<p><strong>ಬೆಂಗಳೂರು:</strong> ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೇಳಿಕೊಟ್ಟಿದ್ದನ್ನು ಹಾದಿ-ಬೀದಿಯಲ್ಲಿ ಹೇಳುವಂತವರಾಗಬೇಡಿ. ಇದು ನಿಮ್ಮ ಅಪ್ರಬುದ್ದತೆಯನ್ನು ಎತ್ತಿ ತೋರಿಸುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಎನ್. ರವಿಕುಮಾರ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ಹೇಳಿದ್ದಾರೆ.<br /><br />ರಾಜ್ಯ ಸರ್ಕಾರದ ವಿರುದ್ಧ ಶೇ 40 ರ ಲಂಚದ ಸರ್ಕಾರ ಎಂಬ ರಾಹುಲ್ ಟೀಕೆಯನ್ನು ಖಂಡಿಸಿರುವ ಅವರು, ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ. ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ, ಸುಖಾ ಸುಮ್ಮನೆ, ಪ್ರಚಾರಕ್ಕಾಗಿ ಆರೋಪ ಮಾಡಬೇಡಿ ಎಂದಿದ್ದಾರೆ.</p>.<p>ಈ ಹಿಂದಿನ ಕೇಂದ್ರದ ಮನಮೋಹನ ಸಿಂಗ್ ಮತ್ತು ರಾಜ್ಯದ ಸಿದ್ದರಾಮಯ್ಯ ಸರ್ಕಾರವೇ ಸಾಲು ಸಾಲು ಹಗರಣಗಳಲ್ಲಿ ಭಾಗಿಯಾಗಿತ್ತು ಎಂಬುವುದನ್ನು ನೀವು ಮರೆತಿದ್ದೀರಿ ಎಂದು ಅವರು ನೆನಪಿಸಿದ್ದಾರೆ.</p>.<p>ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಮಕ್ಕಳಿಗಾಗಿ ಹಾಸಿಗೆ, ತಲೆದಿಂಬು ಖರೀದಿಸಿದಾಗ ಅಕ್ರಮ ನಡೆದಿತ್ತು.<br />ಅರ್ಕಾವತಿ ಬಡಾವಣೆಯ ರೀಡೂ, ಮರಳು ಲೂಟಿ, ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಖರೀದಿಯಲ್ಲಿ ಅಕ್ರಮ , ಬಿಬಿಎಂಪಿ ಕಸ ಹಾಗೂ ಕೊಳಗೇರಿ ಮಂಡಳಿಯ ಹಗರಣಗಳು ನಡೆದಿದ್ದವು. ಇದನ್ನು ನಿಮಗೆ ನೆನಪಿಸುತ್ತಿದ್ದೇವೆ ಎಂದು ರವಿಕುಮಾರ್ ಹೇಳಿದ್ದಾರೆ.</p>.<p>ಕಾಂಗ್ರೆಸ್ ಪಕ್ಷದ ಸದ್ಯದ ಪರಿಸ್ಥಿತಿ ಜೈಲ್ ಕಾಂಗ್ರೆಸ್, ಬೇಲ್ ಕಾಂಗ್ರೆಸ್ ಎಂಬಂತಿದೆ. ಅಂತಹ ಪಕ್ಷದವರ ಉಪದೇಶ ಬಿಜೆಪಿಗೆ ಅವಶ್ಯ ಇಲ್ಲಎಂದಿದ್ದಾರೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೇಳಿಕೊಟ್ಟಿದ್ದನ್ನು ಹಾದಿ-ಬೀದಿಯಲ್ಲಿ ಹೇಳುವಂತವರಾಗಬೇಡಿ. ಇದು ನಿಮ್ಮ ಅಪ್ರಬುದ್ದತೆಯನ್ನು ಎತ್ತಿ ತೋರಿಸುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಎನ್. ರವಿಕುಮಾರ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ಹೇಳಿದ್ದಾರೆ.<br /><br />ರಾಜ್ಯ ಸರ್ಕಾರದ ವಿರುದ್ಧ ಶೇ 40 ರ ಲಂಚದ ಸರ್ಕಾರ ಎಂಬ ರಾಹುಲ್ ಟೀಕೆಯನ್ನು ಖಂಡಿಸಿರುವ ಅವರು, ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ. ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ, ಸುಖಾ ಸುಮ್ಮನೆ, ಪ್ರಚಾರಕ್ಕಾಗಿ ಆರೋಪ ಮಾಡಬೇಡಿ ಎಂದಿದ್ದಾರೆ.</p>.<p>ಈ ಹಿಂದಿನ ಕೇಂದ್ರದ ಮನಮೋಹನ ಸಿಂಗ್ ಮತ್ತು ರಾಜ್ಯದ ಸಿದ್ದರಾಮಯ್ಯ ಸರ್ಕಾರವೇ ಸಾಲು ಸಾಲು ಹಗರಣಗಳಲ್ಲಿ ಭಾಗಿಯಾಗಿತ್ತು ಎಂಬುವುದನ್ನು ನೀವು ಮರೆತಿದ್ದೀರಿ ಎಂದು ಅವರು ನೆನಪಿಸಿದ್ದಾರೆ.</p>.<p>ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಮಕ್ಕಳಿಗಾಗಿ ಹಾಸಿಗೆ, ತಲೆದಿಂಬು ಖರೀದಿಸಿದಾಗ ಅಕ್ರಮ ನಡೆದಿತ್ತು.<br />ಅರ್ಕಾವತಿ ಬಡಾವಣೆಯ ರೀಡೂ, ಮರಳು ಲೂಟಿ, ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಖರೀದಿಯಲ್ಲಿ ಅಕ್ರಮ , ಬಿಬಿಎಂಪಿ ಕಸ ಹಾಗೂ ಕೊಳಗೇರಿ ಮಂಡಳಿಯ ಹಗರಣಗಳು ನಡೆದಿದ್ದವು. ಇದನ್ನು ನಿಮಗೆ ನೆನಪಿಸುತ್ತಿದ್ದೇವೆ ಎಂದು ರವಿಕುಮಾರ್ ಹೇಳಿದ್ದಾರೆ.</p>.<p>ಕಾಂಗ್ರೆಸ್ ಪಕ್ಷದ ಸದ್ಯದ ಪರಿಸ್ಥಿತಿ ಜೈಲ್ ಕಾಂಗ್ರೆಸ್, ಬೇಲ್ ಕಾಂಗ್ರೆಸ್ ಎಂಬಂತಿದೆ. ಅಂತಹ ಪಕ್ಷದವರ ಉಪದೇಶ ಬಿಜೆಪಿಗೆ ಅವಶ್ಯ ಇಲ್ಲಎಂದಿದ್ದಾರೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>