ಚುನಾವಣೆಯಲ್ಲಿ ಘೋಷಿಸಿದ್ದ ‘ಗ್ಯಾರಂಟಿ’ಗಳ ಪೈಕಿ, ಶಕ್ತಿ, ಅನ್ನ ಭಾಗ್ಯ (5 ಕೆ.ಜಿ. ಹೆಚ್ಚುವರಿ ಅಕ್ಕಿ ಬದಲು ₹170 ನಗದು), ಗೃಹ ಜ್ಯೋತಿ, ಗೃಹ ಲಕ್ಷ್ಮಿ ಯೋಜನೆಗಳು ಈಗಾಗಲೇ ಜಾರಿಗೆ ಬಂದಿವೆ. ‘ಯುವ ನಿಧಿ‘ಗೆ ಇನ್ನಷ್ಟೆ ಚಾಲನೆ ಸಿಗಬೇಕಿದೆ. ಈ ಗ್ಯಾರಂಟಿಗಳ ಜಾರಿಯ ಕಾರಣಕ್ಕೆ ಈ ಬಾರಿ ಶಾಸಕರ ವಿಶೇಷ ಅನುದಾನಕ್ಕೆ ಕತ್ತರಿ ಬೀಳುವ ಸಾಧ್ಯತೆಯಿದೆ. ಇದು ಕೂಡಾ ಕೆಲವು ಶಾಸಕರ ಕೋಪಕ್ಕೆ ಕಾರಣವಾಗಿದೆ. ವಿಶೇಷ ಅನುದಾನ ನೀಡದೇ ಇದ್ದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾದರೂ ಹೇಗೆ ಎಂದು ಪ್ರಶ್ನಿಸಲು ಕೆಲವರು ತೀರ್ಮಾನಿಸಿದ್ದಾರೆ ಎಂದೂ ಗೊತ್ತಾಗಿದೆ.