<p><strong>ಹಾವೇರಿ/ವಿಜಯಪುರ: </strong>ಭಾರೀ ಜಿದ್ದಾಜಿದ್ದಿಯಲ್ಲಿ ನಡೆದ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಂದೊಂದು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ತೀವ್ರ ಹಿನ್ನಡೆ ಅನುಭವಯಿಸಿದ್ದಾರೆ.</p>.<p>19 ಸುತ್ತುಗಳ ಬಳಿಕ ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ <strong>28,163 </strong>ಮತಗಳ ಮುನ್ನಡೆ ಸಾಧಿಸಿದ್ದರು. ಹಾಗಾಗಿ, ಇಲ್ಲಿ ಬಿಜೆಪಿ ಗೆಲುವು ಬಹುತೇಕ ಖಚಿತ ಎನ್ನಬಹುದಾಗಿದೆ.</p>.<p><strong>ಅಭ್ಯರ್ಥಿಗಳು ಪಡೆದ ಮತಗಳ ವಿವರ (19 ಸುತ್ತು ಸೇರಿ)</strong></p>.<p>*ಅಶೋಕ ಮನಗೂಳಿ (ಕಾಂಗ್ರೆಸ್): 56,487</p>.<p>*ರಮೇಶ ಭೂಸನೂರ (ಬಿಜೆಪಿ):84,650</p>.<p>*ನಾಜಿಯಾ ಅಂಗಡಿ (ಜೆಡಿಎಸ್): 3729</p>.<p>ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತವರು ಜಿಲ್ಲೆ ಹಾವೇರಿಯ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. 10ನೇ ಸುತ್ತಿನ ಮತ ಎಣಿಕೆ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಬಿಜೆಪಿಯ ಶಿವರಾಜ ಸಜ್ಜನರ ಅವರಿಗಿಂತ <strong>6,459 </strong>ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು.</p>.<p><strong>ಹಾನಗಲ್ ಉಪಚುನಾವಣೆ: ಇದುವರೆಗಿನ ಒಟ್ಟು ಫಲಿತಾಂಶ (11 ಸುತ್ತು ಸೇರಿ)</strong></p>.<p>ಬಿಜೆಪಿ- ಶಿವರಾಜ ಸಜ್ಜನರ- 44,178</p>.<p>ಕಾಂಗ್ರೆಸ್- ಶ್ರೀನಿವಾಸ ಮಾನೆ- 50,637</p>.<p>ಜೆಡಿಎಸ್- ನಿಯಾಜ್ ಶೇಖ್- 523</p>.<p>ಪಕ್ಷೇತರ- ನಜೀರ್ ಅಹಮದ್ ಸವಣೂರ- 570</p>.<p>ಇತ್ತೀಚಿನ ಮಾಹಿತಿಗೆ ಲೈವ್ ಬ್ಲಾಗ್ ನೋಡಿ..<a href="https://www.prajavani.net/karnataka-news/karnataka-assembly-bypolls-sindgi-and-hangal-results-2021-bjp-congress-jds-880684.html"><strong>Live| ವಿಧಾನಸಭಾ ಉಪಚುನಾವಣೆ ಮತ ಎಣಿಕೆ</strong></a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ/ವಿಜಯಪುರ: </strong>ಭಾರೀ ಜಿದ್ದಾಜಿದ್ದಿಯಲ್ಲಿ ನಡೆದ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಂದೊಂದು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ತೀವ್ರ ಹಿನ್ನಡೆ ಅನುಭವಯಿಸಿದ್ದಾರೆ.</p>.<p>19 ಸುತ್ತುಗಳ ಬಳಿಕ ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ <strong>28,163 </strong>ಮತಗಳ ಮುನ್ನಡೆ ಸಾಧಿಸಿದ್ದರು. ಹಾಗಾಗಿ, ಇಲ್ಲಿ ಬಿಜೆಪಿ ಗೆಲುವು ಬಹುತೇಕ ಖಚಿತ ಎನ್ನಬಹುದಾಗಿದೆ.</p>.<p><strong>ಅಭ್ಯರ್ಥಿಗಳು ಪಡೆದ ಮತಗಳ ವಿವರ (19 ಸುತ್ತು ಸೇರಿ)</strong></p>.<p>*ಅಶೋಕ ಮನಗೂಳಿ (ಕಾಂಗ್ರೆಸ್): 56,487</p>.<p>*ರಮೇಶ ಭೂಸನೂರ (ಬಿಜೆಪಿ):84,650</p>.<p>*ನಾಜಿಯಾ ಅಂಗಡಿ (ಜೆಡಿಎಸ್): 3729</p>.<p>ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತವರು ಜಿಲ್ಲೆ ಹಾವೇರಿಯ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. 10ನೇ ಸುತ್ತಿನ ಮತ ಎಣಿಕೆ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಬಿಜೆಪಿಯ ಶಿವರಾಜ ಸಜ್ಜನರ ಅವರಿಗಿಂತ <strong>6,459 </strong>ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು.</p>.<p><strong>ಹಾನಗಲ್ ಉಪಚುನಾವಣೆ: ಇದುವರೆಗಿನ ಒಟ್ಟು ಫಲಿತಾಂಶ (11 ಸುತ್ತು ಸೇರಿ)</strong></p>.<p>ಬಿಜೆಪಿ- ಶಿವರಾಜ ಸಜ್ಜನರ- 44,178</p>.<p>ಕಾಂಗ್ರೆಸ್- ಶ್ರೀನಿವಾಸ ಮಾನೆ- 50,637</p>.<p>ಜೆಡಿಎಸ್- ನಿಯಾಜ್ ಶೇಖ್- 523</p>.<p>ಪಕ್ಷೇತರ- ನಜೀರ್ ಅಹಮದ್ ಸವಣೂರ- 570</p>.<p>ಇತ್ತೀಚಿನ ಮಾಹಿತಿಗೆ ಲೈವ್ ಬ್ಲಾಗ್ ನೋಡಿ..<a href="https://www.prajavani.net/karnataka-news/karnataka-assembly-bypolls-sindgi-and-hangal-results-2021-bjp-congress-jds-880684.html"><strong>Live| ವಿಧಾನಸಭಾ ಉಪಚುನಾವಣೆ ಮತ ಎಣಿಕೆ</strong></a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>