ಪೇಸ್ಬುಕ್ ಮೂಲಕ ಸ್ಪಷ್ಟೀಕರಣ ನೀಡಿರುವ ಅವರು, ‘ರಾಜಕಾರಣದಲ್ಲಿ ಟೀಕೆ–ಟಿಪ್ಪಣಿಗಳು ಸಾಮಾನ್ಯ. ದೇವೇಗೌಡರ ಸಾವನ್ನು ಬಯಸುವ ಕೆಟ್ಟ ಸ್ವಭಾವ ನನ್ನದಲ್ಲ. ಆದರೆ ನನ್ನ ರಾಜಕೀಯ ವಿರೋಧಿಗಳು ನನ್ನ ಹೇಳಿಕೆಯನ್ನು ತಿರುಚಿದ್ದಾರೆ. ನನ್ನ ಮೂಲಕ ₹100 ಕೋಟಿ ಹಣದ ಪ್ರಸ್ತಾಪ ಮತ್ತು ದೇವರಾಜೇಗೌಡರಿಗೆ ಕ್ಯಾಬಿನೆಟ್ ದರ್ಜೆ ನೀಡುವ ಕುರಿತು ನನ್ನ ಧ್ವನಿಯನ್ನು ಮಾರ್ಪಡಿಸಿ ಆಡಿಯೊ ಹರಿ ಬಿಡಲಾಗಿದೆ’ ಎಂದಿದ್ದಾರೆ.