<p><strong>ಹುಬ್ಬಳ್ಳಿ:</strong> ‘ಉಡಾನ್’ ಯೋಜನೆಯಡಿ ಬೆಂಗಳೂರು–ಕಲಬುರ್ಗಿ–ತಿರುಪತಿ ನಡುವೆ ಶೀಘ್ರದಲ್ಲೇ ‘ಸ್ಟಾರ್ ಏರ್’ ವಿಮಾನ ಸಂಚಾರ ಆರಂಭವಾಗಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಂಜಯ್ ಘೋಡಾವತ್ ತಿಳಿಸಿದರು.</p>.<p>ಹುಬ್ಬಳ್ಳಿ–ಹಿಂಡನ್ ನಡುವೆ ನೇರ ವಿಮಾನಯಾನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರು–ಕಲಬುರ್ಗಿ–ತಿರುಪತಿ ವಿಮಾನಯಾನ ಆರಂಭಕ್ಕೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು.</p>.<p>ಜನವರಿಗೆ ಇನ್ನೂ ಮೂರು ಹೊಸ ವಿಮಾನಗಳು ‘ಸ್ಟಾರ್ ಏರ್’ಗೆ ಸೇರ್ಪಡೆಯಾಗಲಿದೆ. ಈ ವಿಮಾನಗಳು ಹುಬ್ಬಳ್ಳಿ–ಪುಣೆ, ಬೆಳಗಾವಿ–ಇಂದೋರ್, ಬೆಳಗಾವಿ–ಕಿಶನ್ಗಡ, ಬೆಳಗಾವಿ–ನಾಗಪುರ, ಬೆಳಗಾವಿ–ಜೋದ್ಪುರ, ಬೆಳಗಾವಿ–ಜೈಪುರ ನಡುವೆ ಉಡಾನ್ ಯೋಜನೆಯಡಿ ಯಾನ ಆರಂಭಿಸಲಿವೆ ಎಂದು ತಿಳಿಸಿದರು.</p>.<p>ಎರಡು ವರ್ಷದ ಬಳಿಕ ಅಂತರರಾಷ್ಟ್ರೀಯ ವಿಮಾನಯಾನ ಆರಂಭಿಸುವ ಉದ್ದೇಶವಿದೆ ಎಂದು ಅವರು ಹೇಳಿದರು.</p>.<p class="Subhead"><strong>ವಾರ ಪೂರ್ತಿ ಸಂಚಾರ:</strong>ಹುಬ್ಬಳ್ಳಿ–ಹಿಂಡನ್ ನಡುವೆ ಸದ್ಯ ವಾರದಲ್ಲಿ ಮೂರು ದಿನ (ಬುಧವಾರ, ಗುರುವಾರ, ಶನಿವಾರ) ಸಂಚಾರ ಪ್ರಾರಂಭಿಸಿರುವ ವಿಮಾನವೂ ನಾಲ್ಕು ತಿಂಗಳ ಬಳಿಕ ವಾರದ ಎಲ್ಲ ದಿನವೂ ಸಂಚರಿಸಲಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ‘ಉಡಾನ್’ ಯೋಜನೆಯಡಿ ಬೆಂಗಳೂರು–ಕಲಬುರ್ಗಿ–ತಿರುಪತಿ ನಡುವೆ ಶೀಘ್ರದಲ್ಲೇ ‘ಸ್ಟಾರ್ ಏರ್’ ವಿಮಾನ ಸಂಚಾರ ಆರಂಭವಾಗಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಂಜಯ್ ಘೋಡಾವತ್ ತಿಳಿಸಿದರು.</p>.<p>ಹುಬ್ಬಳ್ಳಿ–ಹಿಂಡನ್ ನಡುವೆ ನೇರ ವಿಮಾನಯಾನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರು–ಕಲಬುರ್ಗಿ–ತಿರುಪತಿ ವಿಮಾನಯಾನ ಆರಂಭಕ್ಕೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು.</p>.<p>ಜನವರಿಗೆ ಇನ್ನೂ ಮೂರು ಹೊಸ ವಿಮಾನಗಳು ‘ಸ್ಟಾರ್ ಏರ್’ಗೆ ಸೇರ್ಪಡೆಯಾಗಲಿದೆ. ಈ ವಿಮಾನಗಳು ಹುಬ್ಬಳ್ಳಿ–ಪುಣೆ, ಬೆಳಗಾವಿ–ಇಂದೋರ್, ಬೆಳಗಾವಿ–ಕಿಶನ್ಗಡ, ಬೆಳಗಾವಿ–ನಾಗಪುರ, ಬೆಳಗಾವಿ–ಜೋದ್ಪುರ, ಬೆಳಗಾವಿ–ಜೈಪುರ ನಡುವೆ ಉಡಾನ್ ಯೋಜನೆಯಡಿ ಯಾನ ಆರಂಭಿಸಲಿವೆ ಎಂದು ತಿಳಿಸಿದರು.</p>.<p>ಎರಡು ವರ್ಷದ ಬಳಿಕ ಅಂತರರಾಷ್ಟ್ರೀಯ ವಿಮಾನಯಾನ ಆರಂಭಿಸುವ ಉದ್ದೇಶವಿದೆ ಎಂದು ಅವರು ಹೇಳಿದರು.</p>.<p class="Subhead"><strong>ವಾರ ಪೂರ್ತಿ ಸಂಚಾರ:</strong>ಹುಬ್ಬಳ್ಳಿ–ಹಿಂಡನ್ ನಡುವೆ ಸದ್ಯ ವಾರದಲ್ಲಿ ಮೂರು ದಿನ (ಬುಧವಾರ, ಗುರುವಾರ, ಶನಿವಾರ) ಸಂಚಾರ ಪ್ರಾರಂಭಿಸಿರುವ ವಿಮಾನವೂ ನಾಲ್ಕು ತಿಂಗಳ ಬಳಿಕ ವಾರದ ಎಲ್ಲ ದಿನವೂ ಸಂಚರಿಸಲಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>