<p><strong>ಬೆಳಗಾವಿ:</strong> 'ಸಿದ್ದರಾಮಯ್ಯ ಬಿಟ್ಟು ಮತ್ತೊಬ್ಬರು ಮುಖ್ಯಮಂತ್ರಿಯಾದೆ ಸಾಲದು. ಒಬ್ಬ ಭ್ರಷ್ಟ ಹೋದರೆ, ಮತ್ತೊಬ್ಬ ಭ್ರಷ್ಟ ಬರುತ್ತಾರೆ. ಹಾಗಾಗಿ ಕಾಂಗ್ರೆಸ್ ಪಕ್ಷವೇ ಅಧಿಕಾರದಿಂದ ಇಳಿಯಬೇಕಿದೆ' ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.</p><p>ನವೆಂಬರ್ ಕ್ರಾಂತಿ ವಿಚಾರವಾಗಿ, ಇಲ್ಲಿ ಶುಕ್ರವಾರ ಸುದ್ದಿಗಾರರಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.</p>.ಸಿದ್ದರಾಮಯ್ಯ ಮಾತು ಬದಲಿಸುವ ವ್ಯಕ್ತಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ.<p>'ಸಿದ್ದರಾಮಯ್ಯ ಪದೇಪದೆ ನಾನೇ ಸಿ.ಎಂ ಎನ್ನುತ್ತಿದ್ದಾರೆ. ತಮ್ಮ ಪಕ್ಷದ ಹೈಕಮಾಂಡ್ ಸೆಡ್ಡು ಹೊಡೆದಿದ್ದಾರೆ. ಆ ಹೈಕಮಾಂಡ್ ಈಗ ವೀಕ್ ಆಗಿದೆ' ಎಂದು ಲೇವಡಿ ಮಾಡಿದರು.</p><p>'ಈ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿ, ನಾನು ಮುಖ್ಯಮಂತ್ರಿ ಎಂಬ ಮಾತು ಶುರುವಾಗಿದೆ. ನಮಗೆ ಯಾರು ಮುಖ್ಯಮಂತ್ರಿ ಎಂಬುದು ಮುಖ್ಯವಲ್ಲ. ಜನ ಅಧಿಕಾರ ನೀಡಿದ್ದಾರೆ. ಮೊದಲು ಅವರ ಸಂಕಷ್ಟಕ್ಕೆ ಸ್ಪಂದಿಸಿ' ಎಂದರು.</p>.ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿ.ಎಂ, ವರ್ಷಾಂತ್ಯದಲ್ಲಿ ಕ್ರಾಂತಿ ನಿಶ್ಚಿತ: ಅಶೋಕ.<p>'ಭ್ರಷ್ಟಾಚಾರ ಎಂಬುದು ಕಾಂಗ್ರೆಸ್ ಡಿಎನ್ಎನಲ್ಲೇ ಇದೆ. ಭ್ರಷ್ಟಾಚಾರ ಕಡಿಮೆಯಾಗಬೇಕಾದರೆ ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಬೇಕಾದರೆ ಕಾಂಗ್ರೆಸ್ ಅಧಿಕಾರದಿಂದ ಇಳಿಯಬೇಕಿದೆ' ಎಂದರು.</p><p>'ಇನ್ನೆರಡು ವರ್ಷ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ಡಬಲ್ ಆಗಿದೆ ಎಂದು ಗುತ್ತಿಗೆದಾರರು ಪತ್ರ ಬರೆದಿದ್ದಾರೆ. ಭ್ರಷ್ಟಾಚಾರಕ್ಕಾಗಿ ನೀವು ಮುಖ್ಯಮಂತ್ರಿ ಆಗಿದ್ದೀರಾ? ಗುತ್ತಿಗೆದಾರರ ಪತ್ರ ಓದಿ ನಾಚಿಕೆ ಆಗುವುದಿಲ್ಲವೇ' ಎಂದು ವ್ಯಂಗ್ಯವಾಡಿದರು.</p>.Karnataka Politics | ಎರಡೂವರೆ ವರ್ಷ ನಾನೇ ಸಿ.ಎಂ: ಸಿದ್ದರಾಮಯ್ಯ.<p>'ಜನರ ಸಂಪರ್ಕ ಕಳೆದುಕೊಂಡಿರುವ ಕೆಲವು ಸಚಿವರು ಸಹಕಾರ ಸಂಘಗಳ ಚುನಾವಣೆಯಲ್ಲಿ ಮುಳುಗಿದ್ದಾರೆ. ಅವರಿಗೆ ಜನರ ಸಂಕಷ್ಟ ಆಲಿಸುವ ಸಂವೇದನೆ ಇಲ್ಲ. ಚುನಾವಣೆಗಳು ಮುಗಿದ ನಂತರವಾದರೂ ಜನರ ಕಷ್ಟಕ್ಕೆ ಸ್ಪಂದಿಸಲಿ' ಎಂದು ಆಗ್ರಹಿಸಿದರು.</p> .ಕಾಯ್ದಿರಿಸಿದ ಸಮಯ.. ಸಿಎಂ ಸಿದ್ದರಾಮಯ್ಯ ಟಿಪಿ ಬಗ್ಗೆ ಯತ್ನಾಳ ಟೀಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> 'ಸಿದ್ದರಾಮಯ್ಯ ಬಿಟ್ಟು ಮತ್ತೊಬ್ಬರು ಮುಖ್ಯಮಂತ್ರಿಯಾದೆ ಸಾಲದು. ಒಬ್ಬ ಭ್ರಷ್ಟ ಹೋದರೆ, ಮತ್ತೊಬ್ಬ ಭ್ರಷ್ಟ ಬರುತ್ತಾರೆ. ಹಾಗಾಗಿ ಕಾಂಗ್ರೆಸ್ ಪಕ್ಷವೇ ಅಧಿಕಾರದಿಂದ ಇಳಿಯಬೇಕಿದೆ' ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.</p><p>ನವೆಂಬರ್ ಕ್ರಾಂತಿ ವಿಚಾರವಾಗಿ, ಇಲ್ಲಿ ಶುಕ್ರವಾರ ಸುದ್ದಿಗಾರರಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.</p>.ಸಿದ್ದರಾಮಯ್ಯ ಮಾತು ಬದಲಿಸುವ ವ್ಯಕ್ತಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ.<p>'ಸಿದ್ದರಾಮಯ್ಯ ಪದೇಪದೆ ನಾನೇ ಸಿ.ಎಂ ಎನ್ನುತ್ತಿದ್ದಾರೆ. ತಮ್ಮ ಪಕ್ಷದ ಹೈಕಮಾಂಡ್ ಸೆಡ್ಡು ಹೊಡೆದಿದ್ದಾರೆ. ಆ ಹೈಕಮಾಂಡ್ ಈಗ ವೀಕ್ ಆಗಿದೆ' ಎಂದು ಲೇವಡಿ ಮಾಡಿದರು.</p><p>'ಈ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿ, ನಾನು ಮುಖ್ಯಮಂತ್ರಿ ಎಂಬ ಮಾತು ಶುರುವಾಗಿದೆ. ನಮಗೆ ಯಾರು ಮುಖ್ಯಮಂತ್ರಿ ಎಂಬುದು ಮುಖ್ಯವಲ್ಲ. ಜನ ಅಧಿಕಾರ ನೀಡಿದ್ದಾರೆ. ಮೊದಲು ಅವರ ಸಂಕಷ್ಟಕ್ಕೆ ಸ್ಪಂದಿಸಿ' ಎಂದರು.</p>.ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿ.ಎಂ, ವರ್ಷಾಂತ್ಯದಲ್ಲಿ ಕ್ರಾಂತಿ ನಿಶ್ಚಿತ: ಅಶೋಕ.<p>'ಭ್ರಷ್ಟಾಚಾರ ಎಂಬುದು ಕಾಂಗ್ರೆಸ್ ಡಿಎನ್ಎನಲ್ಲೇ ಇದೆ. ಭ್ರಷ್ಟಾಚಾರ ಕಡಿಮೆಯಾಗಬೇಕಾದರೆ ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಬೇಕಾದರೆ ಕಾಂಗ್ರೆಸ್ ಅಧಿಕಾರದಿಂದ ಇಳಿಯಬೇಕಿದೆ' ಎಂದರು.</p><p>'ಇನ್ನೆರಡು ವರ್ಷ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ಡಬಲ್ ಆಗಿದೆ ಎಂದು ಗುತ್ತಿಗೆದಾರರು ಪತ್ರ ಬರೆದಿದ್ದಾರೆ. ಭ್ರಷ್ಟಾಚಾರಕ್ಕಾಗಿ ನೀವು ಮುಖ್ಯಮಂತ್ರಿ ಆಗಿದ್ದೀರಾ? ಗುತ್ತಿಗೆದಾರರ ಪತ್ರ ಓದಿ ನಾಚಿಕೆ ಆಗುವುದಿಲ್ಲವೇ' ಎಂದು ವ್ಯಂಗ್ಯವಾಡಿದರು.</p>.Karnataka Politics | ಎರಡೂವರೆ ವರ್ಷ ನಾನೇ ಸಿ.ಎಂ: ಸಿದ್ದರಾಮಯ್ಯ.<p>'ಜನರ ಸಂಪರ್ಕ ಕಳೆದುಕೊಂಡಿರುವ ಕೆಲವು ಸಚಿವರು ಸಹಕಾರ ಸಂಘಗಳ ಚುನಾವಣೆಯಲ್ಲಿ ಮುಳುಗಿದ್ದಾರೆ. ಅವರಿಗೆ ಜನರ ಸಂಕಷ್ಟ ಆಲಿಸುವ ಸಂವೇದನೆ ಇಲ್ಲ. ಚುನಾವಣೆಗಳು ಮುಗಿದ ನಂತರವಾದರೂ ಜನರ ಕಷ್ಟಕ್ಕೆ ಸ್ಪಂದಿಸಲಿ' ಎಂದು ಆಗ್ರಹಿಸಿದರು.</p> .ಕಾಯ್ದಿರಿಸಿದ ಸಮಯ.. ಸಿಎಂ ಸಿದ್ದರಾಮಯ್ಯ ಟಿಪಿ ಬಗ್ಗೆ ಯತ್ನಾಳ ಟೀಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>