‘ನಾನು ಜಿಲ್ಮಿಲ್ ಕೈಗಾರಿಕಾ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾ ತಯಾರಿಸುವ ಫ್ಯಾಕ್ಟರಿ ಹೊಂದಿದ್ದೇನೆ. ಇದೇ 23ರಂದು ಪೊಲೀಸರಾದ ಸತೀಶ್, ಮುತ್ತುರಾಜ್ ಹಾಗೂ ಬಸವರಾಜ ಪಾಟೀಲ ಎಂಬವರು ನನ್ನ ಬಳಿಗೆ ಬಂದು ಬೆದರಿಕೆ ಹಾಕಿದರು. ನಿಮ್ಮ ವಿರುದ್ಧ ಆರೆಸ್ಟ್ ವಾರೆಂಟ್ ಇದೆ. ನಾವು ಕೇಳಿದಷ್ಟು ಹಣ ನೀಡಿದರೆ ತೊಂದರೆ ಕೊಡುವುದಿಲ್ಲ. ಇಲ್ಲದಿದ್ದರೆ ನಿಮ್ಮ ಫ್ಯಾಕ್ಟರಿ ಬಂದ್ ಮಾಡಿಸುತ್ತೇವೆ ಎಂದು ಬೆದರಿಕೆ ಹಾಕಿದರು. ಹೀಗಾಗಿ, ₹7 ಲಕ್ಷ ನಗದು ಹಾಗೂ ₹13 ಲಕ್ಷವನ್ನು ಚೆಕ್ ಮೂಲಕ ಮಧ್ಯವರ್ತಿ ಮೂಲಕ
ನೀಡುವಂತೆ ಒತ್ತಡ ಹೇರಿದರು. ಸುಳ್ಳು ಆರೋಪ ಹೊರಿಸಿ ಕಿರುಕುಳ ನೀಡಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಪಂಕಜ್ ಜೈನ್ ದೂರಿನಲ್ಲಿ ತಿಳಿಸಿದ್ದಾರೆ. ಸೀಮಾಪುರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.