<p><strong>ಚಾಮರಾಜನಗರ: </strong>ತಾಲ್ಲೂಕಿನ ಚಿಕ್ಕಹೊಳೆ ಹಾಗೂ ಸುವರ್ಣಾವತಿ ಜಲಾಶಯಗಳಲ್ಲಿ ಉದ್ಯಾನ ಅಭಿವೃದ್ಧಿಗಾಗಿ₹ 85 ಲಕ್ಷ ಬಿಡುಗಡೆಯಾಗಿತ್ತು. 2016ರಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.ಸುವರ್ಣಾವತಿ ಜಲಾಶಯದ ಉದ್ಯಾನ ತಕ್ಕಮಟ್ಟಿಗೆ ಇದೆ.ಆದರೆ, ಚಿಕ್ಕಹೊಳೆ ಜಲಾಶಯದ ಉದ್ಯಾನ ನಿರ್ವಹಣೆ ಇಲ್ಲದೆ ಸೊರಗಿದೆ.</p>.<p>ಚಿಕ್ಕಹೊಳೆ ಜಲಾಶಯದ ವ್ಯಾಪ್ತಿಯ ಸುತ್ತಲೂ ತಂತಿಬೇಲಿ ಇರುವುದರಿಂದ ಉದ್ಯಾನ ಸ್ಥಳವು ಕುರಿ, ಮೇಕೆಗಳನ್ನು ಮೇಯಲು ಬಿಡುವ ಸ್ಥಳವಾಗಿ ಬದಲಾಗಿದೆ. ಉದ್ಯಾನದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಉದ್ಯಾನದ ವಿನ್ಯಾಸ ಆಕರ್ಷಕವಾಗಿದೆ. ಆದರೆ, ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ.</p>.<p>ಅಲಂಕಾರಿಕ ಗಿಡಗಳು, ಹಸಿರಾದ ಹುಲ್ಲು ಹಾಸಿನೊಂದಿಗೆ ಉದ್ಯಾನ ಗಮನ ಸೆಳೆಯುತ್ತಾದರೂಈಗ ಎಲ್ಲೆಡೆ ಮುಳ್ಳಿನಗಿಡಗಳು ಬೆಳೆದುಕೊಂಡಿವೆ. ನಡೆಯಲು ಸಾಧ್ಯವಾಗದ ಪರಿಸ್ಥಿತಿ ಇದೆ.</p>.<p>ಚಾಮರಾಜನಗರದಿಂದ 16 ಕಿ.ಮೀ ದೂರವಿರುವ ಈ ಎರಡೂ ಜಲಾಶಯಗಳು ಪ್ರವಾಸಿ ತಾಣವಾಗಿವೆ. ಜಲಾಶಯಗಳ ಪ್ರದೇಶದಲ್ಲಿ ಉದ್ಯಾನ ನಿರ್ಮಾಣ ಕಾಮಗಾರಿ ಭರದಿಂದ ಸಾಗಿ ಸುವರ್ಣಾವತಿ ಜಲಾಶಯದ ಉದ್ಯಾನಬಹುಪಾಲುಮುಗಿದು ಒಂದು ಹಂತಕ್ಕೆ ಬಂದಿದೆ. ಆದರೆ, ಚಿಕ್ಕಹೊಳೆ ಜಲಾಶಯದ ಉದ್ಯಾನದ ಅಭಿವೃದ್ಧಿಗೆ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎನ್ನುವುದುಸ್ಥಳೀಯರ ಆರೋಪ.</p>.<p>‘ಈಗರಾಷ್ಟ್ರೀಯ ಹೆದ್ದಾರಿ 209ರಲ್ಲಿ ರಸ್ತೆ ವಿಸ್ತರಿಸುವ ಕಾಮಗಾರಿಗಳು ಸಾಗುತ್ತಿದೆ.ಪೂರ್ಣಗೊಂಡ ಬಳಿಕ ಪ್ರವಾಸಿಗರು ಮತ್ತಷ್ಟು ಹೆಚ್ಚುತ್ತಾರೆ. ಈ ವೇಳೆ ಪ್ರವಾಸಿಗರ ಕಣ್ಣಿಗೆ ಹಬ್ಬವಾಗಿ ಈ ಉದ್ಯಾನಗಳು ಕಂಗೊಳಿಸಲಿವೆ. ಪ್ರಸ್ತುತ ಜಲಾಶಯಗಳಲ್ಲಿ ನೀರಿನ ಮಟ್ಟ ತಳಭಾಗಕ್ಕೆ ತಲುಪಿದೆ. ಮುಂದಿನ ದಿನಗಳಲ್ಲಿ ಮಳೆಯಾದಾಗ ಜಲಾಶಯ ಭರ್ತಿಯಾದಾಗ ಪ್ರವಾಸಿಗರು ಲಗ್ಗೆ ಇಡುತ್ತಾರೆ. ಈ ಸಂದರ್ಭದಲ್ಲಿ ಉದ್ಯಾನವಿದ್ದರೆ ಜಲಾಶಯ ಇನ್ನಷ್ಟು ಆಕರ್ಷಣೀಯ ಕೇಂದ್ರವಾಗಲಿದೆ’ ಎನ್ನುವುದು ಸ್ಥಳೀಯರ ನಿಲುವು.</p>.<p>‘ಸುವರ್ಣಾವತಿ ಜಲಾಶಯ ಪ್ರದೇಶದ ಉದ್ಯಾನ ಆಕರ್ಷಕವಾಗಿದೆ. ಚಿಕ್ಕಹೊಳೆ ಉದ್ಯಾನವನ್ನು ನಿರ್ವಹಣೆ ಮಾಡಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕು’ ಎನ್ನುತ್ತಾರೆಅಟ್ಟುಗುಳಿಪುರನಿವಾಸಿ ಕಾಂತರಾಜು.</p>.<p class="Subhead"><strong>ಹದಗೆಟ್ಟ ವೀಕ್ಷಣಾಗೋಪುರ</strong>: ಪ್ರವಾಸಿಗರು ಸುಂದರ ತಾಣವನ್ನು ಎತ್ತರದಿಂದ ವೀಕ್ಷಿಸಲು ಅನುಕೂಲವಾಗುವಂತೆ ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ಆದರೆ ಗೋಪುರದ ಮೆಟ್ಟಿಲು ಮುರಿದು ಹೋಗಿದೆ. ಕಾಲಿಟ್ಟರೆ ನೆಲಕ್ಕೆ ಕುಸಿಯಬಹುದು ಎಂಬ ಭಯವಾಗುತ್ತದೆ. ಯಾವುದೇ ಮೆಟ್ಟಿಲು ಸಮರ್ಪಕವಾಗಿಲ್ಲ. ಗೋಡೆಗಳು ಬಿರುಕು ಬಿಟ್ಟಿವೆ.</p>.<p class="Subhead"><strong>ನಾಮಫಲಕ ಅಳವಡಿಸಬೇಕು:</strong> ಚಾಮರಾಜನಗರದಿಂದ ಅಂಕನಶೆಟ್ಟಿಪುರದ ಮಾರ್ಗವಾಗಿಚಿಕ್ಕಹೊಳೆ ಚೆಕ್ಪೋಸ್ಟ್ನಲ್ಲಿ ಈ ಜಲಾಶಯಕ್ಕೆಭೇಟಿ ನೀಡಲುಬಲಭಾಗಕ್ಕೆ ತಿರಗಬೇಕು. ಈ ತಿರುವಿನಲ್ಲಿ ‘ಚಿಕ್ಕಹೊಳೆ ಜಲಾಶಯ’ ನಾಮಫಲಕ ಅಳವಡಿಸಿದರೆ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎನ್ನುವುದು ಸಾರ್ವಜನಿಕರ ಒತ್ತಾಯ.</p>.<p>ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕಾವೇರಿ ನೀರಾವರಿ ಕಾರ್ಯಪಾಲಕ ಎಂಜಿನಿಯರ್ ರಾಜೇಂದ್ರ ಪ್ರಸಾದ್ ಅವರಿಗೆ ಕರೆ ಮಾಡಲು ಯತ್ನಿಸಿದರೂ ಸಂಪರ್ಕಕ್ಕೆ ಸಿಗಲಿಲ್ಲ.</p>.<p class="Briefhead"><strong>ಕುಡಿಯುವ ನೀರು, ಶೌಚಾಲಯ ಸಮಸ್ಯೆ</strong></p>.<p>ಜಲಾಶಯವನ್ನು ಕಣ್ತುಂಬಿಕೊಳ್ಳಲು ಆಗಮಿಸುವ ಪ್ರವಾಸಿಗರು ಹಾಗೂಜಲಾಶಯ ರಕ್ಷಣೆಗೆಂದು ಇರುವ ಪೊಲೀಸ್ ಸಿಬ್ಬಂದಿಗೆಕುಡಿಯುವ ನೀರು, ಶೌಚಾಲಯದ ಸಮಸ್ಯೆ ಎದುರಾಗಿದೆ.</p>.<p>‘15 ದಿನಗಳಿಗೊಮ್ಮೆ ಒಬ್ಬರು ಪೊಲೀಸರಂತೆಕಣ್ಗಾವಲಿಗೆ ಇರಿಸುತ್ತಾರೆ. ಕೊಠಡಿ ಇದೆ. ಆದರೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕುಡಿಯುವ ನೀರಿಗಾಗಿಚೆಕ್ಪೋಸ್ಟ್ಗಳಲ್ಲಿರುವ ಹೋಟೆಲ್ನಲ್ಲಿ ನೀರು ಸಂಗ್ರಹಿಸಿಕೊಂಡು ಬರುತ್ತೇವೆ. ಶೌಚವನ್ನು ಬಯಲಲ್ಲೇ ವಿಸರ್ಜಿಸುತ್ತಿದ್ದೇವೆ’ ಎಂದು ಇಲ್ಲಿನ ಪೊಲೀಸ್ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ಹೇಳಿದರು.</p>.<p><strong>ಓವರ್ ಹೆಡ್ ಟ್ಯಾಂಕ್ ಅಗತ್ಯ: </strong>‘ಸುವರ್ಣಾವತಿ ಜಲಾಶಯದಲ್ಲಿ ಓವರ್ ಹೆಡ್ ಟ್ಯಾಂಕ್ ಇಡಲಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೆ, ಚಿಕ್ಕಹೊಳೆ ಜಲಾಶಯದಲ್ಲಿ ನೀರಿನ ಸಮಸ್ಯೆ ಹೇಳ ತೀರದು. ಕುಡಿಯುವ ನೀರು ಹಾಗೂ ಶೌಚಾಲಯಸಮಸ್ಯೆ ನಿವಾರಣೆಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕಿದೆ’ ಎನ್ನುತ್ತಾರೆ ಅವರು.</p>.<p>‘ವಾರಕ್ಕೊಮ್ಮೆಯಾದರೂಸ್ನೇಹಿತರೊಟ್ಟಿಗೆ ಜಲಾಶಯಕ್ಕೆ ಭೇಟಿ ನೀಡುತ್ತೇನೆ. ಮೂರು ವರ್ಷಗಳ ಹಿಂದೆ ಉದ್ಯಾನ ಕಾಮಗಾರಿ ಆರಂಭಿಸಲಾಗಿದೆ ಎಂದು ತಿಳಿಯಿತು. ಆದರೆ ಇಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ’ ಉಡಿಗಾಲದಿಂದ ಬಂದಿದ್ದ ಸಂತೋಷ್ ‘ಪ್ರಜಾವಾಣಿ’ಗೆ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ: </strong>ತಾಲ್ಲೂಕಿನ ಚಿಕ್ಕಹೊಳೆ ಹಾಗೂ ಸುವರ್ಣಾವತಿ ಜಲಾಶಯಗಳಲ್ಲಿ ಉದ್ಯಾನ ಅಭಿವೃದ್ಧಿಗಾಗಿ₹ 85 ಲಕ್ಷ ಬಿಡುಗಡೆಯಾಗಿತ್ತು. 2016ರಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.ಸುವರ್ಣಾವತಿ ಜಲಾಶಯದ ಉದ್ಯಾನ ತಕ್ಕಮಟ್ಟಿಗೆ ಇದೆ.ಆದರೆ, ಚಿಕ್ಕಹೊಳೆ ಜಲಾಶಯದ ಉದ್ಯಾನ ನಿರ್ವಹಣೆ ಇಲ್ಲದೆ ಸೊರಗಿದೆ.</p>.<p>ಚಿಕ್ಕಹೊಳೆ ಜಲಾಶಯದ ವ್ಯಾಪ್ತಿಯ ಸುತ್ತಲೂ ತಂತಿಬೇಲಿ ಇರುವುದರಿಂದ ಉದ್ಯಾನ ಸ್ಥಳವು ಕುರಿ, ಮೇಕೆಗಳನ್ನು ಮೇಯಲು ಬಿಡುವ ಸ್ಥಳವಾಗಿ ಬದಲಾಗಿದೆ. ಉದ್ಯಾನದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಉದ್ಯಾನದ ವಿನ್ಯಾಸ ಆಕರ್ಷಕವಾಗಿದೆ. ಆದರೆ, ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ.</p>.<p>ಅಲಂಕಾರಿಕ ಗಿಡಗಳು, ಹಸಿರಾದ ಹುಲ್ಲು ಹಾಸಿನೊಂದಿಗೆ ಉದ್ಯಾನ ಗಮನ ಸೆಳೆಯುತ್ತಾದರೂಈಗ ಎಲ್ಲೆಡೆ ಮುಳ್ಳಿನಗಿಡಗಳು ಬೆಳೆದುಕೊಂಡಿವೆ. ನಡೆಯಲು ಸಾಧ್ಯವಾಗದ ಪರಿಸ್ಥಿತಿ ಇದೆ.</p>.<p>ಚಾಮರಾಜನಗರದಿಂದ 16 ಕಿ.ಮೀ ದೂರವಿರುವ ಈ ಎರಡೂ ಜಲಾಶಯಗಳು ಪ್ರವಾಸಿ ತಾಣವಾಗಿವೆ. ಜಲಾಶಯಗಳ ಪ್ರದೇಶದಲ್ಲಿ ಉದ್ಯಾನ ನಿರ್ಮಾಣ ಕಾಮಗಾರಿ ಭರದಿಂದ ಸಾಗಿ ಸುವರ್ಣಾವತಿ ಜಲಾಶಯದ ಉದ್ಯಾನಬಹುಪಾಲುಮುಗಿದು ಒಂದು ಹಂತಕ್ಕೆ ಬಂದಿದೆ. ಆದರೆ, ಚಿಕ್ಕಹೊಳೆ ಜಲಾಶಯದ ಉದ್ಯಾನದ ಅಭಿವೃದ್ಧಿಗೆ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎನ್ನುವುದುಸ್ಥಳೀಯರ ಆರೋಪ.</p>.<p>‘ಈಗರಾಷ್ಟ್ರೀಯ ಹೆದ್ದಾರಿ 209ರಲ್ಲಿ ರಸ್ತೆ ವಿಸ್ತರಿಸುವ ಕಾಮಗಾರಿಗಳು ಸಾಗುತ್ತಿದೆ.ಪೂರ್ಣಗೊಂಡ ಬಳಿಕ ಪ್ರವಾಸಿಗರು ಮತ್ತಷ್ಟು ಹೆಚ್ಚುತ್ತಾರೆ. ಈ ವೇಳೆ ಪ್ರವಾಸಿಗರ ಕಣ್ಣಿಗೆ ಹಬ್ಬವಾಗಿ ಈ ಉದ್ಯಾನಗಳು ಕಂಗೊಳಿಸಲಿವೆ. ಪ್ರಸ್ತುತ ಜಲಾಶಯಗಳಲ್ಲಿ ನೀರಿನ ಮಟ್ಟ ತಳಭಾಗಕ್ಕೆ ತಲುಪಿದೆ. ಮುಂದಿನ ದಿನಗಳಲ್ಲಿ ಮಳೆಯಾದಾಗ ಜಲಾಶಯ ಭರ್ತಿಯಾದಾಗ ಪ್ರವಾಸಿಗರು ಲಗ್ಗೆ ಇಡುತ್ತಾರೆ. ಈ ಸಂದರ್ಭದಲ್ಲಿ ಉದ್ಯಾನವಿದ್ದರೆ ಜಲಾಶಯ ಇನ್ನಷ್ಟು ಆಕರ್ಷಣೀಯ ಕೇಂದ್ರವಾಗಲಿದೆ’ ಎನ್ನುವುದು ಸ್ಥಳೀಯರ ನಿಲುವು.</p>.<p>‘ಸುವರ್ಣಾವತಿ ಜಲಾಶಯ ಪ್ರದೇಶದ ಉದ್ಯಾನ ಆಕರ್ಷಕವಾಗಿದೆ. ಚಿಕ್ಕಹೊಳೆ ಉದ್ಯಾನವನ್ನು ನಿರ್ವಹಣೆ ಮಾಡಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕು’ ಎನ್ನುತ್ತಾರೆಅಟ್ಟುಗುಳಿಪುರನಿವಾಸಿ ಕಾಂತರಾಜು.</p>.<p class="Subhead"><strong>ಹದಗೆಟ್ಟ ವೀಕ್ಷಣಾಗೋಪುರ</strong>: ಪ್ರವಾಸಿಗರು ಸುಂದರ ತಾಣವನ್ನು ಎತ್ತರದಿಂದ ವೀಕ್ಷಿಸಲು ಅನುಕೂಲವಾಗುವಂತೆ ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ಆದರೆ ಗೋಪುರದ ಮೆಟ್ಟಿಲು ಮುರಿದು ಹೋಗಿದೆ. ಕಾಲಿಟ್ಟರೆ ನೆಲಕ್ಕೆ ಕುಸಿಯಬಹುದು ಎಂಬ ಭಯವಾಗುತ್ತದೆ. ಯಾವುದೇ ಮೆಟ್ಟಿಲು ಸಮರ್ಪಕವಾಗಿಲ್ಲ. ಗೋಡೆಗಳು ಬಿರುಕು ಬಿಟ್ಟಿವೆ.</p>.<p class="Subhead"><strong>ನಾಮಫಲಕ ಅಳವಡಿಸಬೇಕು:</strong> ಚಾಮರಾಜನಗರದಿಂದ ಅಂಕನಶೆಟ್ಟಿಪುರದ ಮಾರ್ಗವಾಗಿಚಿಕ್ಕಹೊಳೆ ಚೆಕ್ಪೋಸ್ಟ್ನಲ್ಲಿ ಈ ಜಲಾಶಯಕ್ಕೆಭೇಟಿ ನೀಡಲುಬಲಭಾಗಕ್ಕೆ ತಿರಗಬೇಕು. ಈ ತಿರುವಿನಲ್ಲಿ ‘ಚಿಕ್ಕಹೊಳೆ ಜಲಾಶಯ’ ನಾಮಫಲಕ ಅಳವಡಿಸಿದರೆ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎನ್ನುವುದು ಸಾರ್ವಜನಿಕರ ಒತ್ತಾಯ.</p>.<p>ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕಾವೇರಿ ನೀರಾವರಿ ಕಾರ್ಯಪಾಲಕ ಎಂಜಿನಿಯರ್ ರಾಜೇಂದ್ರ ಪ್ರಸಾದ್ ಅವರಿಗೆ ಕರೆ ಮಾಡಲು ಯತ್ನಿಸಿದರೂ ಸಂಪರ್ಕಕ್ಕೆ ಸಿಗಲಿಲ್ಲ.</p>.<p class="Briefhead"><strong>ಕುಡಿಯುವ ನೀರು, ಶೌಚಾಲಯ ಸಮಸ್ಯೆ</strong></p>.<p>ಜಲಾಶಯವನ್ನು ಕಣ್ತುಂಬಿಕೊಳ್ಳಲು ಆಗಮಿಸುವ ಪ್ರವಾಸಿಗರು ಹಾಗೂಜಲಾಶಯ ರಕ್ಷಣೆಗೆಂದು ಇರುವ ಪೊಲೀಸ್ ಸಿಬ್ಬಂದಿಗೆಕುಡಿಯುವ ನೀರು, ಶೌಚಾಲಯದ ಸಮಸ್ಯೆ ಎದುರಾಗಿದೆ.</p>.<p>‘15 ದಿನಗಳಿಗೊಮ್ಮೆ ಒಬ್ಬರು ಪೊಲೀಸರಂತೆಕಣ್ಗಾವಲಿಗೆ ಇರಿಸುತ್ತಾರೆ. ಕೊಠಡಿ ಇದೆ. ಆದರೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕುಡಿಯುವ ನೀರಿಗಾಗಿಚೆಕ್ಪೋಸ್ಟ್ಗಳಲ್ಲಿರುವ ಹೋಟೆಲ್ನಲ್ಲಿ ನೀರು ಸಂಗ್ರಹಿಸಿಕೊಂಡು ಬರುತ್ತೇವೆ. ಶೌಚವನ್ನು ಬಯಲಲ್ಲೇ ವಿಸರ್ಜಿಸುತ್ತಿದ್ದೇವೆ’ ಎಂದು ಇಲ್ಲಿನ ಪೊಲೀಸ್ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ಹೇಳಿದರು.</p>.<p><strong>ಓವರ್ ಹೆಡ್ ಟ್ಯಾಂಕ್ ಅಗತ್ಯ: </strong>‘ಸುವರ್ಣಾವತಿ ಜಲಾಶಯದಲ್ಲಿ ಓವರ್ ಹೆಡ್ ಟ್ಯಾಂಕ್ ಇಡಲಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೆ, ಚಿಕ್ಕಹೊಳೆ ಜಲಾಶಯದಲ್ಲಿ ನೀರಿನ ಸಮಸ್ಯೆ ಹೇಳ ತೀರದು. ಕುಡಿಯುವ ನೀರು ಹಾಗೂ ಶೌಚಾಲಯಸಮಸ್ಯೆ ನಿವಾರಣೆಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕಿದೆ’ ಎನ್ನುತ್ತಾರೆ ಅವರು.</p>.<p>‘ವಾರಕ್ಕೊಮ್ಮೆಯಾದರೂಸ್ನೇಹಿತರೊಟ್ಟಿಗೆ ಜಲಾಶಯಕ್ಕೆ ಭೇಟಿ ನೀಡುತ್ತೇನೆ. ಮೂರು ವರ್ಷಗಳ ಹಿಂದೆ ಉದ್ಯಾನ ಕಾಮಗಾರಿ ಆರಂಭಿಸಲಾಗಿದೆ ಎಂದು ತಿಳಿಯಿತು. ಆದರೆ ಇಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ’ ಉಡಿಗಾಲದಿಂದ ಬಂದಿದ್ದ ಸಂತೋಷ್ ‘ಪ್ರಜಾವಾಣಿ’ಗೆ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>