ಅವರು ಇಡಗುಂಜಿ, ಕರ್ಕಿ ಹಾಸ್ಯಗಾರ, ಕಮಲಶಿಲೆ, ಸಾಲಿಗ್ರಾಮ, ಅಮೃತೇಶ್ವರಿ, ಮುಲ್ಕಿ, ಗುಂಡಬಾಳ ಮೇಳಗಳಲ್ಲಿ ಚೆಂಡೆವಾದಕರಾಗಿದ್ದರು. ಆರಂಭದಲ್ಲಿಪಾತ್ರಧಾರಿಯಾಗಿದ್ದಕೃಷ್ಣ ಯಾಜಿ, ಕೋಡಂಗಿ, ಬಾಲಗೋಪಾಲ, ಸುಬ್ರಹ್ಮಣ್ಯ, ಅರ್ಜುನ, ಅಭಿಮನ್ಯು, ಚಂದ್ರಹಾಸ ಮುಂತಾದ ವಿವಿಧ ಪಾತ್ರಗಳಿಗೆ ಅವರು ಬಣ್ಣ ಹಚ್ಚಿದ್ದರು. ಬಳಿಕ ಕಿನ್ನೀರು ನಾರಾಯಣ ಹೆಗ್ಡೆ ಅವರಿಂದ ಮದ್ದಲೆ ವಾದನದಲ್ಲಿ ತರಬೇತಿ ಪಡೆದರು. ಗುಂಡ್ಮಿ ರಾಮಚಂದ್ರ ನಾವಡ ಅವರ ಬಳಿ ಮದ್ದಲೆ ಹಾಗೂ ಚೆಂಡೆ ವಾದನ ಕಲಿತರು.