‘ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ, ಮಂತ್ರಿ ಆದವರೆಲ್ಲ ಬಿಜೆಪಿಗೆ ಹೋಗುತ್ತಿದ್ದಾರೆ. ಅವರಿಗೆ ಇ.ಡಿ, ಐಟಿ, ಮೋದಿಯವರು ಹೆದರಿಸುತ್ತಿದ್ದಾರೆ. ಅನೇಕ ರಾಜ್ಯಗಳಲ್ಲಿ ಸರ್ಕಾರವನ್ನು ಕೆಡವಿದ್ದಾರೆ. ಒಂದು ಪಕ್ಷದಿಂದ ಆಯ್ಕೆಯಾದವರಿಗೆ ಒಂದು ತತ್ವದ ಮೇಲೆ ನಂಬಿಕೆ ಇಲ್ಲದ ಕಾರಣ ಹೀಗಾಗುತ್ತಿದೆ. 30–40 ವರ್ಷ ಕಾಂಗ್ರೆಸ್ನಲ್ಲಿದ್ದ ಕೆಲವರು ಅಧಿಕಾರದ ಆಸೆಗೆ, ಮತ್ತೆ ಕೆಲವರು ಹಣಕ್ಕಾಗಿ ಬಿಜೆಪಿಗೆ ಹೋಗುತ್ತಿದ್ದಾರೆ. ಯಾರಲ್ಲಿ ಧೈರ್ಯ ಇರುವುದಿಲ್ಲವೋ ಅವರು ಎಂದೂ ಉದ್ಧಾರ ಆಗುವುದಿಲ್ಲ. ಆ ಸಮಾಜವೂ ಉದ್ಧಾರ ಆಗುವುದಿಲ್ಲ’ ಎಂದು ಪಕ್ಷ ತೊರೆಯುತ್ತಿರುವ ಮುಖಂಡರ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.