‘ಜೆಡಿಎಸ್ ಪಕ್ಷದ ಹಾಲಿ ವಿಧಾನ ಪರಿಷತ್ ಸದಸ್ಯರಾದ ನನ್ನ ಅಣ್ಣನ ಕುರಿತು ಮಾನಹಾನಿಸುದ್ದಿ ಪ್ರಸಾರ ಮಾಡುವ ಬಗ್ಗೆ ಮಾಹಿತಿ ಬಂದಿತ್ತು. ನಾನು ಹಾಗೂ ನನ್ನ ಮತ್ತೊಬ್ಬ ಅಣ್ಣ ಅಂಬರೀಶ್, ವಾಹಿನಿಯ ಕಚೇರಿಗೆ ಶನಿವಾರ ರಾತ್ರಿ (ಅಕ್ಟೋಬರ್ 6) ಹೋಗಿದ್ದೆವು. ಅಲ್ಲಿದ್ದ ಸಿಬ್ಬಂದಿ, ತಮ್ಮ ಮುಖ್ಯಸ್ಥರಿಗೆ ಕರೆ ಮಾಡಿಕೊಟ್ಟರು. ‘ರಮೇಶ್ ಗೌಡ ವಿರುದ್ಧ ಕ್ಯಾಂಪೇನ್ ಮಾಡುತ್ತಿದ್ದೇವೆ. ಅದನ್ನು ನಿಲ್ಲಿಸಲು ನಾಳೆ ಬೆಳಿಗ್ಗೆ ₹50 ಲಕ್ಷ ತಂದು ಕೊಡಬೇಕು’ ಎಂದು ಆ ಮುಖ್ಯಸ್ಥ ಸಹ ಬೇಡಿಕೆ ಇಟ್ಟಿದ್ದ’ ಎಂದು ದೂರಿನಲ್ಲಿ ರಾಜೇಶ್ ತಿಳಿಸಿದ್ದಾರೆ.