ಕೊರೊನಾ ಹಾವಳಿಯಿಂದಾಗಿ ಒಂದು ವಾರದಿಂದ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಹಂತಹಂತವಾಗಿ ಎಲ್ಲ ಬಸ್, ರೈಲುಗಳನ್ನು ರದ್ದುಗೊಳಿಸಲಾಗಿದೆ. ಹೀಗಾಗಿ, ಬಸ್ ನಿಲ್ದಾಣಕ್ಕೆ ಯಾರೂ ಬರುತ್ತಿಲ್ಲ. ರಸ್ತೆಯ ಮೇಲೂ ಸಂಚರಿಸುತ್ತಿಲ್ಲ. ಅಂಗಡಿಗಳೆಲ್ಲ ಬಂದ್ ಆಗಿವೆ. ಕಣ್ಣಿ ಮಾರ್ಕೆಟ್ ಅನ್ನು ಸಹ ಪೊಲೀಸರು ತೆರವುಗೊಳಿಸಿದ್ದಾರೆ. ಹೀಗಾಗಿ, ಜನಸಂಚಾರವೇ ಇಲ್ಲದ್ದರಿಂದ ದಿನದ ಭಿಕ್ಷೆಯೂ ಹುಟ್ಟುತ್ತಿಲ್ಲ. ಅಳಿದುಳಿದ ಭಿಕ್ಷೆಯ ಹಣದಿಂದ ಚಹಾದ ಅಂಗಡಿಯಲ್ಲಿ ಏನಾದರೂ ಖರೀದಿಸೋಣ ಎಂದರೆ ಏನೂ ಸಿಗುತ್ತಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ‘ಪ್ರಜಾವಾಣಿ’ ಪ್ರತಿನಿಧಿ ಎದುರು ಅಸಹಾಯಕರಾಗಿ ನುಡಿದರು.