<p><strong>ಬೆಂಗಳೂರು:</strong> ‘ವಿ.ವಿಗಳಲ್ಲಿ ನೇಮಕಾತಿಗಳಿಗೆ ಹಣ ಕೊಡಬೇಕಾಗಿದೆ’ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹಿಂದೆ ಮಾಡಿದ್ದ ಆರೋಪ ವಿಧಾನಸಭೆಯಲ್ಲಿ ಪ್ರಸ್ತಾಪಗೊಂಡು, ಬಿಜೆಪಿಯ ಡಾ.ಸಿ.ಎನ್. ಅಶ್ವತ್ಥನಾರಾಯಣ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವೆ ವಾಕ್ಸಮರ ನಡೆಯಿತು.</p> <p>ಮಾತು ವೈಯಕ್ತಿಕ ಟೀಕೆಗೆ ತಿರುಗಿತು. ‘ಹಿಂದಿನ ಸರ್ಕಾರ ಶೇ 40 ಕಮಿಷನ್ ಸರ್ಕಾರ’ ಎಂಬ ಪ್ರಿಯಾಂಕ್ ಆರೋಪಕ್ಕೆ, ‘ನಿಮ್ಮದು ಶೇ 100 ಕಮಿಷನ್ ಸರ್ಕಾರ’ ಎಂದು ಅಶ್ವತ್ಥನಾರಾಯಣ ತಿರುಗೇಟು ನೀಡಿ<br>ದರು. ಮಧ್ಯಪ್ರವೇಶಿಸಿದ ಸಚಿವ ಎಂ.ಸಿ.ಸುಧಾಕರ್, ‘ನಿಮ್ಮ ಅವಧಿ ಯಲ್ಲಿ ಶಿಕ್ಷಣದ ಖಾಸಗೀಕರಣಕ್ಕೆ ಹೋಗಿದ್ದೀರಿ’ ಎಂದು ಟೀಕಿಸಿದರು. ಅದಕ್ಕೆ ಅಶ್ವತ್ಥನಾರಾಯಣ, ‘ನಿಮ್ಮ ಮಗನನ್ನು ಸರ್ಕಾರಿ ಕಾಲೇಜಿನಲ್ಲಿ ಓದಿಸುತ್ತಿದ್ದೀರಾ? ನೈತಿಕತೆ ಇಲ್ಲವೇ ’ ಎಂದು ಪ್ರಶ್ನಿಸಿದರು. </p> <p>ಅಶ್ವತ್ಥನಾರಾಯಣ ಅವರು ರಾತ್ರಿ ಬಜೆಟ್ ಮೇಲೆ ಮಾತನಾಡುವಾಗ ಸಚಿವ ಪ್ರಿಯಾಂಕ್ ಅಡ್ಡಿಪಡಿಸಿದರೆಂದು, ‘ಪದೇ ಪದೇ ನಿಲ್ಲುತ್ತಿರಲ್ಲ ಪೈಲ್ಸ್ ಆಗಿದೆಯೆ’ ಎಂದು ಹೇಳಿದ್ದು, ವಾಕ್ಸಮರಕ್ಕೆ ಕಾರಣವಾಯಿತು.</p> <p>ಅಶ್ವತ್ಥನಾರಾಯಣ ಬಳಸಿದ ಪದದ ಬಗ್ಗೆ ಸಚಿವ ದಿನೇಶ ಮತ್ತು ಇತರರು ಆಕ್ಷೇಪಿಸಿ, ಕ್ಷಮೆಗೆ ಆಗ್ರಹಿಸಿದರು. ಮೊದಲು ‘ಪದ ಹಿಂಪಡೆದಿದ್ದೇನೆ’ ಎಂದ ಅಶ್ವತ್ಥನಾರಾಯಣ, ನಂತರ ‘ಪ್ರಿಯಾಂಕ್ ಅವರಲ್ಲಿ ಕ್ಷಮೆ ಕೇಳುತ್ತೇನೆ’ ಎಂದರು.</p>.<div><blockquote>‘ನಿಮ್ಮ ಕುಟುಂಬದ ಭ್ರಷ್ಟಾಚಾರ ಇಡೀ ದೇಶಕ್ಕೆ ಗೊತ್ತಿದೆ. ಬರೀ ಅಪ್ಪ–ಮಕ್ಕಳ ಪಕ್ಷವಾಗಿದೆ’ <br></blockquote><span class="attribution">ಅಶ್ವತ್ಥನಾರಾಯಣ, ಬಿಜೆಪಿ ಶಾಸಕ</span></div>.<div><blockquote>ಬಿಜೆಪಿಯವರಿಗೆ ನನ್ನ ಬಗ್ಗೆ ಅಸಹನೆ ಏಕೆ? ನನ್ನನ್ನು ಕಾನ್ವೆಂಟ್ ದಲಿತ ಎನ್ನುತ್ತಾರೆ. ಸರ್ಕಾರಿ ದಲಿತ ಎನ್ನುತ್ತಾರೆ. ನೀವೆಲ್ಲ ಮನುಸ್ಮೃತಿಯವರು</blockquote><span class="attribution"> ಪ್ರಿಯಾಂಕ್ ಖರ್ಗೆ ಸಚಿವ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ವಿ.ವಿಗಳಲ್ಲಿ ನೇಮಕಾತಿಗಳಿಗೆ ಹಣ ಕೊಡಬೇಕಾಗಿದೆ’ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹಿಂದೆ ಮಾಡಿದ್ದ ಆರೋಪ ವಿಧಾನಸಭೆಯಲ್ಲಿ ಪ್ರಸ್ತಾಪಗೊಂಡು, ಬಿಜೆಪಿಯ ಡಾ.ಸಿ.ಎನ್. ಅಶ್ವತ್ಥನಾರಾಯಣ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವೆ ವಾಕ್ಸಮರ ನಡೆಯಿತು.</p> <p>ಮಾತು ವೈಯಕ್ತಿಕ ಟೀಕೆಗೆ ತಿರುಗಿತು. ‘ಹಿಂದಿನ ಸರ್ಕಾರ ಶೇ 40 ಕಮಿಷನ್ ಸರ್ಕಾರ’ ಎಂಬ ಪ್ರಿಯಾಂಕ್ ಆರೋಪಕ್ಕೆ, ‘ನಿಮ್ಮದು ಶೇ 100 ಕಮಿಷನ್ ಸರ್ಕಾರ’ ಎಂದು ಅಶ್ವತ್ಥನಾರಾಯಣ ತಿರುಗೇಟು ನೀಡಿ<br>ದರು. ಮಧ್ಯಪ್ರವೇಶಿಸಿದ ಸಚಿವ ಎಂ.ಸಿ.ಸುಧಾಕರ್, ‘ನಿಮ್ಮ ಅವಧಿ ಯಲ್ಲಿ ಶಿಕ್ಷಣದ ಖಾಸಗೀಕರಣಕ್ಕೆ ಹೋಗಿದ್ದೀರಿ’ ಎಂದು ಟೀಕಿಸಿದರು. ಅದಕ್ಕೆ ಅಶ್ವತ್ಥನಾರಾಯಣ, ‘ನಿಮ್ಮ ಮಗನನ್ನು ಸರ್ಕಾರಿ ಕಾಲೇಜಿನಲ್ಲಿ ಓದಿಸುತ್ತಿದ್ದೀರಾ? ನೈತಿಕತೆ ಇಲ್ಲವೇ ’ ಎಂದು ಪ್ರಶ್ನಿಸಿದರು. </p> <p>ಅಶ್ವತ್ಥನಾರಾಯಣ ಅವರು ರಾತ್ರಿ ಬಜೆಟ್ ಮೇಲೆ ಮಾತನಾಡುವಾಗ ಸಚಿವ ಪ್ರಿಯಾಂಕ್ ಅಡ್ಡಿಪಡಿಸಿದರೆಂದು, ‘ಪದೇ ಪದೇ ನಿಲ್ಲುತ್ತಿರಲ್ಲ ಪೈಲ್ಸ್ ಆಗಿದೆಯೆ’ ಎಂದು ಹೇಳಿದ್ದು, ವಾಕ್ಸಮರಕ್ಕೆ ಕಾರಣವಾಯಿತು.</p> <p>ಅಶ್ವತ್ಥನಾರಾಯಣ ಬಳಸಿದ ಪದದ ಬಗ್ಗೆ ಸಚಿವ ದಿನೇಶ ಮತ್ತು ಇತರರು ಆಕ್ಷೇಪಿಸಿ, ಕ್ಷಮೆಗೆ ಆಗ್ರಹಿಸಿದರು. ಮೊದಲು ‘ಪದ ಹಿಂಪಡೆದಿದ್ದೇನೆ’ ಎಂದ ಅಶ್ವತ್ಥನಾರಾಯಣ, ನಂತರ ‘ಪ್ರಿಯಾಂಕ್ ಅವರಲ್ಲಿ ಕ್ಷಮೆ ಕೇಳುತ್ತೇನೆ’ ಎಂದರು.</p>.<div><blockquote>‘ನಿಮ್ಮ ಕುಟುಂಬದ ಭ್ರಷ್ಟಾಚಾರ ಇಡೀ ದೇಶಕ್ಕೆ ಗೊತ್ತಿದೆ. ಬರೀ ಅಪ್ಪ–ಮಕ್ಕಳ ಪಕ್ಷವಾಗಿದೆ’ <br></blockquote><span class="attribution">ಅಶ್ವತ್ಥನಾರಾಯಣ, ಬಿಜೆಪಿ ಶಾಸಕ</span></div>.<div><blockquote>ಬಿಜೆಪಿಯವರಿಗೆ ನನ್ನ ಬಗ್ಗೆ ಅಸಹನೆ ಏಕೆ? ನನ್ನನ್ನು ಕಾನ್ವೆಂಟ್ ದಲಿತ ಎನ್ನುತ್ತಾರೆ. ಸರ್ಕಾರಿ ದಲಿತ ಎನ್ನುತ್ತಾರೆ. ನೀವೆಲ್ಲ ಮನುಸ್ಮೃತಿಯವರು</blockquote><span class="attribution"> ಪ್ರಿಯಾಂಕ್ ಖರ್ಗೆ ಸಚಿವ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>