ನಾಡಿನ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಆರ್ ಬೊಮ್ಮಾಯಿ ಅವರ ಪುತ್ರರಾದ ಬಸವರಾಜ ಬೊಮ್ಮಾಯಿ, ರಾಜ್ಯ ರಾಜಕಾರಣದಲ್ಲಿ ವಿನಯಶೀಲ ವ್ಯಕ್ತಿತ್ವದಿಂದಲೇ ಹೆಸರಾದವರು. ಮೂಲತಃ ಜನತಾ ಪರಿವಾರದವರಾದ ಬೊಮ್ಮಾಯಿ ಅವರ ರಾಜಕೀಯ ಬದುಕು ಉಜ್ವಲಗೊಂಡಿದ್ದು ಮಾತ್ರ ಬಿಜೆಪಿಯಲ್ಲಿ. ಅವರ ರಾಜಕೀಯ ಯಾನದ ಮೈಲುಗಲ್ಲುಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.