<p><strong>ಬೆಂಗಳೂರು: </strong>ವೇತನ ಪರಿಷ್ಕರಣೆಗೆ ಆಗ್ರಹಿಸಿ ನಾಲ್ಕು ಸಾರಿಗೆ ನಿಗಮಗಳ ನೌಕರರು ನಡೆಸುತ್ತಿರುವ ಮುಷ್ಕರ ಹತ್ತು ದಿನಗಳನ್ನು ಪೂರೈಸಿದೆ. ಸರ್ಕಾರವೂ ಮತ್ತಷ್ಟು ಕಠಿಣ ಕ್ರಮಗಳತ್ತ ಹೆಜ್ಜೆ ಇರಿಸಿದ್ದು, ಮುಷ್ಕರದಲ್ಲಿ ಭಾಗಿಯಾಗಿರುವ ಕಾಯಂ ನೌಕರರನ್ನೂ ಸೇವೆಯಿಂದ ವಜಾಗೊಳಿಸುವ ಪ್ರಕ್ರಿಯೆಯನ್ನು ಶುಕ್ರವಾರದಿಂದ ಆರಂಭಿಸಿದೆ.</p>.<p>ಬಿಎಂಟಿಸಿ 240 ಕಾಯಂ ನೌಕರರನ್ನು ಸೇವೆಯಿಂದ ವಜಾಗೊಳಿಸಿ ಶುಕ್ರವಾರ ಆದೇಶ ಹೊರಡಿಸಿದೆ. ಈ ನೌಕರರನ್ನು ಅಮಾನತುಗೊಳಿಸಿ ಸೋಮವಾರ ಆದೇಶ ಹೊರಡಿಸಲಾಗಿತ್ತು. ತರಬೇತಿ ಮತ್ತು ಪ್ರೊಬೇಷನರಿ ಅವಧಿಯಲ್ಲಿದ್ದ 580 ನೌಕರರನ್ನು ಈ ಹಿಂದೆಯೇ ವಜಾ ಮಾಡಲಾಗಿತ್ತು. ಬಿಎಂಟಿಸಿಯಿಂದ ವಜಾಗೊಂಡ ಕಾರ್ಮಿಕರ ಸಂಖ್ಯೆ 820ಕ್ಕೆ ಏರಿದೆ. 727 ಮಂದಿ ಅಮಾನತಿನಲ್ಲಿದ್ದಾರೆ.</p>.<p>ಕೆಎಸ್ಆರ್ಟಿಸಿಯಲ್ಲಿ ತರಬೇತಿಯಲ್ಲಿರುವ ಸುಮಾರು 500 ನೌಕರರಿಗೆ ಶನಿವಾರ ಬೆಳಿಗ್ಗೆ 11.30ರೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಗಡುವು ವಿಧಿಸಿದೆ. ಶನಿವಾರವೂ ಕರ್ತವ್ಯಕ್ಕೆ ಹಾಜರಾಗದವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಕೆಎಸ್ಆರ್ಟಿಸಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.</p>.<p>‘ತರಬೇತಿಯಲ್ಲಿರುವ ನೌಕರರಿಗೆ ವಾರದ ಹಿಂದೆಯೇ ನೋಟಿಸ್ ಜಾರಿ ಮಾಡಲಾಗಿತ್ತು. ಸುಮಾರು 500 ನೌಕರರು ಕಾಲಾವಕಾಶ ಕೋರಿದ್ದರು. ಶನಿವಾರ ಬೆಳಿಗ್ಗೆಯವರೆಗೂ ಗಡುವು ವಿಸ್ತರಿಸಲಾಗಿದೆ. ಇನ್ನೂ ಹೆಚ್ಚಿನ ಕಾಲಾವಕಾಶ ನೀಡುವುದಿಲ್ಲ’ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದರು.</p>.<p>ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಶುಕ್ರವಾರ ನಾಲ್ವರು ನೌಕರರನ್ನು ವಜಾ ಮಾಡಿದೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಶುಕ್ರವಾರ 10 ನೌಕರರನ್ನು ವಜಾಗೊಳಿಸಲಾಗಿದೆ. ಕಾಯಂ ನೌಕರರಿಗೆ ಕೊನೆಯ ಹಂತದ ನೋಟಿಸ್ ಜಾರಿಗೆ ಎಲ್ಲ ನಿಗಮಗಳೂ ಸಿದ್ಧತೆ ಮಾಡಿಕೊಂಡಿವೆ.</p>.<p>177 ಎಫ್ಐಆರ್ ದಾಖಲು: ಸರ್ಕಾರಿ ಬಸ್ಗಳಿಗೆ ಹಾನಿ ಮಾಡಿದವರು ಹಾಗೂ ಮುಷ್ಕರದ ನಾಯಕತ್ವ ವಹಿಸಿರುವ ನೌಕರರ ವಿರುದ್ಧ ಎಫ್ಐಆರ್ ದಾಖಲಿಸುವ ಪ್ರಕ್ರಿಯೆ ಮುಂದುವರಿದಿದೆ. ಶುಕ್ರವಾರದವರೆಗೆ ಒಟ್ಟು 453 ಮಂದಿ ವಿರುದ್ಧ 177 ಎಫ್ಐಆರ್ ದಾಖಲಿಸಲಾಗಿದೆ.</p>.<p>80 ಬಸ್ಗಳಿಗೆ ಹಾನಿಯಾಗಿದ್ದು, ಈವರೆಗೆ 312 ಜನರ ವಿರುದ್ಧ 142 ಎಫ್ಐಆರ್ ದಾಖಲಿಸಲಾಗಿದೆ. ಅಗತ್ಯ ಸೇವೆಗಳಿಗೆ ಅಡ್ಡಿಪಡಿಸುತ್ತಿರುವ ಆರೋಪದ ಮೇಲೆ ‘ಎಸ್ಮಾ’ ಕಾಯ್ದೆಯಡಿ 141 ಮಂದಿ ವಿರುದ್ಧ 35 ಎಫ್ಐಆರ್ ದಾಖಲಿಸಲಾಗಿದೆ. ಈ ಪೈಕಿ 47 ಜನರನ್ನು ಬಂಧಿಸಲಾಗಿದೆ.</p>.<p>ಹೆಚ್ಚಿದ ಬಸ್ ಸಂಚಾರ</p>.<p>‘ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಸಂಚಾರ ನಡೆಸಿರುವ ಬಸ್ಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ರಾತ್ರಿ 8 ಗಂಟೆಯವರೆಗೆ ನಿಗದಿಯಾಗಿದ್ದ 16,700 ಬಸ್ಗಳ ಪೈಕಿ 5,547 ಬಸ್ಗಳು ಸಂಚಾರ ನಡೆಸಿವೆ’ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.</p>.<p><strong>ಶುಕ್ರವಾರ ಕಾರ್ಯಾಚರಣೆ ನಡೆಸಿದ ಬಸ್ಗಳ ವಿವರ (ರಾತ್ರಿ 8ರವರೆಗೆ)</strong></p>.<p><strong>ಕೆಎಸ್ಆರ್ಟಿಸಿ– </strong>2,567</p>.<p><strong>ಬಿಎಂಟಿಸಿ–</strong> 873</p>.<p><strong>ಎನ್ಇಕೆಆರ್ಟಿಸಿ–</strong> 1,142</p>.<p><strong>ಎನ್ಡಬ್ಲ್ಯುಕೆಆರ್ಟಿಸಿ–</strong> 965</p>.<p><strong>ಒಟ್ಟು– </strong>5,547</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ವೇತನ ಪರಿಷ್ಕರಣೆಗೆ ಆಗ್ರಹಿಸಿ ನಾಲ್ಕು ಸಾರಿಗೆ ನಿಗಮಗಳ ನೌಕರರು ನಡೆಸುತ್ತಿರುವ ಮುಷ್ಕರ ಹತ್ತು ದಿನಗಳನ್ನು ಪೂರೈಸಿದೆ. ಸರ್ಕಾರವೂ ಮತ್ತಷ್ಟು ಕಠಿಣ ಕ್ರಮಗಳತ್ತ ಹೆಜ್ಜೆ ಇರಿಸಿದ್ದು, ಮುಷ್ಕರದಲ್ಲಿ ಭಾಗಿಯಾಗಿರುವ ಕಾಯಂ ನೌಕರರನ್ನೂ ಸೇವೆಯಿಂದ ವಜಾಗೊಳಿಸುವ ಪ್ರಕ್ರಿಯೆಯನ್ನು ಶುಕ್ರವಾರದಿಂದ ಆರಂಭಿಸಿದೆ.</p>.<p>ಬಿಎಂಟಿಸಿ 240 ಕಾಯಂ ನೌಕರರನ್ನು ಸೇವೆಯಿಂದ ವಜಾಗೊಳಿಸಿ ಶುಕ್ರವಾರ ಆದೇಶ ಹೊರಡಿಸಿದೆ. ಈ ನೌಕರರನ್ನು ಅಮಾನತುಗೊಳಿಸಿ ಸೋಮವಾರ ಆದೇಶ ಹೊರಡಿಸಲಾಗಿತ್ತು. ತರಬೇತಿ ಮತ್ತು ಪ್ರೊಬೇಷನರಿ ಅವಧಿಯಲ್ಲಿದ್ದ 580 ನೌಕರರನ್ನು ಈ ಹಿಂದೆಯೇ ವಜಾ ಮಾಡಲಾಗಿತ್ತು. ಬಿಎಂಟಿಸಿಯಿಂದ ವಜಾಗೊಂಡ ಕಾರ್ಮಿಕರ ಸಂಖ್ಯೆ 820ಕ್ಕೆ ಏರಿದೆ. 727 ಮಂದಿ ಅಮಾನತಿನಲ್ಲಿದ್ದಾರೆ.</p>.<p>ಕೆಎಸ್ಆರ್ಟಿಸಿಯಲ್ಲಿ ತರಬೇತಿಯಲ್ಲಿರುವ ಸುಮಾರು 500 ನೌಕರರಿಗೆ ಶನಿವಾರ ಬೆಳಿಗ್ಗೆ 11.30ರೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಗಡುವು ವಿಧಿಸಿದೆ. ಶನಿವಾರವೂ ಕರ್ತವ್ಯಕ್ಕೆ ಹಾಜರಾಗದವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಕೆಎಸ್ಆರ್ಟಿಸಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.</p>.<p>‘ತರಬೇತಿಯಲ್ಲಿರುವ ನೌಕರರಿಗೆ ವಾರದ ಹಿಂದೆಯೇ ನೋಟಿಸ್ ಜಾರಿ ಮಾಡಲಾಗಿತ್ತು. ಸುಮಾರು 500 ನೌಕರರು ಕಾಲಾವಕಾಶ ಕೋರಿದ್ದರು. ಶನಿವಾರ ಬೆಳಿಗ್ಗೆಯವರೆಗೂ ಗಡುವು ವಿಸ್ತರಿಸಲಾಗಿದೆ. ಇನ್ನೂ ಹೆಚ್ಚಿನ ಕಾಲಾವಕಾಶ ನೀಡುವುದಿಲ್ಲ’ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದರು.</p>.<p>ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಶುಕ್ರವಾರ ನಾಲ್ವರು ನೌಕರರನ್ನು ವಜಾ ಮಾಡಿದೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಶುಕ್ರವಾರ 10 ನೌಕರರನ್ನು ವಜಾಗೊಳಿಸಲಾಗಿದೆ. ಕಾಯಂ ನೌಕರರಿಗೆ ಕೊನೆಯ ಹಂತದ ನೋಟಿಸ್ ಜಾರಿಗೆ ಎಲ್ಲ ನಿಗಮಗಳೂ ಸಿದ್ಧತೆ ಮಾಡಿಕೊಂಡಿವೆ.</p>.<p>177 ಎಫ್ಐಆರ್ ದಾಖಲು: ಸರ್ಕಾರಿ ಬಸ್ಗಳಿಗೆ ಹಾನಿ ಮಾಡಿದವರು ಹಾಗೂ ಮುಷ್ಕರದ ನಾಯಕತ್ವ ವಹಿಸಿರುವ ನೌಕರರ ವಿರುದ್ಧ ಎಫ್ಐಆರ್ ದಾಖಲಿಸುವ ಪ್ರಕ್ರಿಯೆ ಮುಂದುವರಿದಿದೆ. ಶುಕ್ರವಾರದವರೆಗೆ ಒಟ್ಟು 453 ಮಂದಿ ವಿರುದ್ಧ 177 ಎಫ್ಐಆರ್ ದಾಖಲಿಸಲಾಗಿದೆ.</p>.<p>80 ಬಸ್ಗಳಿಗೆ ಹಾನಿಯಾಗಿದ್ದು, ಈವರೆಗೆ 312 ಜನರ ವಿರುದ್ಧ 142 ಎಫ್ಐಆರ್ ದಾಖಲಿಸಲಾಗಿದೆ. ಅಗತ್ಯ ಸೇವೆಗಳಿಗೆ ಅಡ್ಡಿಪಡಿಸುತ್ತಿರುವ ಆರೋಪದ ಮೇಲೆ ‘ಎಸ್ಮಾ’ ಕಾಯ್ದೆಯಡಿ 141 ಮಂದಿ ವಿರುದ್ಧ 35 ಎಫ್ಐಆರ್ ದಾಖಲಿಸಲಾಗಿದೆ. ಈ ಪೈಕಿ 47 ಜನರನ್ನು ಬಂಧಿಸಲಾಗಿದೆ.</p>.<p>ಹೆಚ್ಚಿದ ಬಸ್ ಸಂಚಾರ</p>.<p>‘ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಸಂಚಾರ ನಡೆಸಿರುವ ಬಸ್ಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ರಾತ್ರಿ 8 ಗಂಟೆಯವರೆಗೆ ನಿಗದಿಯಾಗಿದ್ದ 16,700 ಬಸ್ಗಳ ಪೈಕಿ 5,547 ಬಸ್ಗಳು ಸಂಚಾರ ನಡೆಸಿವೆ’ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.</p>.<p><strong>ಶುಕ್ರವಾರ ಕಾರ್ಯಾಚರಣೆ ನಡೆಸಿದ ಬಸ್ಗಳ ವಿವರ (ರಾತ್ರಿ 8ರವರೆಗೆ)</strong></p>.<p><strong>ಕೆಎಸ್ಆರ್ಟಿಸಿ– </strong>2,567</p>.<p><strong>ಬಿಎಂಟಿಸಿ–</strong> 873</p>.<p><strong>ಎನ್ಇಕೆಆರ್ಟಿಸಿ–</strong> 1,142</p>.<p><strong>ಎನ್ಡಬ್ಲ್ಯುಕೆಆರ್ಟಿಸಿ–</strong> 965</p>.<p><strong>ಒಟ್ಟು– </strong>5,547</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>