ಕುಟುಂಬದ ಸದಸ್ಯರ ಆಶಯದಂತೆ ದೇವಲಾಪುರ ಹ್ಯಾಂಡ್ಪೋಸ್ಟ್ ಬಳಿ ಇದ್ದ 30X40 ಅಳತೆಯ ನಿವೇಶನವನ್ನು ₹ 3 ಲಕ್ಷಕ್ಕೆ ಹಾಗೂ ತೋಟದಲ್ಲಿ ಬೆಳೆದಿದ್ದ ತೆಂಗನ್ನು ₹ 1 ಲಕ್ಷಕ್ಕೆ ಮಾರಿ ಬಂದ ಹಣದಿಂದ ಕಡುಬಡವರಿಗೆ ನೆರವಾಗಿದ್ದಾರೆ. ದಿನ ನಿತ್ಯದ ಬಳಕೆಗೆ ಬೇಕಾದ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಕಡಲೆಕಾಳು ಸೇರಿದಂತೆ 8 ಅಗತ್ಯ ವಸ್ತುಗಳನ್ನು ಒಳಗೊಂಡ 500 ದಿನಸಿ ಕಿಟ್ಗಳನ್ನು ತಾಲ್ಲೂಕಿನ ವಿವಿಧ ಗ್ರಾಮಗಳ ಮತ್ತು ಪಟ್ಟಣದ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿರುವ ಅತಿ ಬಡವರನ್ನು ಗುರುತಿಸಿ ಹಂಚಿದ್ದಾರೆ.