ಸೋಂಕಿತರಲ್ಲಿ ಬಹುತೇಕರು ಗುಣಮುಖರಾಗುತ್ತಿದ್ದಾರೆ. ಕೋವಿಡ್ ಪೀಡಿತರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಸಮಾಜದ ಬೆಂಬಲ ಅತ್ಯವಶ್ಯಕ. ಕಾಯಿಲೆ ವಾಸಿಯಾದ ಬಳಿಕ ವ್ಯಕ್ತಿಯ ಜತೆಗೆ ಮೊದಲಿನಂತೆಯೇ ಮಾತನಾಡಬಹುದಾಗಿದ್ದು, ಅದು ಸುರಕ್ಷಿತವಾಗಿರುತ್ತದೆ. ರೋಗದಿಂದ ಗುಣಮುಖರಾದವರನ್ನು ಸಾಮಾಜಿಕವಾಗಿ ಪ್ರತ್ಯೇಕಿಸುವುದು ಅವೈಜ್ಞಾನಿಕ ಮತ್ತು ಅಮಾನವೀಯ. ವೈರಾಣು ಮತ್ತು ರೋಗದ ಬಗ್ಗೆ ಅನಗತ್ಯವಾಗಿ ಭಯ ಮತ್ತು ಗಾಬರಿ ಹುಟ್ಟಿಸಬಾರದು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಶ್ರಮಿಸುತ್ತಿರುವಆರೋಗ್ಯ ಮತ್ತು ಪೊಲೀಸ್ ಸಿಬ್ಬಂದಿ, ಪೌರಕಾರ್ಮಿಕರನ್ನು ನಿಂದಿಸಬಾರದು ಎಂದು ಇಲಾಖೆ ತಿಳಿಸಿದೆ.