ಪಾವಗಡ (ತುಮಕೂರು):ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಬುಧವಾರ ನಡೆದ ಮತದಾನದ ವೇಳೆ ಇಲ್ಲಿಯ ಮತಗಟ್ಟೆ ಯೊಂದರ ಬಳಿಯೇಮತದಾರರಿಗೆ ರಾಜಾರೋಷವಾಗಿ ಹಣ, ಬ್ಯಾಗ್, ವಾಚ್ ಹಂಚಿದ ಆರೋಪಗಳು ಕೇಳಿಬಂದಿವೆ.
ಪಟ್ಟಣದ ಸರ್ಕಾರಿ ಪಿ.ಯು ಕಾಲೇಜು ಮತಗಟ್ಟೆ ಬಳಿ ಪಕ್ಷೇತರ ಅಭ್ಯರ್ಥಿಯೊಬ್ಬರ ಪರವಾಗಿ ಸರ್ಕಾರಿ ಪದವಿ ಕಾಲೇಜು ಮತ್ತು ಪಿಯು ಕಾಲೇಜು ಉಪನ್ಯಾಸಕರು ಹಣ ಹಂಚಿದರು. ಮತವೊಂದಕ್ಕೆ ₹ 1,500 ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಉಳಿದ ರಾಜಕೀಯ ಪಕ್ಷಗಳ ಬೆಂಬಲಿಗರು ಕೂಡ ಬ್ಯಾಗ್, ಹಣ ಮತ್ತು ವಾಚ್ ಮುಂತಾದ ಉಡುಗೊರೆ ಹಂಚಿದರು. ಮೂರು ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗಿಂತ ಪಕ್ಷೇತರ ಅಭ್ಯರ್ಥಿಯ ಪರವಾಗಿ ಹಣ ಹಂಚಿಕೆ ಅಬ್ಬರ ಜೋರಾಗಿತ್ತು.