ ಕೈಲಾಂಚ ಗ್ರಾಮದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಜ್ಜಿ, ತುರಿಕೆಯಂತಹ ಚರ್ಮರೋಗದಿಂದ ಬಾಧೆ ಪಡುತ್ತಿದ್ದಾರೆ.</p>.<p>ವಸತಿ ನಿಲಯಕ್ಕೆ ಪ್ರತ್ಯೇಕ ನೀರಿನ ಸೌಲಭ್ಯ ಇಲ್ಲ. ಗ್ರಾಮ ಪಂಚಾಯಿತಿ ಎರಡು–ಮೂರು ದಿನಕ್ಕೊಮ್ಮೆ ಒಂದು ಗಂಟೆ ನೀರು ಪೂರೈಸುತ್ತದೆ. ಇದು ಅಡುಗೆ ಮತ್ತು ಮಕ್ಕಳ ನಿತ್ಯಕರ್ಮಕ್ಕೆ ಸಾಕಾಗುತ್ತಿದೆ. ವೈಯಕ್ತಿಕ ಸ್ವಚ್ಛತೆ ಕೊರತೆಯಿಂದ ಚರ್ಮರೋಗ ಉಲ್ಬಣಿಸಿದೆ.</p>.<p>ಐದಾರು ವಿದ್ಯಾರ್ಥಿಗಳಿಗೆ ಮೈಯೆಲ್ಲಕಜ್ಜಿ ಹಬ್ಬಿಕೊಂಡಿದೆ. ಹೊಟ್ಟೆ, ಗುಪ್ತಾಂಗ, ಪೃಷ್ಠದ ಹಿಂಭಾಗ ಚರ್ಮ ಕಿತ್ತು ರಕ್ತ ಸೋರುತ್ತಿದೆ. ಇನ್ನೂ ಹತ್ತಾರು ವಿದ್ಯಾರ್ಥಿಗಳಿಗೂ ಕಜ್ಜಿ ವ್ಯಾಪಿಸಿದೆ. ಇವರು ನಾಚಿಕೆಯಿಂದ ಪೋಷಕರು, ವೈದ್ಯರಲ್ಲೂ ಇದನ್ನು ಹೇಳಿಕೊಂಡಿಲ್ಲ. ಕ್ರಮೇಣ ಇತರ ವಿದ್ಯಾರ್ಥಿಗಳಿಗೂ ಚರ್ಮರೋಗ ಹಬ್ಬಿದೆ.</p>.<p class="Subhead"><strong>ಕಿರಿದಾದ ಕಟ್ಟಡ:</strong> ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಡೆದಿರುವ ವಸತಿ ಶಾಲೆಯಲ್ಲಿ ಪ.ಜಾತಿಯ 104 ಬಾಲಕರು, 28 ಬಾಲಕಿಯರು ಸೇರಿ ಒಟ್ಟು 132 ವಿದ್ಯಾರ್ಥಿಗಳು ಇಲ್ಲಿದ್ದಾರೆ.</p>.<p>ಆರರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳಾದ ಇವರನ್ನು ಎರಡು ಕಿರಿದಾದ ಕಟ್ಟಡಗಳಲ್ಲಿ ಇರಿಸಲಾಗಿದೆ. ಅಲ್ಲಿ ನಾಲ್ಕು ಕೊಠಡಿಗಳಷ್ಟೇ ಇವೆ. ಒಂದು ಕಟ್ಟಡದ ಎರಡು ಕೊಠಡಿಗಳು ಬಾಲಕಿಯರಿಗೆ. ಮತ್ತೊಂದು ಕಟ್ಟಡದಲ್ಲಿನ ಎರಡು ಕೊಠಡಿಗಳಲ್ಲಿ ನೂರು ಬಾಲಕರು ಇದ್ದಾರೆ.</p>.<p>ಮೂರು ಶೌಚಾಲಯ ಮತ್ತು ಸ್ನಾನದ ಗೃಹಗಳು ಇವೆ. ಒಂದು ಬಾಲಕಿಯರಿಗೆ ಮೀಸಲಿದ್ದು, ಸ್ವಚ್ಛತೆ ಇಲ್ಲ. ‘ನಳದಲ್ಲಿನ ನೀರು ಮುಖ ತೊಳೆಯಲು ಸಾಕಾಗುತ್ತದೆ ಅಷ್ಟೇ. ಕೆಲವೊಮ್ಮೆ ಬಟ್ಟೆ ಒಗೆಯಲೂ ನೀರು ಇರುವುದಿಲ್ಲ. ಊಟ–ತಿಂಡಿ ಚೆನ್ನಾಗಿಲ್ಲ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.</p>.<p><strong>ಗ್ರಾಮಸ್ಥರಿಂದ ತರಾಟೆ</strong><br />ವಿಷಯ ತಿಳಿದು ಸ್ಥಳೀಯರುಮಂಗಳವಾರ ವಿದ್ಯಾರ್ಥಿನಿಲಯಕ್ಕೆ ತೆರಳಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ನಂತರ ವೈದ್ಯರಿಂದ ಚಿಕಿತ್ಸೆಗೆ ಹಿರಿಯ ಅಧಿಕಾರಿಗಳು ವ್ಯವಸ್ಥೆ ಮಾಡಿದರು.</p>.<p>‘ಕಾಯಿಲೆ ಗುಣವಾಗುವವರೆಗೆ ಅವರ ಮನೆಗಳಿಗೇ ಕಳುಹಿಸಲು ತೀರ್ಮಾನಿಸಿದ್ದೇವೆ. ಈ ಬಗ್ಗೆ ಅವರ ಪೋಷಕರಿಗೆ ಮಾಹಿತಿ ನೀಡುತ್ತಿದ್ದೇವೆ’ ಎಂದು ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಚನ್ನಬಸಪ್ಪ ತಿಳಿಸಿದರು.</p>.<p>***</p>.<p>ವಸತಿ ಶಾಲೆಯಲ್ಲಿ ಕೊಳವೆಬಾವಿ ಇಲ್ಲದೆ ನೀರಿನ ಕೊರತೆ ಇದೆ. ಮಕ್ಕಳು ಶುಚಿತ್ವ ಕಾಪಾಡಿಕೊಳ್ಳಲು ಆಗಿಲ್ಲ. ಸದ್ಯದಲ್ಲೇ ಶಾಲೆಯನ್ನು ಬೇರೆಡೆಗೆ ಸ್ಥಳಾಂತರಿಸುತ್ತೇವೆ.<br /><strong>-ಚನ್ನಬಸಪ್ಪ,ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ, ರಾಮನಗರ</strong></p>.<p><strong>*</strong><br />ಕೇವಲ ಭಾನುವಾರ ಮಾತ್ರ ಸ್ನಾನ ಮಾಡುತ್ತೇವೆ. ಉಳಿದ ದಿನ ಸ್ನಾನಕ್ಕೆ, ಬಟ್ಟೆ ಒಗೆಯಲೂ ನೀರು ಸಿಗುವುದಿಲ್ಲ. ಶಾಲೆಯಲ್ಲಿನ 60 ಮಂದಿಗೆ ಕಜ್ಜಿ ಆಗಿದೆ.<br /><strong>-ನೊಂದ ವಿದ್ಯಾರ್ಥಿಗಳು,ಅಂಬೇಡ್ಕರ್ ವಸತಿ ಶಾಲೆ, ಕೈಲಾಂಚ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ:</strong> ತಾಲ್ಲೂಕಿನ ಕೈಲಾಂಚ ಗ್ರಾಮದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಜ್ಜಿ, ತುರಿಕೆಯಂತಹ ಚರ್ಮರೋಗದಿಂದ ಬಾಧೆ ಪಡುತ್ತಿದ್ದಾರೆ.</p>.<p>ವಸತಿ ನಿಲಯಕ್ಕೆ ಪ್ರತ್ಯೇಕ ನೀರಿನ ಸೌಲಭ್ಯ ಇಲ್ಲ. ಗ್ರಾಮ ಪಂಚಾಯಿತಿ ಎರಡು–ಮೂರು ದಿನಕ್ಕೊಮ್ಮೆ ಒಂದು ಗಂಟೆ ನೀರು ಪೂರೈಸುತ್ತದೆ. ಇದು ಅಡುಗೆ ಮತ್ತು ಮಕ್ಕಳ ನಿತ್ಯಕರ್ಮಕ್ಕೆ ಸಾಕಾಗುತ್ತಿದೆ. ವೈಯಕ್ತಿಕ ಸ್ವಚ್ಛತೆ ಕೊರತೆಯಿಂದ ಚರ್ಮರೋಗ ಉಲ್ಬಣಿಸಿದೆ.</p>.<p>ಐದಾರು ವಿದ್ಯಾರ್ಥಿಗಳಿಗೆ ಮೈಯೆಲ್ಲಕಜ್ಜಿ ಹಬ್ಬಿಕೊಂಡಿದೆ. ಹೊಟ್ಟೆ, ಗುಪ್ತಾಂಗ, ಪೃಷ್ಠದ ಹಿಂಭಾಗ ಚರ್ಮ ಕಿತ್ತು ರಕ್ತ ಸೋರುತ್ತಿದೆ. ಇನ್ನೂ ಹತ್ತಾರು ವಿದ್ಯಾರ್ಥಿಗಳಿಗೂ ಕಜ್ಜಿ ವ್ಯಾಪಿಸಿದೆ. ಇವರು ನಾಚಿಕೆಯಿಂದ ಪೋಷಕರು, ವೈದ್ಯರಲ್ಲೂ ಇದನ್ನು ಹೇಳಿಕೊಂಡಿಲ್ಲ. ಕ್ರಮೇಣ ಇತರ ವಿದ್ಯಾರ್ಥಿಗಳಿಗೂ ಚರ್ಮರೋಗ ಹಬ್ಬಿದೆ.</p>.<p class="Subhead"><strong>ಕಿರಿದಾದ ಕಟ್ಟಡ:</strong> ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಡೆದಿರುವ ವಸತಿ ಶಾಲೆಯಲ್ಲಿ ಪ.ಜಾತಿಯ 104 ಬಾಲಕರು, 28 ಬಾಲಕಿಯರು ಸೇರಿ ಒಟ್ಟು 132 ವಿದ್ಯಾರ್ಥಿಗಳು ಇಲ್ಲಿದ್ದಾರೆ.</p>.<p>ಆರರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳಾದ ಇವರನ್ನು ಎರಡು ಕಿರಿದಾದ ಕಟ್ಟಡಗಳಲ್ಲಿ ಇರಿಸಲಾಗಿದೆ. ಅಲ್ಲಿ ನಾಲ್ಕು ಕೊಠಡಿಗಳಷ್ಟೇ ಇವೆ. ಒಂದು ಕಟ್ಟಡದ ಎರಡು ಕೊಠಡಿಗಳು ಬಾಲಕಿಯರಿಗೆ. ಮತ್ತೊಂದು ಕಟ್ಟಡದಲ್ಲಿನ ಎರಡು ಕೊಠಡಿಗಳಲ್ಲಿ ನೂರು ಬಾಲಕರು ಇದ್ದಾರೆ.</p>.<p>ಮೂರು ಶೌಚಾಲಯ ಮತ್ತು ಸ್ನಾನದ ಗೃಹಗಳು ಇವೆ. ಒಂದು ಬಾಲಕಿಯರಿಗೆ ಮೀಸಲಿದ್ದು, ಸ್ವಚ್ಛತೆ ಇಲ್ಲ. ‘ನಳದಲ್ಲಿನ ನೀರು ಮುಖ ತೊಳೆಯಲು ಸಾಕಾಗುತ್ತದೆ ಅಷ್ಟೇ. ಕೆಲವೊಮ್ಮೆ ಬಟ್ಟೆ ಒಗೆಯಲೂ ನೀರು ಇರುವುದಿಲ್ಲ. ಊಟ–ತಿಂಡಿ ಚೆನ್ನಾಗಿಲ್ಲ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.</p>.<p><strong>ಗ್ರಾಮಸ್ಥರಿಂದ ತರಾಟೆ</strong><br />ವಿಷಯ ತಿಳಿದು ಸ್ಥಳೀಯರುಮಂಗಳವಾರ ವಿದ್ಯಾರ್ಥಿನಿಲಯಕ್ಕೆ ತೆರಳಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ನಂತರ ವೈದ್ಯರಿಂದ ಚಿಕಿತ್ಸೆಗೆ ಹಿರಿಯ ಅಧಿಕಾರಿಗಳು ವ್ಯವಸ್ಥೆ ಮಾಡಿದರು.</p>.<p>‘ಕಾಯಿಲೆ ಗುಣವಾಗುವವರೆಗೆ ಅವರ ಮನೆಗಳಿಗೇ ಕಳುಹಿಸಲು ತೀರ್ಮಾನಿಸಿದ್ದೇವೆ. ಈ ಬಗ್ಗೆ ಅವರ ಪೋಷಕರಿಗೆ ಮಾಹಿತಿ ನೀಡುತ್ತಿದ್ದೇವೆ’ ಎಂದು ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಚನ್ನಬಸಪ್ಪ ತಿಳಿಸಿದರು.</p>.<p>***</p>.<p>ವಸತಿ ಶಾಲೆಯಲ್ಲಿ ಕೊಳವೆಬಾವಿ ಇಲ್ಲದೆ ನೀರಿನ ಕೊರತೆ ಇದೆ. ಮಕ್ಕಳು ಶುಚಿತ್ವ ಕಾಪಾಡಿಕೊಳ್ಳಲು ಆಗಿಲ್ಲ. ಸದ್ಯದಲ್ಲೇ ಶಾಲೆಯನ್ನು ಬೇರೆಡೆಗೆ ಸ್ಥಳಾಂತರಿಸುತ್ತೇವೆ.<br /><strong>-ಚನ್ನಬಸಪ್ಪ,ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ, ರಾಮನಗರ</strong></p>.<p><strong>*</strong><br />ಕೇವಲ ಭಾನುವಾರ ಮಾತ್ರ ಸ್ನಾನ ಮಾಡುತ್ತೇವೆ. ಉಳಿದ ದಿನ ಸ್ನಾನಕ್ಕೆ, ಬಟ್ಟೆ ಒಗೆಯಲೂ ನೀರು ಸಿಗುವುದಿಲ್ಲ. ಶಾಲೆಯಲ್ಲಿನ 60 ಮಂದಿಗೆ ಕಜ್ಜಿ ಆಗಿದೆ.<br /><strong>-ನೊಂದ ವಿದ್ಯಾರ್ಥಿಗಳು,ಅಂಬೇಡ್ಕರ್ ವಸತಿ ಶಾಲೆ, ಕೈಲಾಂಚ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>