<p><strong>ಬೆಂಗಳೂರು:</strong> ಬಹುತೇಕ ರಾಜಕಾರಣಗಳಿಗೆ ಸಂತೃಪ್ತಿ ಎನ್ನುವುದೇ ಇರುವುದಿಲ್ಲ. ಸಿಕ್ಕ ಸ್ಥಾನಮಾನ, ಅವಕಾಶಗಳನ್ನು ಸುದುದ್ದೇಶಕ್ಕೆ ಬಳಸಿಕೊಳ್ಳುವುದೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.</p>.<p>ಬೆಂಗಳೂರಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ನಮೋ ವಿದ್ಯಾನಿಧಿ ವಿದ್ಯಾರ್ಥಿವೇತನ’ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ರಾಜಕಾರಣಿಗಳು ಅಜೀರ್ಣವಾಗುವಷ್ಟು ಆಸ್ತಿ ಸಂಪಾದನೆ ಮಾಡಲು ಹೆಚ್ಚಿನ ಗಮನ ಹರಿಸುತ್ತಾರೆ. ಆ ಮೂಲಕ ಅವರ ಮುಂದಿನ ಪೀಳಿಗೆಯನ್ನೂ ಹಾಳು ಮಾಡುತ್ತಾರೆ. ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವ ಮನೋಭಾವ ಕಾಣದಾಗಿದೆ ಎಂದರು.</p>.<p>ದಾನಿಗಳ ಸಂಖ್ಯೆ ಈಚೆಗೆ ಕಡಿಮೆಯಾಗುತ್ತಿದೆ. ದಾವಣಗೆರೆಯಂತಹ ನಗರದಲ್ಲಿ ಹೆಜ್ಜೆಗೊಬ್ಬರು ದಾನಿ ಸಿಗುತ್ತಾರೆ. ಅಂತಹ ದಾನಿಗಳು ಕೊಟ್ಟ ಜಮೀನಿನಿಂದಲೇ ಅಲ್ಲಿ ಶಾಲೆ–ಕಾಲೇಜು, ಆಸ್ಪತ್ರೆ, ಧರ್ಮಛತ್ರಗಳು ತಲೆ ಎತ್ತಿವೆ. ಅಂತಹ ಮನಸ್ಥಿತಿ ಎಲ್ಲ ಜನರಲ್ಲೂ ಬರಬೇಕು. ರಾಜಕಾರಣಿಗಳು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.</p>.<p>ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ‘ಬಹಳಷ್ಟು ಪೋಷಕರು ಆರ್ಥಿಕ ಕಾರಣಗಳಿಗಾಗಿ ತಮ್ಮ ಮಕ್ಕಳ ಶಿಕ್ಷಣವನ್ನೇ ಸ್ಥಗಿತಗೊಳಿಸಿದ್ದಾರೆ. ಹಲವು ವಿದ್ಯಾರ್ಥಿಗಳ ಕನಸು ಇಂತಹದ್ದೇ ಕಾರಣಗಳಿಗಾಗಿ ಕಮರಿಹೋದ ಸನ್ನಿವೇಶಗಳಿವೆ. ಅದಕ್ಕಾಗಿಯೇ ನಮೋ ವಿದ್ಯಾನಿಧಿ ವಿದ್ಯಾರ್ಥಿ ವೇತನ ಜಾರಿಗೊಳಿಸಲಾಗಿದೆ’ ಎಂದರು.</p>.<p>‘ಹಲವು ದಾನಿಗಳು ನೆರವಾಗಿದ್ದಾರೆ. ಇದುವರೆಗೂ ₹12 ಕೋಟಿ ವಿತರಿಸಲಾಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ 200 ವಿದ್ಯಾರ್ಥಿಗಳು ಪ್ರಸಕ್ತ ವರ್ಷ ₹10 ಲಕ್ಷ ನೆರವು ಪಡೆದಿದ್ದಾರೆ. ಸಹಾಯ ಪಡೆದ ಮಕ್ಕಳು ಹೆಚ್ಚಿನ ಅಂಕಗಳನ್ನು ಗಳಿಸುವ ಮೂಲಕ ನಮ್ಮ ಪ್ರಯತ್ನಕ್ಕೆ ಹೆಚ್ಚಿನ ಬಲ ತುಂಬಿದ್ದಾರೆ’ ಎಂದು ಶ್ಲಾಘಿಸಿದರು.</p>.<p>ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ವಿದ್ಯಾನಿಧಿ ಟ್ರಸ್ಟಿಗಳಾದ ಎಸ್.ವಿ.ಎಸ್. ಗುಪ್ತಾ, ಗುರುಪ್ರಸಾದ್ ಮಾಕಮ್ ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಹುತೇಕ ರಾಜಕಾರಣಗಳಿಗೆ ಸಂತೃಪ್ತಿ ಎನ್ನುವುದೇ ಇರುವುದಿಲ್ಲ. ಸಿಕ್ಕ ಸ್ಥಾನಮಾನ, ಅವಕಾಶಗಳನ್ನು ಸುದುದ್ದೇಶಕ್ಕೆ ಬಳಸಿಕೊಳ್ಳುವುದೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.</p>.<p>ಬೆಂಗಳೂರಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ನಮೋ ವಿದ್ಯಾನಿಧಿ ವಿದ್ಯಾರ್ಥಿವೇತನ’ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ರಾಜಕಾರಣಿಗಳು ಅಜೀರ್ಣವಾಗುವಷ್ಟು ಆಸ್ತಿ ಸಂಪಾದನೆ ಮಾಡಲು ಹೆಚ್ಚಿನ ಗಮನ ಹರಿಸುತ್ತಾರೆ. ಆ ಮೂಲಕ ಅವರ ಮುಂದಿನ ಪೀಳಿಗೆಯನ್ನೂ ಹಾಳು ಮಾಡುತ್ತಾರೆ. ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವ ಮನೋಭಾವ ಕಾಣದಾಗಿದೆ ಎಂದರು.</p>.<p>ದಾನಿಗಳ ಸಂಖ್ಯೆ ಈಚೆಗೆ ಕಡಿಮೆಯಾಗುತ್ತಿದೆ. ದಾವಣಗೆರೆಯಂತಹ ನಗರದಲ್ಲಿ ಹೆಜ್ಜೆಗೊಬ್ಬರು ದಾನಿ ಸಿಗುತ್ತಾರೆ. ಅಂತಹ ದಾನಿಗಳು ಕೊಟ್ಟ ಜಮೀನಿನಿಂದಲೇ ಅಲ್ಲಿ ಶಾಲೆ–ಕಾಲೇಜು, ಆಸ್ಪತ್ರೆ, ಧರ್ಮಛತ್ರಗಳು ತಲೆ ಎತ್ತಿವೆ. ಅಂತಹ ಮನಸ್ಥಿತಿ ಎಲ್ಲ ಜನರಲ್ಲೂ ಬರಬೇಕು. ರಾಜಕಾರಣಿಗಳು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.</p>.<p>ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ‘ಬಹಳಷ್ಟು ಪೋಷಕರು ಆರ್ಥಿಕ ಕಾರಣಗಳಿಗಾಗಿ ತಮ್ಮ ಮಕ್ಕಳ ಶಿಕ್ಷಣವನ್ನೇ ಸ್ಥಗಿತಗೊಳಿಸಿದ್ದಾರೆ. ಹಲವು ವಿದ್ಯಾರ್ಥಿಗಳ ಕನಸು ಇಂತಹದ್ದೇ ಕಾರಣಗಳಿಗಾಗಿ ಕಮರಿಹೋದ ಸನ್ನಿವೇಶಗಳಿವೆ. ಅದಕ್ಕಾಗಿಯೇ ನಮೋ ವಿದ್ಯಾನಿಧಿ ವಿದ್ಯಾರ್ಥಿ ವೇತನ ಜಾರಿಗೊಳಿಸಲಾಗಿದೆ’ ಎಂದರು.</p>.<p>‘ಹಲವು ದಾನಿಗಳು ನೆರವಾಗಿದ್ದಾರೆ. ಇದುವರೆಗೂ ₹12 ಕೋಟಿ ವಿತರಿಸಲಾಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ 200 ವಿದ್ಯಾರ್ಥಿಗಳು ಪ್ರಸಕ್ತ ವರ್ಷ ₹10 ಲಕ್ಷ ನೆರವು ಪಡೆದಿದ್ದಾರೆ. ಸಹಾಯ ಪಡೆದ ಮಕ್ಕಳು ಹೆಚ್ಚಿನ ಅಂಕಗಳನ್ನು ಗಳಿಸುವ ಮೂಲಕ ನಮ್ಮ ಪ್ರಯತ್ನಕ್ಕೆ ಹೆಚ್ಚಿನ ಬಲ ತುಂಬಿದ್ದಾರೆ’ ಎಂದು ಶ್ಲಾಘಿಸಿದರು.</p>.<p>ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ವಿದ್ಯಾನಿಧಿ ಟ್ರಸ್ಟಿಗಳಾದ ಎಸ್.ವಿ.ಎಸ್. ಗುಪ್ತಾ, ಗುರುಪ್ರಸಾದ್ ಮಾಕಮ್ ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>