‘ಲಹರ್ ಸಿಂಗ್ ಬ್ರೋಕರೇಜ್ ವಿಫಲ’
‘ಬಿಜೆಪಿಯ ಲಹರ್ ಸಿಂಗ್ ಅವರದ್ದು ‘ಪೊಲಿಟಿಕಲ್ ಬ್ರೋಕರೇಜ್ ಕೆಲಸ’. ಈ ಕೆಲಸಕ್ಕೆ ಕನ್ನಡದಲ್ಲೇ ಒಂದು ಹೆಸರಿದೆ. ಆದರೆ ಅದನ್ನು ನಾನು ಹೇಳುವುದಿಲ್ಲ. ಕರ್ನಾಟಕದಲ್ಲೂ ಆ ಕೆಲಸ ಮಾಡಲು ಅವರು ಯತ್ನಿಸಿದರು. ಆದರೆ ಇಲ್ಲಿ ಅದು ನಡೆಯಲಿಲ್ಲ. ತಾನು ಸಕ್ರಿಯವಾಗಿದ್ದೇನೆ ಎಂದು ಬಿಜೆಪಿ ವರಿಷ್ಠರಿಗೆ ತೋರಿಸಿಕೊಳ್ಳಲು ಕಾಂಗ್ರೆಸ್ ನಾಯಕರ ವಿರುದ್ಧ ದೂರು ನೀಡುವ ಮತ್ತು ಆರೋಪ ಮಾಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ತಮ್ಮ ವಿರುದ್ಧ ಲಹರ್ ಸಿಂಗ್ ಅವರು ಮಾಡಿರುವ ಆರೋಪಗಳ ಬಗ್ಗೆ ಪ್ರಶ್ನಿಸಿದಾಗ ಪ್ರಿಯಾಂಕ್ ‘ಇಲ್ಲಸಲ್ಲದ ಆರೋಪ ಮಾಡುವವರ ವಿರುದ್ಧ ನಮ್ಮ ಕುಟುಂಬ ಮಾನನಷ್ಟ ಮೊಕದ್ದಮೆ ಹೂಡಲಿದೆ. ಹಲವು ದಿನಗಳ ಹಿಂದೆ ಅವರು ಸರ್ಕಾರದ ವಿರುದ್ಧ ಹತ್ತಾರು ಆರೋಪಗಳನ್ನು ಮಾಡಿದ್ದರು. ಈಗ ಆ ಆರೋಪಗಳೆಲ್ಲಾ ಎಲ್ಲಿ ಹೋದವು’ ಎಂದು ಪ್ರಶ್ನಿಸಿದರು.