ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಅಧಿವೇಶನದಲ್ಲಿ ಅನೇಕ ವಿಚಾರಗಳನ್ನು ಚರ್ಚೆ ಅವಕಾಶ ಕೊಡಲಿಲ್ಲಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
1700 ಪ್ರಶ್ನೆ ಕೇಳಿದ್ದೆವು. ಯಾವುದಕ್ಕೂ ಸರಿಯಾಗಿ ಉತ್ತರ ಇಲ್ಲ. ವಿವರವಾಗಿ ಚರ್ಚೆ ಮಾಡಲು ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ದೂರಿದರು.
ಸರ್ಕಾರದಲ್ಲಿ ಹೊಡೆದಾಟಗಳು ನಡೆಯುತ್ತಿದೆ, ಯಾರನ್ನು ಮೇಲಕ್ಕೆ ಏರಿಸಬೇಕು, ಯಾರನ್ನು ಇಳಿಸಬೇಕು ಎಂದು ನಡೆಯುತ್ತಿದೆ ಎಂದರು.
ರೈತರನ್ನೇ ಮಾರುತ್ತಿದ್ದಾರೆ, ರೈತರ ಭೂಮಿ ಮಾರುತ್ತಿದ್ದಾರೆ. ಎಲ್ಲವನ್ನು ಅಂತರರಾಷ್ಟ್ರೀಯ ಕಂಪನಿಗಳಿಗೆ ಮಾರುತ್ತಿದ್ದಾರೆ ಎಂದೂ ದೂರಿದರು.