ಮಂಗಳೂರು: ತಮ್ಮ ಬರ್ತ್ ಡೇ ಬಂದರೆ ಸಾಕು ಮಕ್ಕಳು ಸಂಭ್ರಮದಲ್ಲಿ ತೇಲಾಡುತ್ತಿರುತ್ತಾರೆ. ದೊಡ್ಡದಾದ ಕೇಕ್, ಹೊಸ ವಸ್ತ್ರ, ಸ್ನೇಹಿತರಿಗೆ ಸಿಹಿತಿಂಡಿ.. ಹೀಗೆ ಉದ್ದವಾದ ಪಟ್ಟಿ ಮಾಡಿ ಪೋಷಕರಲ್ಲಿ ಪಟ್ಟು ಹಿಡಿಯುವುದು ಸಾಮಾನ್ಯ. ಆದರೆ, ಮಂಗಳೂರಿನ ಸನ್ಮತಿ ತನ್ನ 10ನೇ ವರ್ಷದ ಜನ್ಮದಿನಕ್ಕೆ ಅಜ್ಜಿ ನೀಡಿದ ₹ 10 ಸಾವಿರದ ಚೆಕ್ ಅನ್ನು ನೆರೆ ಸಂತ್ರಸ್ತರ ನೆರವಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಳು.