'ಮೋದಿ, ಶಾ ನೂರು ಬಾರಿ ರಾಜ್ಯಕ್ಕೆ ಬಂದರೂ ಚುನಾವಣೆಯಲ್ಲಿ ಗೆಲ್ಲುವುದು ಕಾಂಗ್ರೆಸ್' ಎನ್ನುವ ಸಿದ್ದರಾಮಯ್ಯರ ಹೇಳಿಕೆಗೆ, 'ಹಿಂದಿನ ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲೂ ಅವರು ಹಾಗೆ ಹೇಳಿದ್ದರು. ನಂತರ ಆಗಿದ್ದೇನು? ಚುನಾವಣೆ ಸಮೀಪಿಸುತ್ತಿರುವ ಕಾರಣ, ಏನಾದರೂ ಹೇಳಿಕೆ ನೀಡಿ ಪ್ರಚಾರದಲ್ಲಿರಬೇಕು ಎಂದು ಅವರು ಹಾಗೆಲ್ಲ ಹೇಳಿಕೆ ನೀಡುತ್ತಾರೆ' ಎಂದು ಜೋಶಿ ವ್ಯಂಗ್ಯವಾಡಿದರು.