‘ಮತ್ತೊಬ್ಬ ವಕೀಲ ಸೂರ್ಯ ಮುಕುಂದರಾಜ್ ಅವರಿಗೆ ಸೋಮವಾರ ವಾಟ್ಸ್ಆ್ಯಪ್ ಮೂಲಕ ಒಬ್ಬರು ಕರೆ ಮಾಡಿದ್ದು, ‘ನಾನು ಪ್ರದೀಪ್. ಅಮರನಾಥ್ ಜಾರಕಿಹೊಳಿ ಅವರ ಸ್ನೇಹಿತ. ನೀವು ಯುವತಿಗೆ ಪ್ರಕರಣ ವಾಪಸ್ ಪಡೆಯಲು ತಿಳಿಸಿದರೆ, ನಿಮಗೆ ದೊಡ್ಡಕೊಡುಗೆ ನೀಡಲಾಗುವುದು’ ಎಂದು ಆಮಿಷವೊಡ್ಡಿದ್ದಾರೆ. ಅನುಮಾನದಿಂದ ಕರೆ ಮಾಡಿದ ವ್ಯಕ್ತಿಯ ಮೂಲ ಪರಿಶೀಲಿಸಿದಾಗ ಆತನ ಹೆಸರು ಪ್ರಭು ಪಾಟೀಲ್ ಎಂದು ಪತ್ತೆಯಾಗಿದೆ’.