ಅಮೃತ ಮಹೋತ್ಸವದ ಸಡಗರದಲ್ಲಿರುವ ‘ಪ್ರಜಾವಾಣಿ’ ಜೊತೆಗಿನ ನಂಟನ್ನು ಹಂಚಿಕೊಂಡಿರುವ ಸಾಹಿತಿ, ಚಿಂತಕ ಬರಗೂರು ರಾಮಚಂದ್ರಪ್ಪ, ಕರ್ನಾಟಕದ ಬಹುಪಾಲು ಜನಪರ ಚಳವಳಿಗಳ ಪರವಾಗಿ ಪತ್ರಿಕೆ ನಿಂತಿದ್ದರ ಕುರಿತು ಮೆಲುಕು ಹಾಕಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತಿದೆ ಎನ್ನುವಂತಹ ಸಂದರ್ಭದಲ್ಲೆಲ್ಲ ‘ಪ್ರಜಾವಾಣಿ’ ಧ್ವನಿ ಎತ್ತಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಬರಗೂರು ರಾಮಚಂದ್ರಪ್ಪ.