ಇಲ್ಲಿನ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಸಿ.ಟಿ.ರವಿ,‘ನಿಮ್ಮ ಓಟು ಹನುಮಪ್ಪನಿಗೆ ನ್ಯಾಯ ಕೊಡಲಿಕ್ಕೆ ಅಂತ ನೆನಪಿಟ್ಟುಕೊಳ್ಳಿ. ರಾಜ್ಯಕ್ಕೆ, ಮಂಡ್ಯಕ್ಕೆ ನೀರು ಕೊಟ್ಟಿದ್ದು ಟಿಪ್ಪು, ಅವನಪ್ಪ ಅಲ್ಲ. ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ.ವಿಶ್ವೇಶ್ವರಯ್ಯ. ಮೈಸೂರು ಸಿಲ್ಕ್ಸ್, ಪೇಪರ್ಮಿಲ್, ಮೈಸೂರು ವಿಶ್ವವಿದ್ಯಾಲಯವನ್ನು ಟಿಪ್ಪು, ಅವನಪ್ಪ ಮಾಡಿದ್ದಲ್ಲ’ ಎಂದು ಪ್ರತಿಪಾದಿಸಿದರು.