ಯಶಸ್ವಿನಿ ಯೋಜನೆಯನ್ನು ಪುನಃ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಸಕ್ತ ವರ್ಷದ ಬಜೆಟ್ನಲ್ಲಿ ಪ್ರಕಟಿಸಿದ್ದರು. ಅದರಂತೆ ಯೋಜನೆಯ ಜಾರಿಗೆ ಆದೇಶ ಹರಡಿಸಿದ್ದು, ‘ಯಶಸ್ವಿನಿ ಟ್ರಸ್ಟ್’ ಪುನರ್ರಚನೆ, ಆಡಳಿತ ನಿಯಂತ್ರಣ, ಸದಸ್ಯತ್ವ ನೋಂದಣಿ, ಚಿಕಿತ್ಸೆಗಳ ಪಟ್ಟಿ ಹಾಗೂ ದರ ಪಟ್ಟಿ ಸಿದ್ಧಪಡಿಸುವುದು, ಸೇವಾ ಸಮಾಲೋಚಕರ ನೇಮಕ ಮತ್ತಿತರ ಪ್ರಕ್ರಿಯೆಗಳನ್ನು ಆರಂಭಿಸುವಂತೆ ಸಹಕಾರ ಸಂಘಗಳ ರಿಜಿಸ್ಟ್ರಾರ್ಗೆ ನಿರ್ದೇಶನ ನೀಡಲಾಗಿದೆ.