ಬಂಡಿಗಣಿ ಗ್ರಾಮದ ಭಾಗ್ಯಶ್ರೀ ಮಠದ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. 12 ವರ್ಷದ ಶಿವಾನಿ, 10 ವರ್ಷದ ಶಿವಶಂಕರ ಹಾಗೂ 9 ವರ್ಷದ ಶಿವಸ್ತೀ ಮೃತಪಟ್ಟ ಮಕ್ಕಳು. ಬಂಡಿಗಣಿ ಸಮೀಪದ ಅರಣ್ಯಪ್ರದೇಶದಲ್ಲಿ ದೇವರ ದರ್ಶನಕ್ಕೆಂದು ಮಕ್ಕಳನ್ನು ಕರೆದೊಯ್ದಿದ್ದ ಭಾಗ್ಯಶ್ರೀ, ಕುಡಿಯುವ ನೀರಿನಲ್ಲಿ ವಿಷ ಬೆರೆಸಿ ಮಕ್ಕಳಿಗೆ ಕುಡಿಸಿದ್ದಾರೆ. ನಂತರ ತಾವು ಕುಡಿದಿದ್ದಾರೆ. ಅವರ ಆರೋಗ್ಯಸ್ಥಿತಿ ಗಂಭೀರವಾಗಿದೆ. ಮಹಾಲಿಂಗಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.