ಬಳಿಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಲು ಮುಂದಾದರು. ಆಗ ಮಧ್ಯ ಪ್ರವೇಶಿಸಿದ ಕಾಂಗ್ರೆಸ್ನ ಪ್ರಿಯಾಂಕ್ ಖರ್ಗೆ, ‘ಈಶ್ವರಪ್ಪ ಅಂತೂ ಮುಖ್ಯಮಂತ್ರಿ ಆಗುವುದಿಲ್ಲ. ಆದರೂ, ಯಾಕೆ ಇಷ್ಟು ಮಾತನಾಡುತ್ತಾರೊ?’ ಎಂದು ಕೇಳಿದರು. ಬಿಜೆಪಿಯವರು, ‘ಜೈ ಶ್ರೀರಾಮ್’ ಎಂದರೆ ಕಾಂಗ್ರೆಸ್ನವರು, ‘ಜೈ ಹನುಮಾನ್’ ಎಂದು ಘೋಷಣೆ ಹಾಕಿದರು.