<p><strong>ಚೆನ್ನೈ</strong>: ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್ಎಸ್ಎಸ್) ಶತಮಾನೋತ್ಸವದ ಹಿನ್ನೆಲೆಯಲ್ಲಿ ವಿಶೇಷ ಅಂಚೆ ಚೀಟಿ ಮತ್ತು ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಿರುವುದನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಖಂಡಿಸಿದ್ದಾರೆ.</p><p>ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ಮಾಡಿದ ಕೋಮುವಾದಿ ಅಂಶದ ಚಿಂತನೆಯನ್ನು ರೂಪಿಸಿದ ಸಂಘಟನೆಯ ಶತಮಾನೋತ್ಸವವನ್ನು ಆಚರಿಸುವ ದಯನೀಯ ಸ್ಥಿತಿಯಿಂದ ಭಾರತವನ್ನು ರಕ್ಷಿಸಬೇಕು ಎಂದಿದ್ದಾರೆ.</p><p>ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಅವರು, ಭಾರತ ಒಂದು ಜಾತ್ಯತೀತ ದೇಶ. ಮಹಾತ್ಮ ಗಾಂಧಿ ಅದಕ್ಕೆ ಮೂಲ ತತ್ವವನ್ನು ಬಿತ್ತಿದ್ದರು ಎಂದು ಹೇಳಿದ್ದಾರೆ.</p><p>'ವಿಭಜಕ ಶಕ್ತಿಗಳು ಜನರಲ್ಲಿ ದ್ವೇಷದ ಬೀಜಗಳನ್ನು ಬಿತ್ತಿದಾಗಲೆಲ್ಲ ಅವುಗಳನ್ನು ಎದುರಿಸಲು ನಮಗೆ ಗಾಂಧೀಜಿ ತತ್ವಗಳು ಶಕ್ತಿಯನ್ನು ಒದಗಿಸುತ್ತದೆ’ಎಂದು ಸ್ಟಾಲಿನ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.</p><p>‘ದೇಶದ ನಾಯಕತ್ವದ ಉಸ್ತುವಾರಿ ವಹಿಸಿರುವವರು (ಪ್ರಧಾನಿ) ರಾಷ್ಟ್ರಪಿತನನ್ನು ಕೊಂದವನಿಗೆ ಕೋಮುವಾದಿ ಚಿಂತನೆ ತುಂಬಿದ್ದ ಆರ್ಎಸ್ಎಸ್ ಚಳವಳಿಯ ಶತಮಾನೋತ್ಸವದಂದು ವಿಶೇಷ ಅಂಚೆ ಚೀಟಿಗಳು ಮತ್ತು ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡುವ ದಯನೀಯ ಸ್ಥಿತಿಯಿಂದ ಭಾರತವನ್ನು ರಕ್ಷಿಸಬೇಕು’ಎಂದು ಮುಖ್ಯಮಂತ್ರಿ ಹೇಳಿದ್ದಾರೆ.</p><p>ಗಾಂಧಿ ಜಯಂತಿಯಂದು ದೇಶದ ಎಲ್ಲಾ ಜನರು ತೆಗೆದುಕೊಳ್ಳಬೇಕಾದ ಪ್ರತಿಜ್ಞೆ ಇದು ಎಂದಿದ್ದಾರೆ.</p><p>ಗಾಂಧಿ ಜಯಂತಿಯ ಮುನ್ನಾದಿನ ಆರ್ಎಸ್ಎಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ₹100 ನಾಣ್ಯ ಬಿಡುಗಡೆ ಮಾಡಿದ್ದರು. </p>.ಶಾಲಾ ಮಕ್ಕಳಿಗೆ ಶೀಘ್ರವೇ ಆರ್ಎಸ್ಎಸ್ ಬಗ್ಗೆ ಬೋಧನೆ: ದೆಹಲಿ ಶಿಕ್ಷಣ ಸಚಿವ.ಆಳ–ಅಗಲ | RSS History: ಆರ್ಎಸ್ಎಸ್ @100.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ</strong>: ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್ಎಸ್ಎಸ್) ಶತಮಾನೋತ್ಸವದ ಹಿನ್ನೆಲೆಯಲ್ಲಿ ವಿಶೇಷ ಅಂಚೆ ಚೀಟಿ ಮತ್ತು ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಿರುವುದನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಖಂಡಿಸಿದ್ದಾರೆ.</p><p>ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ಮಾಡಿದ ಕೋಮುವಾದಿ ಅಂಶದ ಚಿಂತನೆಯನ್ನು ರೂಪಿಸಿದ ಸಂಘಟನೆಯ ಶತಮಾನೋತ್ಸವವನ್ನು ಆಚರಿಸುವ ದಯನೀಯ ಸ್ಥಿತಿಯಿಂದ ಭಾರತವನ್ನು ರಕ್ಷಿಸಬೇಕು ಎಂದಿದ್ದಾರೆ.</p><p>ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಅವರು, ಭಾರತ ಒಂದು ಜಾತ್ಯತೀತ ದೇಶ. ಮಹಾತ್ಮ ಗಾಂಧಿ ಅದಕ್ಕೆ ಮೂಲ ತತ್ವವನ್ನು ಬಿತ್ತಿದ್ದರು ಎಂದು ಹೇಳಿದ್ದಾರೆ.</p><p>'ವಿಭಜಕ ಶಕ್ತಿಗಳು ಜನರಲ್ಲಿ ದ್ವೇಷದ ಬೀಜಗಳನ್ನು ಬಿತ್ತಿದಾಗಲೆಲ್ಲ ಅವುಗಳನ್ನು ಎದುರಿಸಲು ನಮಗೆ ಗಾಂಧೀಜಿ ತತ್ವಗಳು ಶಕ್ತಿಯನ್ನು ಒದಗಿಸುತ್ತದೆ’ಎಂದು ಸ್ಟಾಲಿನ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.</p><p>‘ದೇಶದ ನಾಯಕತ್ವದ ಉಸ್ತುವಾರಿ ವಹಿಸಿರುವವರು (ಪ್ರಧಾನಿ) ರಾಷ್ಟ್ರಪಿತನನ್ನು ಕೊಂದವನಿಗೆ ಕೋಮುವಾದಿ ಚಿಂತನೆ ತುಂಬಿದ್ದ ಆರ್ಎಸ್ಎಸ್ ಚಳವಳಿಯ ಶತಮಾನೋತ್ಸವದಂದು ವಿಶೇಷ ಅಂಚೆ ಚೀಟಿಗಳು ಮತ್ತು ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡುವ ದಯನೀಯ ಸ್ಥಿತಿಯಿಂದ ಭಾರತವನ್ನು ರಕ್ಷಿಸಬೇಕು’ಎಂದು ಮುಖ್ಯಮಂತ್ರಿ ಹೇಳಿದ್ದಾರೆ.</p><p>ಗಾಂಧಿ ಜಯಂತಿಯಂದು ದೇಶದ ಎಲ್ಲಾ ಜನರು ತೆಗೆದುಕೊಳ್ಳಬೇಕಾದ ಪ್ರತಿಜ್ಞೆ ಇದು ಎಂದಿದ್ದಾರೆ.</p><p>ಗಾಂಧಿ ಜಯಂತಿಯ ಮುನ್ನಾದಿನ ಆರ್ಎಸ್ಎಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ₹100 ನಾಣ್ಯ ಬಿಡುಗಡೆ ಮಾಡಿದ್ದರು. </p>.ಶಾಲಾ ಮಕ್ಕಳಿಗೆ ಶೀಘ್ರವೇ ಆರ್ಎಸ್ಎಸ್ ಬಗ್ಗೆ ಬೋಧನೆ: ದೆಹಲಿ ಶಿಕ್ಷಣ ಸಚಿವ.ಆಳ–ಅಗಲ | RSS History: ಆರ್ಎಸ್ಎಸ್ @100.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>