<p><strong>ಬೆಂಗಳೂರು:</strong>ಕಾಂಗ್ರೆಸ್ ಹಿರಿಯ ನಾಯಕರ ಜೊತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಭಾನುವಾರ ಒನ್ ಟು ಒನ್ ಸಭೆ ನಡೆಸಿ ಐವತ್ತಕ್ಕೂ ಹೆಚ್ಚು ಮುಖಂಡರಿಂದ ಅಭಿಪ್ರಾಯ ಸಂಗ್ರಹ ನಡೆಸಿದ್ದಾರೆ. ನಾಯಕರು ಒಬ್ಬೊಬ್ಬರಾಗಿಬಂದು ಮಿಸ್ತ್ರಿ ಮುಂದೆ ತಮ್ಮ ಅಭಿಪ್ರಾಯ ಮಂಡಿಸಿದರು.</p>.<p>ಶಾಸಕ ಎಂ.ಬಿ.ಪಾಟೀಲ, ಎಚ್.ಕೆ ಪಾಟೀಲ, ರಮಾನಾಥ್ ರೈ, ಕೃಷ್ಣಭೈರೇಗೌಡ, ಈಶ್ವರ್ ಖಂಡ್ರೆ, ಎಸ್.ಆರ್.ಪಾಟೀಲ, ಐವಾನ್ ಡಿಸೋಜಾ, ಬೈರತಿ ಸುರೇಶ್, ಜಮಿರ್ ಅಹ್ಮದ್, ಕೆ.ಬಿ ಕೋಳಿವಾಡ, ಅಶೋಕ್ ಪಟ್ಟಣ್, ರಿಜ್ವಾನ್ ಅರ್ಷದ್, ಹರಿಹರ ರಾಮಪ್ಪ, ಕಂಪ್ಲಿ ಗಣೇಶ್ ಸೇರಿದಂತೆ ಹಲವರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/stateregional/clp-leader-671675.html" target="_blank">ವಿಪಕ್ಷ ಸ್ಥಾನ: ಸಿದ್ದರಾಮಯ್ಯ, ಎಚ್ಕೆ ನಡುವೆ ಪೈಪೋಟಿ</a></p>.<p>ಮೊದಲೇ ಪ್ರಶ್ನಾವಳಿಗಳನ್ನು ಸಿದ್ದಪಡಿಸಿಕೊಂಡಿದ್ದ ಮಧುಸೂದನ್ ಮಿಸ್ತ್ರಿ, ಹಲವು ಪ್ರಶ್ನೆಗಳೊಂದಿಗೆ ಮುಖಾಮುಖಿ ಚರ್ಚೆ ನಡೆಸಿದ್ದಾರೆ.</p>.<p>ವಿಧಾಸಭೆ, ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ, ಉಪನಾಯಕ, ಮುಖ್ಯ ಸಚೇತಕ ಸ್ಥಾನಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆಯೂ ಒನ್ ಟು ಒನ್ ಚರ್ಚೆ ನಡೆಸಿದ್ದಾರೆ.<br />ಈ ಚರ್ಚೆಯಲ್ಲಿ ಸಿದ್ದರಾಮಯ್ಯ ಬಗ್ಗೆಯೇ ಬಹುತೇಕ ಶಾಸಕರು, ಮುಖಂಡರು ಒಲವು ವ್ಯಕ್ತಪಡಿಸಿದ್ದಾರೆ</p>.<p>ಸಿದ್ದರಾಮಯ್ಯಗೆ ವಿರೋಧ ಪಕ್ಷ ನಾಯಕ ಸ್ಥಾನ ನೀಡದಂತೆ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದಿದ್ದ ನಾಯಕರಿಂದ ವಿರೋಧ ವ್ಯಕ್ತಪಡಿಸಿದ್ದಾರೆ.ಬಿ.ಕೆ ಹರಿಪ್ರಸಾದ್, ಕೆ.ಎಚ್ ಮುನಿಯಪ್ಪವಿರೋಧ ವ್ಯಕ್ತಪಡಿಸಿದ್ದು ಇವರಿಬ್ಬರುಒಟ್ಟಿಗೆ ತೆರಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p>.<p>ಸಿದ್ದರಾಮಯ್ಯ ಸರ್ವಾಧಿಕಾರಿ ಧೋರಣೆಗೆ ಕಡಿವಾಣ ಹಾಕಬೇಕು. ವಿರೋಧ ಪಕ್ಷ ಸ್ಥಾನವನ್ನ ಸಿದ್ದರಾಮಯ್ಯ ಬದಲಿಗೆ ಬೇರೆಯವರಿಗೆ ಕೊಡಿ. ಈಗಲೇ ಸಿದ್ದರಾಮಯ್ಯಗೆ ಕಡಿವಾಣ ಹಾಕಿ. ಇಲ್ಲದೇ ಇದ್ದಲ್ಲಿ ಮುಂಬರುವ ದಿನಗಳಲ್ಲಿ ಪಕ್ಷ ಇನ್ನಷ್ಟು ಸಂಕಷ್ಟ ಎದುರಿಸಬೇಕಾಗುತ್ತೆ ಎಂದು ಇವರು ಹೇಳಿದ್ದಾರೆ.<br />ಕೆ.ಬಿ ಕೋಳಿವಾಡ ಕೂಡ<a href="https://www.prajavani.net/tags/siddaramaiah"> ಸಿದ್ದರಾಮಯ್ಯ</a><a href="https://www.prajavani.net/tags/siddaramaiah" target="_blank">ಗೆ </a>ವಿರೋಧ ಪಕ್ಷ ಸ್ಥಾನ ನೀಡದಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p>.<p>ನಿಮ್ಮ ಅಭಿಪ್ರಾಯವನ್ನ ಹೈಕಮಾಂಡ್ ಗೆ ತಲುಪಿಸುತ್ತೇನೆ ಎಂದು ಮಿಸ್ತ್ರಿ ಭರವಸೆ ನೀಡಿದ್ದಾರೆ</p>.<p>ಮಧುಸೂದನ್ ಮಿಸ್ತ್ರಿ ಮುಂದೆ ತಮ್ಮ ಅಭಿಪ್ರಾಯ ಹೇಳಲು ಶಾಸಕ ಪಿ.ಟಿ ಪರಮೇಶ್ವರ್ ನಾಯಕ್ ಬಂದಿದ್ದರು. ಆದರೆ, ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ, ನೀವು ಯಾಕೆ ಇಲ್ಲಿಗೆ ಬಂದಿರಿ ಎಂದು ಮಿಸ್ತ್ರಿ ನೇರಾವಾಗಿಯೇ ಕೇಳಿದ್ದಾರೆ.</p>.<p>ನಿಮ್ಮ ಹೆಸರಿಲ್ಲ ಹೊರಗೆ ಹೋಗಿ ಎಂದು ಮಿಸ್ತ್ರಿ ಹೇಳಿದಾಗ ಪಟ್ಟಿಯನ್ನು ಎಸೆದು ಹೊರ ಬಂದಿದ್ದಾರೆ ಪರಮೇಶ್ವರ್ ನಾಯಕ್.</p>.<p>ಪರಮೇಶ್ವರ್ ನಾಯಕ್ ಹೊರಹೋಗುತ್ತಿದ್ದಂತೆ, ಶಾಸಕ ಜಮೀರ್ ಅಹಮ್ಮದ್ ನೇತೃತ್ವದಲ್ಲಿ ಸಿದ್ದರಾಮಯ್ಯ ಬಣದ ಶಾಸಕರು ಸಹಿ ಸಂಗ್ರಹಿಸಿದ್ದಾರೆ.</p>.<p><strong>ಎಚ್.ಹನುಮಂತಪ್ಪ ಅವರಿಂದ ಕೆಪಿಸಿಸಿ ಕಚೇರಿ ಎದುರು ಮೌನ ಪ್ರತಿಭಟನೆ</strong></p>.<p>ಕಾಂಗ್ರೆಸ್ ಪಕ್ಷ ಉಳಿಸುವಂತೆ ರಾಜ್ಯಸಭಾ ಮಾಜಿ ಸದಸ್ಯ, ಚಿತ್ರದುರ್ಗದ ಮುಖಂಡ ಎಚ್.ಹನುಮಂತಪ್ಪ ಅವರಿಂದ ಕೆಪಿಸಿಸಿ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದ್ದಾರೆ. </p>.<p>ಕಾಂಗ್ರೆಸ್ ನವರಿಗೆ ಕಾಂಗ್ರೆಸ್ ಉಳಿಸುವ ಬುದ್ಧಿ ಕೊಡು ಭಗವಂತ ಎಂಬ ಬ್ಯಾನರ್ ಹಾಕಿಕೊಂಡು ಮೌನ ಪ್ರತಿಭಟನೆ ನಡೆಸಿದ ಅವರು ಕಾಂಗ್ರೆಸ್ನಲ್ಲಿ ಬಣ ರಾಜಕಾರಣ ನಿಲ್ಲಿಸಿ ಎಂದು ಒತ್ತಾಯಿಸಿದ್ದಾರೆ.</p>.<p>ಸಬ್ ಕೋ ಸನ್ಮತಿ ದೇ ಭಗವಾನ್ ಎಂಬ ಗಾಂಧೀಜಿಯವರ ಹೇಳಿಕೆ ಮೂಲಕ ಮೌನ ಪ್ರತಿಭಟನೆ ನಡೆಸಿದ್ದಾರೆ ಹನುಮಂತಪ್ಪ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ಕಾಂಗ್ರೆಸ್ ಹಿರಿಯ ನಾಯಕರ ಜೊತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಭಾನುವಾರ ಒನ್ ಟು ಒನ್ ಸಭೆ ನಡೆಸಿ ಐವತ್ತಕ್ಕೂ ಹೆಚ್ಚು ಮುಖಂಡರಿಂದ ಅಭಿಪ್ರಾಯ ಸಂಗ್ರಹ ನಡೆಸಿದ್ದಾರೆ. ನಾಯಕರು ಒಬ್ಬೊಬ್ಬರಾಗಿಬಂದು ಮಿಸ್ತ್ರಿ ಮುಂದೆ ತಮ್ಮ ಅಭಿಪ್ರಾಯ ಮಂಡಿಸಿದರು.</p>.<p>ಶಾಸಕ ಎಂ.ಬಿ.ಪಾಟೀಲ, ಎಚ್.ಕೆ ಪಾಟೀಲ, ರಮಾನಾಥ್ ರೈ, ಕೃಷ್ಣಭೈರೇಗೌಡ, ಈಶ್ವರ್ ಖಂಡ್ರೆ, ಎಸ್.ಆರ್.ಪಾಟೀಲ, ಐವಾನ್ ಡಿಸೋಜಾ, ಬೈರತಿ ಸುರೇಶ್, ಜಮಿರ್ ಅಹ್ಮದ್, ಕೆ.ಬಿ ಕೋಳಿವಾಡ, ಅಶೋಕ್ ಪಟ್ಟಣ್, ರಿಜ್ವಾನ್ ಅರ್ಷದ್, ಹರಿಹರ ರಾಮಪ್ಪ, ಕಂಪ್ಲಿ ಗಣೇಶ್ ಸೇರಿದಂತೆ ಹಲವರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/stateregional/clp-leader-671675.html" target="_blank">ವಿಪಕ್ಷ ಸ್ಥಾನ: ಸಿದ್ದರಾಮಯ್ಯ, ಎಚ್ಕೆ ನಡುವೆ ಪೈಪೋಟಿ</a></p>.<p>ಮೊದಲೇ ಪ್ರಶ್ನಾವಳಿಗಳನ್ನು ಸಿದ್ದಪಡಿಸಿಕೊಂಡಿದ್ದ ಮಧುಸೂದನ್ ಮಿಸ್ತ್ರಿ, ಹಲವು ಪ್ರಶ್ನೆಗಳೊಂದಿಗೆ ಮುಖಾಮುಖಿ ಚರ್ಚೆ ನಡೆಸಿದ್ದಾರೆ.</p>.<p>ವಿಧಾಸಭೆ, ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ, ಉಪನಾಯಕ, ಮುಖ್ಯ ಸಚೇತಕ ಸ್ಥಾನಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆಯೂ ಒನ್ ಟು ಒನ್ ಚರ್ಚೆ ನಡೆಸಿದ್ದಾರೆ.<br />ಈ ಚರ್ಚೆಯಲ್ಲಿ ಸಿದ್ದರಾಮಯ್ಯ ಬಗ್ಗೆಯೇ ಬಹುತೇಕ ಶಾಸಕರು, ಮುಖಂಡರು ಒಲವು ವ್ಯಕ್ತಪಡಿಸಿದ್ದಾರೆ</p>.<p>ಸಿದ್ದರಾಮಯ್ಯಗೆ ವಿರೋಧ ಪಕ್ಷ ನಾಯಕ ಸ್ಥಾನ ನೀಡದಂತೆ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದಿದ್ದ ನಾಯಕರಿಂದ ವಿರೋಧ ವ್ಯಕ್ತಪಡಿಸಿದ್ದಾರೆ.ಬಿ.ಕೆ ಹರಿಪ್ರಸಾದ್, ಕೆ.ಎಚ್ ಮುನಿಯಪ್ಪವಿರೋಧ ವ್ಯಕ್ತಪಡಿಸಿದ್ದು ಇವರಿಬ್ಬರುಒಟ್ಟಿಗೆ ತೆರಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p>.<p>ಸಿದ್ದರಾಮಯ್ಯ ಸರ್ವಾಧಿಕಾರಿ ಧೋರಣೆಗೆ ಕಡಿವಾಣ ಹಾಕಬೇಕು. ವಿರೋಧ ಪಕ್ಷ ಸ್ಥಾನವನ್ನ ಸಿದ್ದರಾಮಯ್ಯ ಬದಲಿಗೆ ಬೇರೆಯವರಿಗೆ ಕೊಡಿ. ಈಗಲೇ ಸಿದ್ದರಾಮಯ್ಯಗೆ ಕಡಿವಾಣ ಹಾಕಿ. ಇಲ್ಲದೇ ಇದ್ದಲ್ಲಿ ಮುಂಬರುವ ದಿನಗಳಲ್ಲಿ ಪಕ್ಷ ಇನ್ನಷ್ಟು ಸಂಕಷ್ಟ ಎದುರಿಸಬೇಕಾಗುತ್ತೆ ಎಂದು ಇವರು ಹೇಳಿದ್ದಾರೆ.<br />ಕೆ.ಬಿ ಕೋಳಿವಾಡ ಕೂಡ<a href="https://www.prajavani.net/tags/siddaramaiah"> ಸಿದ್ದರಾಮಯ್ಯ</a><a href="https://www.prajavani.net/tags/siddaramaiah" target="_blank">ಗೆ </a>ವಿರೋಧ ಪಕ್ಷ ಸ್ಥಾನ ನೀಡದಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p>.<p>ನಿಮ್ಮ ಅಭಿಪ್ರಾಯವನ್ನ ಹೈಕಮಾಂಡ್ ಗೆ ತಲುಪಿಸುತ್ತೇನೆ ಎಂದು ಮಿಸ್ತ್ರಿ ಭರವಸೆ ನೀಡಿದ್ದಾರೆ</p>.<p>ಮಧುಸೂದನ್ ಮಿಸ್ತ್ರಿ ಮುಂದೆ ತಮ್ಮ ಅಭಿಪ್ರಾಯ ಹೇಳಲು ಶಾಸಕ ಪಿ.ಟಿ ಪರಮೇಶ್ವರ್ ನಾಯಕ್ ಬಂದಿದ್ದರು. ಆದರೆ, ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ, ನೀವು ಯಾಕೆ ಇಲ್ಲಿಗೆ ಬಂದಿರಿ ಎಂದು ಮಿಸ್ತ್ರಿ ನೇರಾವಾಗಿಯೇ ಕೇಳಿದ್ದಾರೆ.</p>.<p>ನಿಮ್ಮ ಹೆಸರಿಲ್ಲ ಹೊರಗೆ ಹೋಗಿ ಎಂದು ಮಿಸ್ತ್ರಿ ಹೇಳಿದಾಗ ಪಟ್ಟಿಯನ್ನು ಎಸೆದು ಹೊರ ಬಂದಿದ್ದಾರೆ ಪರಮೇಶ್ವರ್ ನಾಯಕ್.</p>.<p>ಪರಮೇಶ್ವರ್ ನಾಯಕ್ ಹೊರಹೋಗುತ್ತಿದ್ದಂತೆ, ಶಾಸಕ ಜಮೀರ್ ಅಹಮ್ಮದ್ ನೇತೃತ್ವದಲ್ಲಿ ಸಿದ್ದರಾಮಯ್ಯ ಬಣದ ಶಾಸಕರು ಸಹಿ ಸಂಗ್ರಹಿಸಿದ್ದಾರೆ.</p>.<p><strong>ಎಚ್.ಹನುಮಂತಪ್ಪ ಅವರಿಂದ ಕೆಪಿಸಿಸಿ ಕಚೇರಿ ಎದುರು ಮೌನ ಪ್ರತಿಭಟನೆ</strong></p>.<p>ಕಾಂಗ್ರೆಸ್ ಪಕ್ಷ ಉಳಿಸುವಂತೆ ರಾಜ್ಯಸಭಾ ಮಾಜಿ ಸದಸ್ಯ, ಚಿತ್ರದುರ್ಗದ ಮುಖಂಡ ಎಚ್.ಹನುಮಂತಪ್ಪ ಅವರಿಂದ ಕೆಪಿಸಿಸಿ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದ್ದಾರೆ. </p>.<p>ಕಾಂಗ್ರೆಸ್ ನವರಿಗೆ ಕಾಂಗ್ರೆಸ್ ಉಳಿಸುವ ಬುದ್ಧಿ ಕೊಡು ಭಗವಂತ ಎಂಬ ಬ್ಯಾನರ್ ಹಾಕಿಕೊಂಡು ಮೌನ ಪ್ರತಿಭಟನೆ ನಡೆಸಿದ ಅವರು ಕಾಂಗ್ರೆಸ್ನಲ್ಲಿ ಬಣ ರಾಜಕಾರಣ ನಿಲ್ಲಿಸಿ ಎಂದು ಒತ್ತಾಯಿಸಿದ್ದಾರೆ.</p>.<p>ಸಬ್ ಕೋ ಸನ್ಮತಿ ದೇ ಭಗವಾನ್ ಎಂಬ ಗಾಂಧೀಜಿಯವರ ಹೇಳಿಕೆ ಮೂಲಕ ಮೌನ ಪ್ರತಿಭಟನೆ ನಡೆಸಿದ್ದಾರೆ ಹನುಮಂತಪ್ಪ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>